Team India; ದ್ರಾವಿಡ್ ಸಂದೇಶ ನೋಡಿ ಗೌತಮ್ ಗಂಭೀರ್ ಭಾವುಕ
Team Udayavani, Jul 28, 2024, 10:40 AM IST
ನವದೆಹಲಿ: ಶನಿವಾರದಿಂದ ಭಾರತ-ಶ್ರೀಲಂಕಾ ನಡುವೆ ಟಿ20 ಮೂಲಕ ಪ್ರವಾಸ ಸರಣಿ ಆರಂಭವಾಗಿದೆ. ಈ ಸರಣಿ ಮೂಲಕ ಭಾರತ ತಂಡದ ಕೋಚ್ ಆಗಿ ಕಾರ್ಯಾರಂಭ ಮಾಡಿರುವ ಗೌತಮ್ ಗಂಭೀರ್ಗೆ (Gautam Gambhir) ತಂಡದ ಹಿಂದಿನ ಕೋಚ್, ಮಹಾಗೋಡೆ ಖ್ಯಾತಿಯ, ಕನ್ನಡಿಗ ರಾಹುಲ್ ದ್ರಾವಿಡ್ರಿಂದ (Rahul dravid) ಅಚ್ಚರಿಯ ಸಂದೇಶವೊಂದು ಲಭಿಸಿದೆ. ಟ್ವಿಟರ್ ನಲ್ಲಿ ಬಿಸಿಸಿಐನ ವಿಡಿಯೋ ಸಂದೇಶವನ್ನು ನೋಡಿ ಗಂಭೀರ್ ಭಾವುಕರಾಗಿದ್ದಾರೆ.
“ಅತ್ಯಂತ ಉದ್ವಿಗ್ನ ಸ್ಥಿತಿಯಲ್ಲಿ ಉಸಿರನ್ನು ಹೊರಚೆಲ್ಲಿ, ಒಂದು ಹೆಜ್ಜೆ ಹಿಂದಿಡಿ. ಗೌತಮ್ ನಿಮಗೆ ಶುಭವಾಗಲಿ. ನಿಮಗೆ ಎಷ್ಟೇ ಕಷ್ಟವಾದರೂ ನಕ್ಕುಬಿಡಿ. ಅದು ಜನರನ್ನು ಅಚ್ಚರಿಗೆ ತಳ್ಳುತ್ತದೆ’ ಎಂದು ದ್ರಾವಿಡ್ ಅರ್ಥಗರ್ಭಿತವಾಗಿ ಹೇಳಿದ್ದಾರೆ. “ನಾನ್ಯಾವತ್ತೂ ಬಹಳ ಭಾವುಕನಾಗುವುದಿಲ್ಲ. ಆದರೆ ಈ ಸಂದೇಶ ನನ್ನನ್ನು ಬಹಳ ಭಾವುಕನನ್ನಾಗಿಸಿದೆ. ಇದೊಂದು ಶ್ರೇಷ್ಠ ಸಂದೇಶ. ಇಡೀ ದೇಶವನ್ನು, ತಂಡವನ್ನು ಎಲ್ಲಕ್ಕಿಂತ ಮುಖ್ಯವಾಗಿ ನಾನು ಆರಾಧಿಸುವ ರಾಹುಲ್ ಭಾಯ್ರನ್ನು ಹೆಮ್ಮೆ ಪಡುವಂತೆ ಮಾಡುವ ಭರವಸೆಯಿದೆ’ ಎಂದು ಗಂಭೀರ್ ಪ್ರತಿಕ್ರಿಯಿಸಿದ್ದಾರೆ.
2021ರಿಂದ 2024ರ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಮುನ್ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.