Science ಸೀಟ್ ಸಿಗದ ಕೊರಗಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ!
ಸ್ನೇಹಿತರೆಲ್ಲರೂ ವಿಜ್ಞಾನ ವಿಭಾಗಕ್ಕೆ ಸೇರ್ಪಡೆಯಾಗಿದ್ದರು
Team Udayavani, Jul 27, 2024, 6:07 PM IST
ನವ ದೆಹಲಿ: ದೆಹಲಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸಲು ಸೀಟ್ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
16 ರ ಹರೆಯದ ಕುನಾಲ್ ರಾಯ್ ಎಂಬ ವಿದ್ಯಾರ್ಥಿ ತನ್ನ ಗೆಳೆಯರೊಂದಿಗೆ ವಿಜ್ಞಾನ ವಿಭಾಗಕ್ಕೆ ಸೇರಲು ಬಯಸಿದ್ದ. ಆದರೆ ಆತನ ಗೆಳೆಯರೆಲ್ಲರು ತಮ್ಮ ಆದ್ಯತೆಯ ವಿಷಯವನ್ನು ಅಧ್ಯಯನ ನಡೆಸಲು ಇತರ ಸಂಸ್ಥೆಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದಾಗ್ಯೂ, ಕುನಾಲ್ ವಿಜ್ಞಾನ ವಿಭಾಗದಲ್ಲೇ ಮುಂದುವರಿಯಲು ಪ್ರಯತ್ನಿಸಿದ್ದನಾದರೂ ಎಲ್ಲೂ ಸೀಟ್ ಸಿಗದ ಕಾರಣ ಕಲಾ ವಿಭಾಗಕ್ಕೆ ಸೇರಿದ್ದ.
ಗುರುವಾರ ದೆಹಲಿಯ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಶಾಲೆಯ ವಸತಿ ನಿಲಯದಲ್ಲೇ ಕುನಾಲ್ ನ ಮೃತ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುನಾಲ್ ದೆಹಲಿಯ ನಂಗ್ಲೋಲಿಯ ರಾಣಿ ಖೇರಾ ನಿವಾಸಿಗಳಾದ ಶಿವ್ಚಾಂದ್ ರಾಯ್ ಅವರ ಮಗನಾಗಿದ್ದಾನೆ. ತಂದೆ ಕಲಾವಿಭಾಗಕ್ಕೆ ಸೇರಿದ ಬಳಿಕ ಮಗನ ಮನ ಪರಿವರ್ತಿಸಲು ಪ್ರಯತ್ನಪಟ್ಟರಾದರೂ ಕುನಾಲ್ ಒಂಟಿತನ ಮತ್ತು ಹತಾಶೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಗುರುವಾರ ಬೆಳಗ್ಗೆ 6 ಗಂಟೆಯ ಆಸುಪಾಸಿನಲ್ಲಿ ಹರಿದ ಬೆಡ್ ಶೀಟ್ ಉಪಯೋಗಿಸಿಕೊಂಡು ಸೀಲಿಂಗ್ ನಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ರಾಡ್ ವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಆರ್.ಟಿ.ಆರ್.ಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.