UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ


Team Udayavani, Jul 27, 2024, 3:52 PM IST

7-uv-fusion

ಮಂಗನ ಕೈಯಲ್ಲಿ ಮಾಣಿಕ್ಯ ಎಂಬುದು ಚಿರಪರಿಚಿತ ಗಾದೆ ಮಾತು. ಮಂಗನ ಕೈಗೆ ನೀವು ಬಾಳೆಹಣ್ಣನ್ನು ಕೊಟ್ಟರೆ ಅದು ಕ್ಷಣಮಾತ್ರದಲ್ಲಿ ಹೊಟ್ಟೆ ಸೇರುತ್ತದೆ. ಆದೇ ನೀವು ಬೆಲೆ ಬಾಳುವ ರತ್ನವನ್ನಿಟ್ಟಾಗ ಅದು ಮಂಗನ ಗಮನಕ್ಕೆ ಬಂದರೂ ಕುತೂಹಲದ ಭಾವ ವ್ಯಕ್ತಪಡಿಸುತ್ತದೆ. ಏಕೆಂದರೆ, ಅದರ ಉಪಯೋಗ ಮಂಗನಿಗೆ ತಿಳಿದಿರುವುದಿಲ್ಲ, ಬದಲಾಗಿ ಅದರ ಪ್ರಕಾರ ಮಾಣಿಕ್ಯ ಕೂಡ ಆಟಿಕೆಗೆ ಸಮವಾಗಿರುತ್ತದೆ.

ವಸ್ತುವಿನ ಉಪಯೋಗ ತಿಳಿಯದೆಯೇ ಅದು ಒಬ್ಬನ ಕೈಯಲ್ಲಿದೆ ಎಂದರೆ ಆ ವಸ್ತು ತನ್ನ ಬೆಲೆಯನ್ನು ಕಳೆದುಕೊಂಡಂತೆಯೇ ಸರಿ. ಆದರೆ ವೈಜ್ಞಾನಿಕಲೋಕದಲ್ಲಿ ಈ ಗಾದೆ ಮಾತಿಗೆ ಬೇರೆಯದೇ ಅರ್ಥವನ್ನು ಕಲ್ಪಿಸ ಬಹುದಾಗಿದೆ. ಹೇಗೆಂದರೆ ಔಷಧಲೋಕಕ್ಕೆ ಇಂದು ಮಂಗನ ಕೊಡುಗೆ ಅಪಾರವಾಗಿದೆ. ಸಂಶೋಧನಾಕಾರರ ಪ್ರಕಾರ ಇಂದು “ಔಷಧೀಯ ಸಸ್ಯಗಳು’ ಮಂಗನ ಕೈಯಲ್ಲಿರುವ ಮಾಣಿಕ್ಯವೇ ಆಗಿದೆ!

ಅದೊಂದು ಮಳೆಗಾಲದ ದಿನ. ಬೆಳಗ್ಗೆ ಮನೆಯ ಸುತ್ತ ಅಲೆದಾಡುತ್ತಿರುವಾಗ ಮಂಗಗಳ ದಂಡೊಂದು ಹಲಸಿನ ಮರ, ತೆಂಗಿನ ಮರಗಳಿಗೆ ದಾಳಿ ಮಾಡಿತು. ಸ್ವಲ್ಪ ಹೊತ್ತಿನಲ್ಲಿ ಒಂದು ಮಂಗ ಮರದಿಂದ ಕೆಳಗೆ ಇಳಿದು ಪಪ್ಪಾಯ ಗಿಡದ ಎಲೆಗಳನ್ನು ಕಿತ್ತು ತಿನ್ನಲು ಪ್ರಾರಂಭಿಸಿತು.

