Seven Samurai: ಸೆವೆನ್‌ ಸಮುರಾಯ್‌


Team Udayavani, Jul 27, 2024, 4:45 PM IST

13

1954ರಲ್ಲಿ ರೂಪಿತವಾದ ಚಲನಚಿತ್ರ. ಜಗತ್ತಿನ ಅತ್ಯಂತ ಪ್ರಭಾವಿ ಹಾಗೂ ಪ್ರಮುಖ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಪಾನಿನ ಅಕಿರಾ ಕುರಸೋವಾ ನಿರ್ದೇಶಿಸಿದ ಚಿತ್ರ. ಜಪಾನಿನ ಪುರಾಣದ, ಇತಿಹಾಸದ ಒಂದು ಅಧ್ಯಾಯವನ್ನು ತೆಗೆದು, ಒಪ್ಪ ಓರಣ ಮಾಡಿ ಪರದೆ ಮೇಲೆ ತಂದ ಕೀರ್ತಿ ಕುರಸೋವಾರದ್ದು. ಒಂದು ಹೋರಾಟದ ಕಥನ.

ಮೂಲತಃ ಕುರಸೋವಾರಿಗೆ ಕಥನವನ್ನು ನಿರಾಡಂಬರತೆಯಿಂದ, ಮನ ತಟ್ಟುವ ಹಾಗೆ, ಆಲೋಚಿಸುವಂತೆ ಮಾಡುವುದು ಸಿದ್ಧಿಸಿದ ಕಲೆ. ಅದು ಅವರ ಶ್ರೇಷ್ಠತೆಯೂ ಸಹ. ಸೆವೆನ್‌ ಸಮುರಾಯ್‌ ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾದ ಚಿತ್ರ.

ಕಥೆಯ ನೆಲೆಯಲ್ಲಿ ಹೇಳುವುದಾದರೆ ವಿಶೇಷವೇನಿಲ್ಲ. ಪರ್ವತದ ತಪ್ಪಲಿನ ಒಂದು ಹಳ್ಳಿ. ಅಲ್ಲಿನ ಜನರಿಗೆ ಕೃಷಿಯೇ ಆಧಾರ. ಪರಿಸ್ಥಿತಿ ಹೀಗಿರುವಾಗ ಪಕ್ಕದ ಮತ್ತೂಂದು ಪ್ರದೇಶದ ಡಕಾಯಿತರ ತಂಡದ ಕಣ್ಣು ಹಳ್ಳಿಯ ಮೇಲೆ ಬೀಳುತ್ತದೆ. ಸರಿಯಾದ ಸಮಯಕ್ಕೆ ಕಾದು ಹಳ್ಳಿಯ ಮೇಲೆ ಮುಗಿ ಬೀಳಲು ಯೋಜನೆ ಹೂಡುತ್ತಾರೆ. ಈ ಸಂಗತಿ ಹೇಗೋ ಆ ಹಳ್ಳಿಯ ಮುಖ್ಯಸ್ಥನಿಗೆ ತಿಳಿಯುತ್ತದೆ. ಮುಂದಾಗುವ ಅನಾಹುತವನ್ನು ಕಲ್ಪಿಸಿಕೊಳ್ಳುವ ಮುಖ್ಯಸ್ಥ ಹೇಗಾದರೂ ಅದನ್ನು ತಡೆಯಲು ಯೋಚಿಸುತ್ತಾನೆ.

ಅದರಂತೆ ಹಳ್ಳಿಯ ಹಲವರೊಂದಿಗೆ ಚರ್ಚಿಸಿ ಪ್ರತಿ ಯೋಜನೆ ರೂಪಿಸುತ್ತಾರೆ. ಈ ಡಕಾಯಿತರಿಗೆ ಪ್ರತಿ ಹೋರಾಟ ನೀಡಿ ಸೆಣಸಬಲ್ಲ ಸಮರವೀರನನ್ನು ಹುಡುಕತೊಡಗುತ್ತಾರೆ. ಆದರೆ ಅವರಿಗೆ ಕೊಡುವಷ್ಟು ಹಣ ಇರುವುದಿಲ್ಲ. ಹಾಗಾಗಿ ಬಡ ಸಮರ ವೀರರ ಹುಡುಕಾಟ ನಡೆಯುತ್ತದೆ. ಕೊನೆಗೂ ಒಬ್ಬ ಅನುಭವಸ್ಥ ಸಮರವೀರ ಸಿಗುತ್ತಾನೆ. ಅವನು ಏಳು ಜನರ ತಂಡವನ್ನು ಕಟ್ಟುತ್ತಾನೆ. ಆ ಏಳು ಸಮರ ವೀರರೇ ಹಳ್ಳಿಯನ್ನು ಕಾದು ಡಕಾಯಿತರನ್ನು ಹತ್ತಿಕ್ಕುತ್ತಾರೆ.  ಇದು ಕಥೆಯ ನೆಲೆ.

ಇದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಕುರಸೋವಾ, ಇಡೀ ಸಿನಿಮಾದುದ್ದಕ್ಕೂ ರೋಚಕತೆ ಉಳಿಸಿಕೊಂಡು ರೂಪಿಸಿದ್ದು ವಿಶೇಷ.

ಈ ಸಿನಿಮಾ ಬರೀ ಒಂದು ಸಿನಿಮಾವಾಗಿ ಉಳಿಯಲಿಲ್ಲ. ಪಾಶ್ಚಿಮಾತ್ಯ ದೇಶಗಳ ಸಿನಿಮಾ ನಿರ್ದೇಶಕರ ಮೇಲೂ ಈ ಸಿನಿಮಾ ಪ್ರಭಾವ ಬೀರಿತು. ಅದರ ಪರಿಣಾಮವಾಗಿ ಹಲವಾರು ಸಿನಿಮಾಗಳು ಈ ಕಥೆಯ ಎಳೆಯನ್ನು ಹಿಡಿದುಕೊಂಡು ರೂಪಿತವಾದವು.

ಹಲವಾರು ಪುರಸ್ಕಾರ ಪಡೆದ ಈ ಚಿತ್ರ ಆಗಿನ ಕಾಲದಲ್ಲಿ ಜಪಾನಿನಲ್ಲಿ ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ. ಹಾಗೆಯೇ ಯಶಸ್ವಿಯಾಗಿ ಜನ ಮೆಚ್ಚುಗೆ ಹಾಗೂ ಗಳಿಕೆ ಗಳಿಸಿದ ಚಿತ್ರವೂ ಇದು.

ಚಿತ್ರದಲ್ಲಿ ನಟಿಸಿದ ಟೊಶಿರೊ ಮಿಫ‌ುನ್‌, ತಕಾಶಿ ಶಿಮುರಾ, ಸಿಜಿ ಮಿಯಾಗುಚಿ, ಟೊಶಿಯೊ ತಕಾಹಾರ, ಯೋಶಿಯೊ ಇನಾಬಾ, ಇಸಾವೊ ಕಿಮುರಾ, ಡೈಸುಕೆ ಕ್ಯಾಟೊ ಸಮರವೀರರಾಗಿ ಅಭಿನಯಿಸಿದ್ದಾರೆ.

ಕನ್ನಡದಲ್ಲೂ ಇದರ ಪ್ರಭಾವದಿಂದ ಚಿತ್ರವೊಂದು ಮೂಡಿಬಂದಿತು. ಗಿರೀಶ್‌ ಕಾರ್ನಾಡರು ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ ಇದರ ಪ್ರಭಾವದಲ್ಲಿ ಮೂಡಿದೆ. ಮತ್ತೂಬ್ಬ ಪ್ರತಿಭಾವಂತ ನಟ ಶಂಕರನಾಗ್‌ ಇದರ ನಾಯಕ ನಟರಾಗಿದ್ದರು.

70 ವರ್ಷಗಳ ಬಳಿಕವೂ ಇಂದಿಗೂ ಪ್ರಸ್ತುತತೆ ಮತ್ತು ರೋಚಕತೆ ಉಳಿಸಿಕೊಂಡಿರುವ ಚಲನಚಿತ್ರ. ಜಗತ್ತಿನ ಅತ್ಯುತ್ತಮ ನೂರು ಚಲನಚಿತ್ರಗಳಲ್ಲಿ ಅಗ್ರಸ್ಥಾನ ಉಳಿಸಿಕೊಂಡಿರು ವುದು ಈ ಚಿತ್ರದ ಹೆಚ್ಚುಗಾರಿಕೆ. ತಪ್ಪದೇ ವೀಕ್ಷಿಸಿ.

ಅಪ್ರಮೇಯ

ಟಾಪ್ ನ್ಯೂಸ್

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು

1-asdadasd

Cricketer of the Month :ಎರಡೂ ಪ್ರಶಸ್ತಿ ಶ್ರೀಲಂಕಾ ಪಾಲು

1-HB

Harry Brook ಹೆಗಲಿಗೆ ಇಂಗ್ಲೆಂಡ್‌ ನಾಯಕತ್ವ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.