Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
Team Udayavani, Jul 27, 2024, 6:30 AM IST
ರಂಗಾರೆಡ್ಡಿ (ತೆಲಂಗಾಣ): ಕನ್ನ ಹಾಕಿದ ಹೊಟೇಲ್ ಒಳಗೆ ಕದಿಯಲು ಏನೂ ದೊರೆಯದೇ ಕಳ್ಳನೊಬ್ಬ ತಾನೇ 20 ರೂ. ನೋಟನ್ನು ಟೇಬಲ್ ಮೇಲಿಟ್ಟು ತೆರಳಿದ ಘಟನೆ ತೆಲಂಗಾಣದ ಮಹೇಶ್ವರಮ್ನಲ್ಲಿ ನಡೆದಿದೆ! ಹೊಟೇಲ್ನೊಳಗೆ ಇರುವ ಹಣ ಎಗರಿಸು ವ ಉದ್ದೇಶದಿಂದ ಬೀಗ ಒಡೆದು ಪ್ರವೇಶಿಸಿದ್ದ ಕಳ್ಳ, ಹೊಟೇಲ್ ತುಂಬಾ ಹಣಕ್ಕಾಗಿ ಜಾಲಾಡಿದ್ದಾನೆ. ಆದರೆ ಕದಿಯಲು ಬೆಲೆ ಬಾಳುವಂಥದ್ದು ಏನೂ ದೊರೆಯದ ಕಾರಣ, ಸಿಸಿಟಿವಿ ಮುಂದೆ ನಿಂತು, “ನಿಮ್ಮ ವ್ಯಾಪಾರ ಯಾಕಿಷ್ಟು ಕಡಿಮೆಯಿದೆ’ ಎಂಬಂತೆ ಸನ್ನೆ ಮಾಡಿ, ಬಳಿಕ ರೆಫ್ರಿಜರೇಟರ್ ಬಳಿ ತೆರಳಿ ತಂಪು ಪಾನೀಯ ಸೇವಿಸಿದ್ದಾನೆ. ತೆರಳುವ ಮುನ್ನ ತಂಪು ಪಾನೀಯಕ್ಕೆ ಹಣ ನೀಡಿದ ರೀತಿ 20 ರೂ. ಇಟ್ಟು ಹೊರನಡೆದಿದ್ದಾನೆ. ಕಳ್ಳ ನೋಟನ್ನಿಟ್ಟು ತೆರಳುವ ಸಿಸಿಟಿವಿ ಫೂಟೇಜ್ ಈಗ ಭಾರೀ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.