ಈ ಹಿಂದೆ ಈ ದೃಶ್ಯವನ್ನು ಹಲವು ಬಾರಿ ಕಂಡಿದ್ದೆನಾದರೂ ಅಂದು ಆ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿ ಅದರ ಬಗ್ಗೆ ಮಾಹಿತಿಯನ್ನು ಹುಡುಕಾಡಿದೆ. ಆಗಲೇ ಮಂಗ, ಚಿಂಪಾಂಜಿ ಮೊದಲಾದ ಪ್ರçಮೇಟ್‌ ವರ್ಗಕ್ಕೆ ಸೇರಿದ ಸಸ್ತನಿಗಳಲ್ಲಿಯೂ ಒಬ್ಬ “ವೈದ್ಯ’ನು ಅಡಗಿದ್ದಾನೆ ಎಂಬ ಅಚ್ಚರಿಯ ಸಂಗತಿ ಅರಿವಿಗೆ ಬಂತು.

ಹೌದು, ನಾಗರಿಕತೆ, ಸಂಶೋಧನೆ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಮಾನವ ಎಷ್ಟೇ ಮುಂದಿದ್ದರೂ ಕೆಲವೊಂದು ವಿಷಯಗಳಲ್ಲಿ ಭೂಮಿಯಲ್ಲಿರುವ ಇತರ ಜೀವರಾಶಿಗಳು ನಮಗೆ ಸಡ್ಡು ಹೊಡೆದಿವೆ. ಮನುಷ್ಯನ ಕಾಯಿಲೆಯನ್ನು ಗುಣಪಡಿಸಲು ಇಂದು ವೈದ್ಯನಿದ್ದಾನೆ. ಆದರೆ ಪ್ರಾಣಿಗಳು ಸ್ವತಃ ತಾವೇ ಪ್ರಕೃತಿಯಲ್ಲಿ ಅಡಗಿರುವ ಔಷಧಗಳನ್ನು ಜಾಲಾಡಿ ಕಾಯಿಲೆಯನ್ನು ವಾಸಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಒಳ್ಳೆಯ ದೃಷ್ಟಾಂತ ಹೇಳುವುದಾದರೆ ಡೆಂಗ್ಯೂ ಜ್ವರಕ್ಕೆ ಪಪ್ಪಾಯ ಎಲೆಯ ರಸದ ಬಳಕೆ. ಈ ಬೆಳವಣಿಗೆಗೆ ಕಾರಣವೇ ಸಂಶೋಧನಾಕಾರರು ಮಂಗಗಳು ಪಪ್ಪಾಯ ಎಲೆಯ ಸೇವನೆಯನ್ನು ಗಮನಿಸಿ ಅದರ ಕಾರಣವನ್ನು ಸಂಶೋಧಿಸಿದ್ದು. ಪಪ್ಪಾಯ ಎಲೆಯು ರಕ್ತದಲ್ಲಿರುವ ಪ್ಲೇಟ್ಲೆಟ್‌ ಸಂಖ್ಯೆಯನ್ನು ಹೆಚ್ಚಿಸುವ ಕಾರಣಕ್ಕೆ ಇದನ್ನು ಡೆಂಗ್ಯೂ ಜ್ವರಕ್ಕೆ ಔಷಧಿಯಾಗಿ ಬಳಸುತ್ತಾರೆ.

