UV Campaign: ನಮಗೆ ಕಾಲುಸಂಕ ಬೇಕು- ಬಳುಕುವ ಸಂಕದಿಂದ ಆತಂಕ!


Team Udayavani, Jul 28, 2024, 1:05 PM IST

UV Campaign: ನಮಗೆ ಕಾಲುಸಂಕ ಬೇಕು- ಬಳುಕುವ ಸಂಕದಿಂದ ಆತಂಕ!

ಉಪ್ಪುಂದ : ಹೊಳೆಯ ಒಂದು ದಂಡೆಯಲ್ಲಿ ಅಂಚಿನ ಮಣ್ಣೇ ಆಧಾರ. ಇನ್ನೊಂದು ಕಡೆಯಲ್ಲಿ ಎರಡು ಮರದ ದಿಮ್ಮಿಗಳನ್ನು ನೆಟ್ಟು ಅವುಗಳನ್ನು ಇನ್ನೊಂದು ದಿಮ್ಮಿಯಿಂದ ಜೋಡಿಸಲಾಗಿದೆ. ಅವುಗಳನ್ನು ಮೂರು ಮರಗಳನ್ನು ಅಡ್ಡಲಾಗಿ ಹಾಕಲಾಗಿದೆ. ಅದರ ಮೇಲೆ ಮರದ ಸಣ್ಣ ಸಣ್ಣ ಕೋಲುಗಳನ್ನು ಅಡ್ಡಕ್ಕೆ ಕಟ್ಟಿ ಕಾಲು ಸಂಕ ನಿರ್ಮಿಸಲಾಗಿದೆ. ಆಧಾರಕ್ಕೆ ಹಗ್ಗವನ್ನು ಕಟ್ಟಲಾಗಿದೆ. ಇದರ ಮೇಲೆಯೇ ತುಂಬಿ ಗದ್ದೆ ನಿವಾಸಿಗಳು ನಿತ್ಯ ಸರ್ಕಸ್‌ ನಡೆಸಬೇಕು.

ತಗ್ಗರ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ತುಂಬಿಗದ್ದೆ ಗ್ರಾಮದಲ್ಲಿ ಮರಾಠಿ-ನಾಯ್ಕ ಸಮುದಾಯಕ್ಕೆ ಸೇರಿದ ಜನರೇ ಇರುವ ಊರಿಗೆ ಇದುವ ಪ್ರಧಾನ ಸಂಪರ್ಕವೇ ಈ ಕಾಲು ಸಂಕ. ಇಲ್ಲಿ ಒಬ್ಬಂಟಿಯಾಗಿ ಬಂದು ಕಾಲು ಸಂಕ ದಾಟುವುದು ತುಂಬಾ ಅಪಾಯಾಕಾರಿ. ಯಾಕೆಂದರೆ ಇದು ಅಲುಗಾಡುವ ಸೇತುವೆ! ಅಪಾಯಕ್ಕೆ ಸಿಲುಕಿ ಕೂಗಿಕೊಂಡರೂ ರಕ್ಷಣೆಗೆ ಬರಲು ಸಮೀಪದಲ್ಲಿ ಮನೆಗಳಿಲ್ಲ. ಸುತ್ತಲೂ ಅರಣ್ಯ ಪ್ರದೇಶ. ಅಪ್ಪತಪ್ಪಿ ಬಿದ್ದರೆ ದೇವರೇ ಗತಿ. ತುಂಬಿಗದ್ದೆ ಗ್ರಾಮದಲ್ಲಿ ಸುಮಾರು
17ರಿಂದ 20 ಮನೆಗಳಿವೆ. ಈ ಮರದ ದಿಮ್ಮಿಯ ಕಾಲು ಸಂಕದ ಮೂಲಕ ಪ್ರತಿನಿತ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಂಬಿ ಹರಿಯುವ ನದಿಯನ್ನು ದಾಟುವುದು ಅನಿವಾರ್ಯವಾಗಿದೆ.

ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕು
ಕೆಳಗಡೆ ರಭಸವಾಗಿ ಹರಿಯುವ ನೀರಿನ ಸೆಳೆತ, ಮೇಲೆ ಅಲುಗಾಡುವ ಕಾಲು ಸಂಕದ ಮೇಲೆ ನಿತ್ಯ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ದೊಡ್ಡ ಸವಾಲಿನಿಂದ ಕೂಡಿದೆ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದರೆ ನೀರಿನ ಹರಿಯು ಅಪಾಯದ ಮಟ್ಟವನ್ನು ಮೀರಿ ಸೆಳೆತ ಇರುತ್ತದೆ. ಆಗ ಯಾರು ಕೂಡಾ ಸಂಕ ದಾಟುವ ಸಾಹಸಕ್ಕೆ ಕೈಹಾಕುವುದಿಲ್ಲ. ಇನ್ನು ಮಳೆಗಾಲದಲ್ಲಿ ಹಿರಿಯರನ್ನು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವುದು ಬಲು ಕಷ್ಟ. ಇವರನ್ನು ಸೇತುವೆ ಮೇಲೆ ಹೊತ್ತುಕೊಂಡೇ ಹೋಗಬೇಕು. ಅದಕ್ಕೆ ಅಷ್ಟೇ ಧೈರ್ಯವೂ ಬೇಕು.

