Over Speed: ರಾಜ್ಯದ ರಸ್ತೆಗಳಲ್ಲಿ130ಕಿ.ಮೀ.ಕ್ಕಿಂತ ವೇಗಮಿತಿ ಮೀರಿದರೆ ಕೇಸ್‌!

ಸ್ಪಾಟ್‌, ಸೆಕ್ಷನಲ್‌ ಪತ್ತೆ ವ್ಯವಸ್ಥೆ , ಆ. 1ರಿಂದ ರಾಜ್ಯಾದ್ಯಂತ ಜಾರಿ

Team Udayavani, Jul 28, 2024, 7:40 AM IST

Alok-kumar

ರಾಮನಗರ: ರಾಜ್ಯದ ಯಾವುದೇ ರಸ್ತೆಯಲ್ಲಿ 130 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನ ಚಾಲನೆ ಮಾಡಿದರೆ ಆ. 1ರಿಂದ ಪ್ರಕರಣ ದಾಖಲಾಗಲಿದೆ. ಈ ಅಪರಾಧಕ್ಕೆ 2 ಸಾವಿರ ರೂ.ವರೆಗೆ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ಆಗಬಹುದು.

ಸಂಚಾರ ಪೊಲೀಸರು ಅಥವಾ ಟ್ರಾಫಿಕ್‌ ಇಂಟರ್‌ ಸೆಪ್ಟರ್‌ ಮೂಲಕ ಅತೀ ವೇಗದ ವಾಹನ ಚಾಲನೆ ಗುರುತಿಸುವುದಲ್ಲ. ಬದಲಾಗಿ ಸ್ಪಾಟ್‌ ಮತ್ತು ಸೆಕ್ಷನಲ್‌ ಸ್ವರೂಪ- ಹೀಗೆ ಎರಡು ರೀತಿಯಲ್ಲಿ ಅತೀ ವೇಗದ ವಾಹನ ಚಾಲನೆಯನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಲಾಗುತ್ತದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದ ಚಾಲನೆ ಪೊಲೀಸರಿಗೆ ದೊಡ್ಡ ತಲೆನೋವು ಉಂಟು ಮಾಡಿತ್ತು. ಇದರಿಂದ ಅಪಘಾತಗಳು ಹೆಚ್ಚಿದ್ದವು. ಇದಕ್ಕೆ ದಂಡ ವಿಧಿಸುವ ಕ್ರಮ ಅನುಸರಿಸಲಾಗಿತ್ತಾದರೂ ಕೆಲವು ವಾಹನ ಚಾಲಕರು ಕೆಮರಾ ಇರುವಲ್ಲಿ ಮಾತ್ರ ನಿಧಾನವಾಗಿ ಚಲಿಸಿ, ಆ ಸ್ಥಳ ದಾಟಿದ ಮೇಲೆ ವೇಗ ಹೆಚ್ಚಿಸುವುದು ಸೇರಿದಂತೆ ಹಲವು ಕಣ್ತಪ್ಪಿಸುವ ತಂತ್ರಗಳನ್ನು ಅನುಸರಿಸುತ್ತಿದ್ದರು. ಹೀಗಾಗಿ ವಾಹನ ಸವಾರರು ಚಾಪೆ ಕೆಳೆಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರಲು ಹೊರಟಿದ್ದಾರೆ.

ಆ. 1ರಿಂದ ಎಫ್‌ಐಆರ್‌
ಮಿತಿಮೀರಿದ ವೇಗಕ್ಕೆ ಕಡಿವಾಣ ಹಾಕುವುದಕ್ಕಾಗಿ 130 ಕಿ.ಮೀ.ಗಿಂತ ವೇಗವಾಗಿ ವಾಹನ ಚಾಲನೆ ಮಾಡಿದಲ್ಲಿ ಅದನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಎಂದು ಪರಿಗಣಿಸಿ ಅಂತಹ ವಾಹನಗಳ ಮಾಲಕರ ವಿರುದ್ಧ ಆ. 1ರಿಂದ ಎಫ್‌ಐಆರ್‌ ದಾಖಲಿಸಲಾಗುತ್ತದೆ.

ಏನಿದು ಸ್ಪಾಟ್‌ ಮತ್ತು ಸೆಕ್ಷನಲ್‌ ಮಾಪನ?
ಸ್ಪಾಟ್‌ ಅಂದರೆ, ಆ ಕ್ಷಣದಲ್ಲಿ ಎಷ್ಟು ವೇಗದಲ್ಲಿ ವಾಹನ ಸಾಗುತ್ತಿದೆ ಎಂಬುದನ್ನು ಕೆಮರಾ ನೆರವಿನಿಂದ ಮಾಪನ ಮಾಡುವುದು. ಸೆಕ್ಷನಲ್‌ ಅಂದರೆ, ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ವಾಹನ ಎಷ್ಟು ಸಮಯದಲ್ಲಿ ಬಂತು ಎಂಬುದನ್ನು ಅಳೆದು ವೇಗವನ್ನು ಲೆಕ್ಕ ಹಾಕುವುದು. ಕೆಮರಾ ಕಂಡಾಗ ವಾಹನವನ್ನು ನಿಧಾನ ಮಾಡಿ, ಕೆಮರಾ ಮರೆಯಾಗುತ್ತಲೇ ವೇಗ ಹೆಚ್ಚಿಸುವ ವಾಹನ ಚಾಲಕರಿಗೆ ಕಡಿವಾಣ ಹಾಕಲು ಈ ವಿನೂತನ ಉಪಾಯವನ್ನು ಪೊಲೀಸರು ಹೂಡಿದ್ದಾರೆ.

“ಶೇ. 99ರಷ್ಟು ಅಪಘಾತಗಳು ಮಿತಿಮೀರಿದ ವೇಗದ ಸಂಚಾರದಿಂದಲೇ ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಆ. 1ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಸ್ಪಾಟ್‌ ಸ್ಪೀಡ್‌ ಮತ್ತು ಸೆಕ್ಷನಲ್‌ ಸ್ಪೀಡ್‌ ಎಂದು ಎರಡು ರೀತಿಯಲ್ಲಿ ವಾಹನಗಳ ವೇಗವನ್ನು ಅಳೆಯಲಾಗುವುದು.” – ಅಲೋಕ್‌ ಕುಮಾರ್‌, ಎಡಿಜಿಪಿ, ಸಂಚಾರ ಮತ್ತು ರಸ್ತೆ ಸುರಕ್ಷೆ ವಿಭಾಗ

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.