Renukaswamy ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ
1 ಲಕ್ಷ ರೂ. ನೆರವು ನೀಡಿ ಧೈರ್ಯ ತುಂಬಿದ ನಟ
Team Udayavani, Jul 26, 2024, 11:54 PM IST
ಚಿತ್ರದುರ್ಗ: ನಟ ದರ್ಶನ್ ಮತ್ತು ಗ್ಯಾಂಗ್ನಿಂದ ಹತ್ಯೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಮನೆಗೆ ಶುಕ್ರವಾರ ನಟ ವಿನೋದ್ರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದರು.
ಈ ವೇಳೆ ರೇಣುಕಾಸ್ವಾಮಿ ತಂದೆ, ತಾಯಿ, ಪತ್ನಿ ಜತೆ ಮಾತನಾಡಿ, ನಿಮ್ಮ ಜತೆಗೆ ನಾವಿದ್ದೇವೆ, ಧೈರ್ಯವಾಗಿರಿ ಎಂದರು. ರೇಣುಕಾಸ್ವಾಮಿ ತಂದೆ ಶಿವಣ್ಣಗೌಡ ಮಾತನಾಡಿ, ನಾವು ನಿಮ್ಮ ತಾಯಿಯ ಸಿನೆಮಾ ನೋಡಿ ಬೆಳೆದವರು. ಆಗ ಎಂತಹ ಕಾಲ ಇತ್ತು, ಈಗ ಎಂತಹ ದಿನಗಳು ಬಂದಿವೆ ನೋಡಿ ಎಂದು ಹೇಳುತ್ತ ಭಾವುಕರಾದರು. ಸುದ್ದಿಗಾರರ ಜತೆ ಮಾತನಾಡಿದ ವಿನೋದ್ರಾಜ್, ಜೈಲಿನಲ್ಲಿ ದರ್ಶನ್ ಭೇಟಿ ಒಂದು ರೀತಿಯ ನೋವಾದರೆ, ಈ ಕುಟುಂಬದ್ದು ಇನ್ನೂ ಭಯಂಕರ ನೋವು ಎಂದು ಹೇಳುತ್ತ ಭಾವುಕರಾದರು.
ಸಂಧಾನದ ಸುಳ್ಳು ಸುದ್ದಿ ಹರಡದಂತೆ ಮನವಿ
ಕೆಲವು ಮಾಧ್ಯಮಗಳಲ್ಲಿ ರೇಣುಕಾಸ್ವಾಮಿ ತಂದೆ ಸಂಧಾನಕ್ಕೆ ಹೊರಟಿದ್ದಾರೆ ಎಂಬರ್ಥದ ಸುದ್ದಿಗಳು ಹರಿದಾಡಿವೆ. ನಾವು ಎಲ್ಲಿಯೂ ಯಾರೊಂದಿಗೂ ಸಂಧಾನ ಎಂದು ಹೇಳಿಲ್ಲ ಎಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಶಿವಣ್ಣಗೌಡರು ಬೇಸರ ವ್ಯಕ್ತಪಡಿಸಿದರು.
ಮಗನನ್ನು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ, ಕೊಲೆ ಮಾಡಿದವರಿಗೆ ಶಿಕ್ಷೆ ಆದಾಗಲೇ ಮಗನ ಸಾವಿಗೆ ನ್ಯಾಯ ಸಿಗುವುದು. ಕುಟುಂಬ ಸಂಕಷ್ಟದಲ್ಲಿದ್ದು, ಸೊಸೆಗೆ ಸರಕಾರ ಖಾಯಂ ನೌಕರಿ ಕೊಡಬೇಕು ಎಂದು ಕೈ ಮುಗಿದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ಬಂದರೆ ಸೋರುತ್ತೆ ಕುಂಬಾರಹಟ್ಟಿ ಶಾಲೆ; ಹೊಸ ಆರ್ ಸಿಸಿ ಕೊಠಡಿಯೂ ಶಿಥಿಲ
Renukaswamy Case: ಮಗ ಬೇಡಿಕೊಂಡ ಫೋಟೋ ನೋಡಲಾರೆ: ತಾಯಿ ರತ್ನಪ್ರಭಾ ಕಣ್ಣೀರು
Sirigere: ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ.. ಓರ್ವ ಮೃತ್ಯು, ಇಬ್ಬರಿಗೆ ಗಾಯ
Darshan ಫೋಟೋ ವೈರಲ್;ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ: ಸಿಬಿಐ ತನಿಖೆಗೆ ಒತ್ತಾಯ
Holalkere: ತಾಲೂಕಿನಾದ್ಯಾಂತ ರಣಭೀಕರ ಮಳೆ; ರೈತರ ಮುಖದಲ್ಲಿ ಮಂದಹಾಸ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.