Rain Damage: ಕುಂದಾಪುರ, ಕಾರ್ಕಳ: ಗಾಳಿ-ಮಳೆಗೆ ಅಪಾರ ಹಾನಿ
Team Udayavani, Jul 28, 2024, 1:54 AM IST
ಕುಂದಾಪುರ/ಕಾರ್ಕಳ: ಭಾರೀ ಗಾಳಿ ಮಳೆಗೆ ಶುಕ್ರವಾರ ರಾತ್ರಿ ಕಾರ್ಕಳ, ಕುಂದಾಪುರ ಹಾಗೂ ಬೈಂದೂರು ತಾಲೂಕಿನೆಲ್ಲೆಡೆ ಅಪಾರ ಹಾನಿ ಸಂಭವಿಸಿದೆ.
30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಮರಗಳು ಬಿರುಗಾಳಿಗೆ ನೆಲಕ್ಕುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಾಳಾವರ ಸಮೀಪ ಬೈಕ್ ಮೇಲೆ ಮರ ಬಿದ್ದು ಸವಾರ ಗಾಯಗೊಂಡಿದ್ದಾರೆ. ಬಿಜೂರಿನಲ್ಲಿ ವಿದ್ಯುತ್ ಕಂಬ ಬಿದ್ದು ರಿಕ್ಷಾ ಜಖಂ ಗೊಂಡಿದ್ದು, ಸಮೀಪದಲ್ಲಿದ್ದ ಕಾರಿಗೂ ಹಾನಿಯಾಗಿದೆ. ಹೆಮ್ಮಾಡಿಯಲ್ಲಿ ಕೊಟ್ಟಿಗೆಗೆ ಮರ ಬಿದ್ದು 4 ಜಾನು ವಾರುಗಳು ಗಾಯಗೊಂಡಿವೆ.
ಗಾಳಿಯಬ್ಬರಕ್ಕೆ ಕುಂದಾಪುರ ಮೆಸ್ಕಾಂ ವಿಭಾಗದ ಕೋಟ, ಶಂಕರನಾರಾಯಣ, ಕುಂದಾಪುರ, ತಲ್ಲೂರು, ಬೈಂದೂರು ವಲಯಗಳ ವ್ಯಾಪ್ತಿಯಲ್ಲಿ ಶುಕ್ರವಾರ ಒಂದೇ ದಿನ ಒಟ್ಟು 196 ವಿದ್ಯುತ್ ಕಂಬಗಳು ಬಿದ್ದಿದ್ದು, 6 ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದೆ.
ಕಾರ್ಕಳ ತಾಲೂಕಿನಲ್ಲಿ ಕೂಡ ಭಾರೀ ನಷ್ಟ ಸಂಭವಿಸಿದೆ. ನಲ್ಲೂರು ಮತ್ತು ಮುಳಿಕಾರು ಶಾಲೆಯ ಮೇಲ್ಛಾವಣಿ ಕುಸಿದಿದೆ. ಹಲವಾರು ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ವಿವಿಧೆಡೆ 90ಕ್ಕೂ ಹೆಚ್ಚು ಮರ ಬಿದ್ದಿರುವ ಕುರಿತಂತೆ ವರದಿಯಾಗಿದೆ.
ಹೆಬ್ರಿ: ಧರೆಗುರುಳಿದ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು
ಹೆಬ್ರಿ: ತಾಲೂಕಿನ ಸುತ್ತಮುತ್ತ ಪ್ರದೇಶದಲ್ಲಿ ಭಾರೀ ಗಾಳಿ ಬೀಸಿದ್ದು, ಮರಗಳು ಹಾಗೂ ಸುಮಾರು 25ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ಮೆಸ್ಕಾಂಗೆ ಅಪಾರ ನಷ್ಟ ಸಂಭವಿಸಿದೆ.
ಚಾರ ನವೋದಯ ಸಮೀಪ ಬೃಹತ್ ಮರ ರಸ್ತೆಗುರುಳಿದ ಪರಿಣಾಮ ಸುಮಾರು ಏಳು ವಿ ದ್ಯುತ್ ಕಂಬಗಳು ತುಂಡಾಗಿ ಕುಚೂರು ಬೆಳಂಜೆ ಭಾಗದಲ್ಲಿ ವಿದ್ಯುತ್ ಇಲ್ಲದೆ ಸಮಸ್ಯೆ ಎದುರಿಸಬೇಕಾಯಿತು. ಹೆಬ್ರಿ ಕಾರ್ಕಳ ಸಂಪರ್ಕಿಸುವ ಮುಖ್ಯ ರಸ್ತೆ ಮೇಲೆ ಶುಕ್ರವಾರ ಮಧ್ಯ ರಾತ್ರಿ ಬೀಸಿದ ಬಾರಿ ಗಾಳಿಗೆ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು 3 ಕಂಬಗಳು ತುಂಡಾಗಿವೆ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.