Agricultural ಪಂಪ್ಸೆಟ್ ಕಳವು: ಕಳ್ಳರ ಚಹರೆ ಕೆಮರಾದಲ್ಲಿ ಸೆರೆ
Team Udayavani, Jul 27, 2024, 1:35 AM IST
ವಿಟ್ಲ: ಪುಣಚ ಗ್ರಾಮದ ವಿದ್ಯುತ್ ಉಪಕರಣ ದುರಸ್ತಿ ಅಂಗಡಿಯಿಂದ 2 ಲಕ್ಷ ರೂ. ಮೌಲ್ಯದ ಕೃಷಿ ಪಂಪ್ಸೆಟ್ ಕಳವು ಮಾಡಿದ ಕಳ್ಳರ ವಾಹನದ ಚಲನವಲನ ಸಿಸಿ ಕೆಮರಾದಲ್ಲಿ ಪತ್ತೆಯಾಗಿದ್ದು, ಸುಮಾರು 2 ಗಂಟೆ ಪುಣಚ ಪೇಟೆಯಲ್ಲಿ ಓಡಾಡಿದ ವಾಹನ ಕೊನೆಗೆ ಪುತ್ತೂರು ಕಡೆಗೆ ತೆರಳಿದ್ದು ದಾಖಲಾಗಿದೆ.
ಪುಣಚ ಗುರ್ಮೆ ನಿವಾಸಿ ಗಣೇಶ್ ಗೌಡ ಅವರ ಅಂಗಡಿಯಿಂದ ಕಳ್ಳತನ ಆಗಿದ್ದು, ಗುರುವಾರ ವಿಟ್ಲ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಈ ನಡುವೆ ಜು. 22ರಂದು ರಾತ್ರಿ ಸುಮಾರು 1 ಗಂಟೆಗೆ ಪುಣಚ ಗ್ರಾಮ ಪಂಚಾಯತ್ ಸಿಸಿ ಕೆಮರಾದಲ್ಲಿ ಪಿಕಪ್ ರೀತಿಯ ವಾಹನವೊಂದು ಪುತ್ತೂರು ಭಾಗದಿಂದ ಪೇಟೆಗೆ ಬರುತ್ತಿರುವುದು ಪತ್ತೆಯಾಗಿದೆ.
ಹೀಗೆ ಬಂದ ವಾಹನ ಗುರ್ಮೆ ಕಡೆಗೆ ಹೋಗುವ ನಾಟೆಕಲ್ ರಸ್ತೆಗೆ ತಿರುಗಿ ಹೋಗಿದೆ. ಕೆಲವು ಸಮಯದ ಬಳಿಕ ಹಿಂದೆ ಬಂದು ಅಜ್ಜಿನಡ್ಕ ಭಾಗಕ್ಕೆ ಹೋಗಿ ಮತ್ತೆ ಬಂದು ಪುಣಚ ಪೆಟ್ರೋಲ್ ಬಂಕ್ ಬಳಿಗೆ, ಆ ಬಳಿಕ ಸಹಕಾರಿ ಸಂಘದ ಸಮೀಪದಲ್ಲಿರುವ ಕಟ್ಟೆಯ ಬಳಿ ಕೆಲ ಸಮಯ ನಿಂತಿದ್ದು, ಬಳಿಕ ನಾಟೆಕಲ್ ರಸ್ತೆಯಲ್ಲಿ ಹೋಗಿ ಸುಮಾರು 1.30 ಗಂಟೆಗೆ ನಾಪತ್ತೆಯಾಗಿದೆ. ಆ ಬಳಿಕ ಬಂದ ವಾಹನ ಪುತ್ತೂರು ಭಾಗಕ್ಕೆ ಹೋಗಿರುವ ದೃಶ್ಯಾವಳಿಗಳು ಲಭಿಸಿದೆ.
ಸರಿಯಾದ ಮಾಹಿತಿಯನ್ನು ಹೊಂದಿದ ಕಳ್ಳರು ಈ ಕೃತ್ಯವನ್ನು ಮಾಡಿದ್ದು, ಇದರ ಹಿಂದೆ ವ್ಯವಸ್ಥಿತವಾದ ಜಾಲ ಇದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ
Sullia: ಬೈಕ್ ಗಳ ನಡುವೆ ಅಪಘಾತ
ವಿಟ್ಲ: ಅಡಿಕೆ ಸುಲಿಯುವ ಯಂತ್ರ ಕಂಡು ಹಿಡಿದ ನರಸಿಂಹ ಭಟ್ ವಿಧಿವಶ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.