ಹೀಗಾಗಿ ಇದನ್ನು ಮಂಗಗಳು ಸೇವಿಸುವುದು. ಹಾಗೆಯೇ ಒಂದು ಜಾತಿಗೆ ಸೇರಿದ ಮಂಗ ಕಾಳುಮೆಣಸಿನ ಎಲೆಯನ್ನು ಕೀಟ ನಿವಾರಕವಾಗಿ ಉಪಯೋಗಿಸುತ್ತದೆ. ಈ ಮಂಗವು ಎಲೆಯನ್ನು ಮುಖದ ತುಂಬಾ ಉಜ್ಜಿಕೊಳ್ಳುವುದರಿಂದ ಕೀಟಗಳಿಂದ ಮುಕ್ತಿ ಪಡೆಯುತ್ತದೆ. ಮಾತ್ರವಲ್ಲದೆ, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳಿಂದ ತಗಲುವ ರೋಗಗಳಿಂದ ರಕ್ಷಣೆಯನ್ನು ಪಡೆಯುತ್ತದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಮಂಗಗಳಿಗೂ ಮಾನವನಿಗೂ ಬಹುತೇಕ ಸಾಮ್ಯತೆ ಇರುವುದರಿಂದ ಯಾವುದೇ ಔಷಧಿಯನ್ನು ಮಾನವನಿಗೆ ಪ್ರಯೋಗಿಸುವ ಮುನ್ನ ಮಂಗಗಳ ಮೇಲೆ ಮೊದಲು ಪ್ರಯೋಗಿಸುತ್ತಾರೆ. ಅದೇ ರೀತಿ ನಿಸರ್ಗದಲ್ಲಿ ಮಂಗಗಳ ವರ್ತನೆ, ಅವುಗಳ ಆಹಾರ ಪದ್ಧತಿ, ಔಷಧೀಯ ಸಸ್ಯಗಳ ಸೇವನೆ ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟು ಅಧ್ಯಯನವನ್ನು ಮಾಡುತ್ತಾರೆ. ಇದೇ ಕಾರಣದಿಂದ ರಂಗೂಟಾನ್‌, ಚಿಂಪಾಂಜಿ ಮೊದಲಾದ ಸಸ್ತನಿಗಳು ಇಂದು ಔಷಧೀಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿವೆ.

ಈ ಕುರಿತಂತೆ ಕೆ. ಎನ್‌. ಗಣೇಶಯ್ಯ ಅವರು “ಕಪಿಲಿಪಿಸಾರ’ ಎಂಬ ಕಾದಂಬರಿಯಲ್ಲಿ ವೈದ್ಯಕೀಯ ಸಂಶೋಧನೆಯಲ್ಲಿ ಮಂಗಗಳ ಪ್ರಾಮುಖ್ಯತೆಯ ಬಗೆಗಿನ ಅಚ್ಚರಿಯ ಸಂಗತಿಗಳನ್ನು ವಿವರಿಸಿದ್ದಾರೆ. ಸಮಸ್ಯೆ ಎಲ್ಲಿ ಉದ್ಭವವಾಗುತ್ತದೆಯೋ ಪರಿಹಾರವೂ ಕೂಡ ಅಲ್ಲಿ ಹುದುಗಿರುತ್ತದೆ. ಸಮಸ್ಯೆಯನ್ನು ಅರ್ಥೈಸಿಕೊಂಡು ಬಿಡಿಸಿದರೆ ಉತ್ತರದ ಬಾಗಿಲು ತಾನಾಗಿಯೇ ತೆರೆಯುತ್ತದೆ.

ಅದೇ ರೀತಿ ಕಾಯಿಲೆ ಎಲ್ಲಿ ಹುಟ್ಟುತ್ತದೆಯೋ ಅದಕ್ಕೆ ಔಷಧಿಯು ಕೂಡ ಅಲ್ಲಿಯೇ ಅಡಗಿರುತ್ತದೆ. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತು ಕೂಡ ಇಂದು ಬೇರೆ ರೂಪವನ್ನು ತಾಳಿದೆ. ಪ್ರತಿಯೊಂದು ಸಸ್ಯಕ್ಕೂ ತನ್ನದೇ ಆದ ಔಷಧೀಯ ಗುಣವಿರುತ್ತದೆ. ಅದರ ಹುಟ್ಟಿಗೆ ಕಾರಣವಿರುತ್ತದೆ. ಆ ಕಾರಣವನ್ನು ಕಂಡುಕೊಂಡರೆ ಇಂದು ಪ್ರಕೃತಿಯಲ್ಲಿ ಜೀವನವು ಸುಗಮವಾಗಿ ಸಾಗುತ್ತದೆ.

-ಮಧುರ

ಕಾಂಚೋಡು

ಟಾಪ್ ನ್ಯೂಸ್

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.