ನಿರಂತರ ಬಿರುಗಾಳಿ ಮಳೆ: ತೀರ್ಥಹಳ್ಳಿ,ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Team Udayavani, Jul 26, 2024, 8:29 PM IST
ತೀರ್ಥಹಳ್ಳಿ/ಸಾಗರ: ತಾಲೂಕಿನಾದ್ಯಂತ ಅತಿಯಾದ ಮಳೆ ಹಾಗೂ ಗಾಳಿ ವ್ಯಾಪಕವಾಗಿ ಬೀಸುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ನಾಳೆ ಜುಲೈ 27 (ಶನಿವಾರ) ಎಲ್ಲಾ ಪ್ರಾಥಮಿಕ ಶಾಲೆ,ಪ್ರೌಢಶಾಲೆ,ಪದವಿ ಪೂರ್ವ ಕಾಲೇಜು ,ಪದವಿ ಕಾಲೇಜು ,ಅಂಗನವಾಡಿ ಕೇಂದ್ರಗಳಿಗೆ ರಜೆಯನ್ನು ಘೋಷಿಸಲಾಗಿದೆ.ಮಕ್ಕಳ ಬಗ್ಗೆ ಜಾಗ್ರತೆ ವಹಿಸಲು ಪಾಲಕರಲ್ಲಿ ತಹಶೀಲ್ದಾರ್ ಜಕ್ಕಣ್ಣ ಗೌಡರ್ ವಿನಂತಿಸಿದ್ದಾರೆ.
ಸಾಗರದಲ್ಲೂ ರಜೆ
ಸಾಗರ ತಾಲೂಕಿನಾದ್ಯಂತ ಅತೀ ತೀವ್ರವಾಗಿ ಮಳೆ ಬೀಳುತ್ತಿದ್ದು ಹಾಗೂ ಗಾಳಿಯೂ ಕೂಡ ಜೋರಾಗಿ ಬೀಸುತ್ತಿರುವುದರಿಂದ ಶಾಲಾ ಮಕ್ಕಳ ಹಿತದೃಷ್ಟಿ ಯಿಂದ ಮುಂಜಾಗೃತೆಗಾಗಿ ಶನಿವಾರ ಎಲ್ಲಾ ಪ್ರಾಥಮಿಕ ಶಾಲೆ,ಪ್ರೌಢ ಶಾಲೆ,ಪದವಿ ಪೂರ್ವ ಕಾಲೇಜು,ಪ್ರಥಮ ದರ್ಜೆ ಪದವಿ ಕಾಲೇಜು, ಡಿಪ್ಲೊಮೊ ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.