Leopard… ಪೆರಂಪಳ್ಳಿ: ಮಣಿಪಾಲದ ಮನೆ ಬಾಗಿಲಲ್ಲಿ ಚಿರತೆ ಪ್ರತ್ಯಕ್ಷ !

ಚಿರತೆ ಚಲನವಲನ ಸಿಸಿ ಕೆಮರಾದಲ್ಲಿ ದಾಖಲು, ರಾತ್ರಿ ಕಾಣೆಯಾಗಿದ್ದ ನಾಯಿ ಬೆಳಗ್ಗೆ ಹಾಜರು!

Team Udayavani, Jul 27, 2024, 9:53 AM IST

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

ಮಣಿಪಾಲ: ಚಿರತೆ ಬಾಯಿಗೆ ಸಿಗಬೇಕಿದ್ದ “ರಾಣಿ’ಗೆ ಈಗ ಪುನರ್‌ ಜನ್ಮ. ತನ್ನದೇ ಬುದ್ಧಿವಂತಿಕೆಯಿಂದ ಪಾರಾಗಿ ಬಂದಿರುವ “ರಾಣಿ’ ಬದುಕುಳಿದಿದ್ದೇ ಪವಾಡವಂತೆ. ಮಣಿಪಾಲ- ಕೊಳಲಗಿರಿ ಮಾರ್ಗದಲ್ಲಿರುವ ಮನೆಯೊಂದರ ಕಾಂಪೌಂಡ್‌ ಒಳಗೆ ಶುಕ್ರವಾರ ತಡರಾತ್ರಿ ಚಿರತೆ ಸಂಚರಿಸಿದ್ದು, ಮನೆಮಂದಿ ಹಾಗೂ ಸ್ಥಳೀಯರನ್ನು ಭಯಭೀತಗೊಳಿಸಿದೆ.

ಶುಕ್ರವಾರ ರಾತ್ರಿ 11.20ರ ಸುಮಾರಿಗೆ ಮಣಿಪಾಲ ಉಪೇಂದ್ರ ಪೈ ಸರ್ಕಲ್‌ ಕೆಳಗಿನ ಮಾರ್ಗದಲ್ಲಿ ಸಿಗುವ ಶಾಂಭವಿ ಅಪಾರ್ಟ್‌ಮೆಂಟ್‌ನ ಬಲಬದಿಯ “ಅಮೂಲ್ಯ ನೆಸ್ಟ್‌’ ಮನೆಯ ನಾಯಿ ರಾತ್ರಿ ಬೊಗಳಿದರೂ ಮನೆ ಮಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ನಿಂತಿತು. ಆದರೆ ಕ್ಲೈಮ್ಯಾಕ್ಸ್‌ ನಲ್ಲಿ “ರಾಣಿ’ ಚಿರತೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾತ್ರಿಯಿಡೀ ಕಣ್ಮರೆಯಾಗಿದ್ದ ರಾಣಿ ಬೆಳಗ್ಗೆ ಮನೆ ಮುಂದೆ ಹಾಜರಿತ್ತು.

ಇವಿಷ್ಟೂ ಸಂಗತಿಗಳು ಮನೆಯವ ರಿಗೆ ತಿಳಿದದ್ದು ಬೆಳಗ್ಗೆ ಮನೆಯ ಸಿಸಿಟಿವಿ ದೃಶ್ಯಾವಳಿ ನೋಡಿದಾಗಲೇ. ಅದರಲ್ಲಿ ಚಿರತೆಯು ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ದಾಖ ಲಾಗಿತ್ತು. ಇದನ್ನು ಕಂಡು ಮನೆ ಮಂದಿ ಗಾಬರಿಗೊಂಡರು. ಈ ಮನೆಯಲ್ಲಿ ಎರಡು ನಾಯಿಗಳಿವೆ. ಒಂದು ಝಾಝು, ಮತ್ತೂಂದು ಎಲ್ಲಿಂದಲೋ ಬಂದಿದ್ದ ರಾಣಿ.

ಜಾನೆಟ್‌ ಅವರ ಮನೆ ಇದಾಗಿದ್ದು, ರಾತ್ರಿ ವೇಳೆ ಮನೆಯಲ್ಲಿ ಅವರ ಪತಿ, ತಾಯಿ, ಸಹೋದರಿ ಮಾತ್ರ ಇದ್ದರು. ಇವರ ಮನೆಯ ಎದುರು ಮತ್ತೂಂದು ಮನೆ ಇದ್ದು, ಅಲ್ಲಿ ಸಿಸಿ ಕೆಮರಾ ಇಲ್ಲ. ಇಲ್ಲಿಯೇ ಅನತಿ ದೂರದಲ್ಲಿರುವ ಬ್ರಹ್ಮಕುಮಾರೀಸ್‌ ಕಚೇರಿ ಬಳಿ 6 ತಿಂಗಳ ಹಿಂದೆ ಕಟ್ಟಿ ಹಾಕಿದ್ದ 2 ದನದ ಕರುಗಳನ್ನು ಚಿರತೆ ಕೊಂಡೊಯ್ದಿತ್ತು.

ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಸುತ್ತಲೂ ಸುಮಾರು 2 ಎಕ್ರೆಗೂ ಅಧಿಕ ಕಾಡಿನಿಂದ ಕೂಡಿದ ಪ್ರದೇಶವಿದೆ. ಚಿರತೆ ರಾಣಿಯನ್ನು ಬೆನ್ನಟ್ಟಿ ಹೋಗಿತ್ತು. ರಸ್ತೆಯ ಅನತಿ ದೂರದಲ್ಲಿ ಇರುವ ಇಲ್ಲಿ ತಡರಾತ್ರಿ ಹಾಗೂ ಮುಂಜಾನೆ ಯವರೆಗೂ ಜನ ಹಾಗೂ ವಾಹನ ಸಂಚಾರವಿರುತ್ತದೆ. ಮನೆಯ ಬಳಿಯ ಖಾಸಗಿ ನಿವೇಶನದಲ್ಲಿ ಪೊದೆಗಳಿವೆ.

ಆತಂಕದ ಸ್ಥಿತಿ
ಜಿಲ್ಲಾಧಿಕಾರಿ ಕಟ್ಟಡದ ಕೆಳಭಾಗ, ಪೆರಂಪಳ್ಳಿ ಸುತ್ತಮುತ್ತಲೂ ದಟ್ಟ ಅರಣ್ಯ ವಿದ್ದು, ಹಲವು ಮನೆಗಳಿವೆ. ಆಹಾರಕ್ಕೆ ಹೊಂಚುಹಾಕುತ್ತಾ ರಾತ್ರಿ ವೇಳೆ ಆಗಮಿಸುವ ಚಿರತೆಗೆ ಎದುರು ಸಿಕ್ಕಿದರೆ ಅವರ ಪಾಡೇನೂ ಎಂಬುದು ಪ್ರಶ್ನೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ಇದ್ದು, ಕೆಮರಾ ಹಾಗೂ ಬೋನುಗಳನ್ನು ಇರಿಸಿದರೆ ಉತ್ತಮ ಎಂಬುದು ಸಾರ್ವಜನಿಕರ ಅನಿಸಿಕೆ.

ಚಿರತೆ ಎಲ್ಲಿ ಹೋಗಿರಬಹುದು?
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಂತೆ ಹೆದ್ದಾರಿ ಮಾರ್ಗದ ಬದಿಯ ಪೊದೆಯಿಂದ ಚಿರತೆ ಆಗಮಿಸಿದೆ. ಬಳಿಕ ಮನೆಯಲ್ಲಿ ನಾಯಿ ಬೊಗಳುತ್ತಿದ್ದುದನ್ನು ಕಂಡು ಕಾಂಪೌಂಡ್‌ನೊಳಗೆ ಹಾರಿತು. ಯಾವಾಗಲೂ ಓಡಾಡಿಕೊಂಡಿರುತ್ತಿದ್ದ ರಾಣಿ ಶನಿವಾರ ಸಂಜೆವರೆಗೂ ಮನೆ ಎದುರು ಮಲಗಿದ್ದಳು. ಮತ್ತೂಂದು ನಾಯಿಯನ್ನು ಮನೆಯ ಒಳಭಾಗದ ಲ್ಲಿಯೇ ಮಲಗಿಸುವ ಮನೆಮಂದಿ ಶನಿ ವಾರದಿಂದ ರಾಣಿಗೂ ಮನೆಯ ಒಳಗೆ ಆಶ್ರಯ ಕಲ್ಪಿಸಿದರು.

ಕೆಮರಾ ಅಳವಡಿಕೆ
ಮನೆಮಂದಿ ಅರಣ್ಯ ಇಲಾಖೆಗೆ ತಿಳಿಸಿದ್ದು, ಇಲಾಖೆಯ ಸಿಬಂದಿ ಆಗಮಿಸಿ 2 ಕಡೆ ಕೆಮರಾ ಅಳವಡಿಸಿದ್ದಾರೆ. ನಾಯಿ ಯನ್ನು ಬಿಟ್ಟುಹೋದ ಚಿರತೆ ಮತ್ತೆ ಬರಬಹುದು ಎಂಬ ಊಹೆ ಇಲಾಖೆಯದ್ದು. ಎರಡು ದಿನ ಕೆಮರಾ ಇರಲಿದೆ. ಚಿರತೆ ಪತ್ತೆಯಾದರೆ ಬೋನು ಇರಿಸುವುದಾಗಿ ಇಲಾಖೆ ಸಿಬಂದಿ ತಿಳಿಸಿದ್ದಾರೆ.

ಚಿರತೆ ಪ್ರತ್ಯಕ್ಷವಾದ ಜಾಗ ದಲ್ಲಿ ಕೆಮರಾ ಅಳವಡಿ ಸಿದ್ದು, ಚಲನವಲನ ಗಮನಿಸ ಲಾಗು ವುದು. ಅದು ಸ್ಥಳೀಯ ಪರಿಸರದ್ದೇ ಅಥವಾ ಬೇರೆ ಕಡೆಯದ್ದೇ ಎಂದು ತಿಳಿಯುವುದು ಮುಖ್ಯ. ಸ್ಥಳೀಯ ವಾಗಿದ್ದರೆ ಅದು ಮತ್ತೆ ಮತ್ತೆ ಬರುವ ಸಾಧ್ಯತೆಗಳೇ ಹೆಚ್ಚು. ಅದನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು.
-ಗಣಪತಿ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ವಿಭಾಗ

ಇದನ್ನೂ ಓದಿ: Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

Malpe: ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.