ರಾತ್ರಿ ಬೆಳಗಾಗುವುದರೊಳಗೆ ಶಿಫ್ಟ್
ಇಲ್ಲೊಂದು ಸೇತುವೆ ನಿರ್ಮಾಣಕ್ಕೆ ಮಾಜಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರ ಅವಧಿಯಲ್ಲಿ ಅನುದಾನ ನೀಡಲಾಗಿತ್ತು ಎನ್ನುತ್ತಾರೆ ಇಲ್ಲಿ ನಾಗರಿಕರು. ಕಾಮಗಾರಿ ಮಾಡಲು ಸಿದ್ಧತೆ ಕೂಡ ಪ್ರಾರಂಭವಾಗಿತ್ತು. ಆದರೆ ರಾತ್ರಿ ಬೆಳಗಾಗುವುದರೊಳಗೆ ಇಲ್ಲಿಗೆ ಬಂದ ಯಂತ್ರಗಳನ್ನು ಮತ್ತೊಂದು ಕಡೆಗೆ ಸಾಗಿಸಲಾಗಿತ್ತಂತೆ. ಬಳಿಕ ಇಲ್ಲಿ ಸೇತುವೆ ಭರವಸೆಯಾಗಿಯೇ ಉಳಿ ಯಿತು.

ಇವರಿಗೆ ಬೇರೆ ಮಾರ್ಗವೇ ಇಲ್ಲ
ತುಂಬಿಗದ್ದೆಯ ಪರಿಶಿಷ್ಟ ಪಂಗಡದ ನಿವಾಸಿಗಳು ಮಖ್ಯ ರಸ್ತೆಗೆ ಬರಬೇಕಾದರೆ, ನಗರ ಪ್ರದೇಶಗಳಿಗೆ ಸಂಪರ್ಕ ಸಾಧಿಸಬೇಕಾದರೆ ಈ ಕಾಲು ಸಂಕವನ್ನು ದಾಟಿ ಬರಬೇಕು. ಇದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದರೆ ಕಾಲು ಸಂಕದ ಮೇಲೆ ನೀರು ಹರಿಯುತ್ತದೆ. ಮಳೆಗಾಲದಲ್ಲಿ ನೀರಿನ ಸೆಳೆತ ಹೆಚ್ಚಿರುತ್ತದೆ. ಪ್ರತಿ ವರ್ಷ ಮರಗಳನ್ನು ಉಪಯೋಗಿಸಿ ತೂಗು ಸೇತುವೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಇದರ ಮೇಲೆ ಹಿಡಿದುಕೊಂಡು ಹೋಗಲು ಒಂದು ಬದಿಯಿಂದ ಇನ್ನೊಂದು ಬದಿಗೆ ಹಗ್ಗ ಕಟ್ಟಿಕೊಂಡಿದ್ದಾರೆ.

ವಾಹನ ನಿಲ್ಲಿಸಲು ಹೊಳೆ ಬದಿ ಶೆಡ್‌!
ಮಳೆಗಾಲದಲ್ಲಿ ಈ ಊರಿಗೆ ಈ ಕಾಲು ಸಂಕ ಮಾರ್ಗ ಬಿಟ್ಟರೆ ಬೇರೆ ಮಾರ್ಗ ಇಲ್ಲ ತಮ್ಮ ವಾಹನಗಳನ್ನು ನಿಲ್ಲಿಸಲು ಹೊಳೆ ಬದಿಯಲ್ಲಿ ಶೇಡ್‌ಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಎಲ್ಲಿಗೆ ಹೋಗಬೇಕಾದರು ಸೇತುವೆ ಮೂಲಕ ಹೊಳೆ ದಾಟಿ ಪೇಟೆಗೆ ಹೋಗಿ ಬಂದು ಶೇಡ್‌ನ‌ಲ್ಲಿ ಬೈಕ್‌ಗನ್ನು ಇಟ್ಟು ಮನೆಗೆ ತೆರಳಬೇಕು.

ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ
ಜನ ಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ ನಮ್ಮ ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ. ಅನಾರೋಗ್ಯ ಪೀಡಿತರನ್ನು ಮಳೆಗಾಲದಲ್ಲಿ ಆಸ್ಪತ್ರಗೆ ಸಾಗಿಸಲು ತುಂಬಾ ತೊಂದರೆಯಾಗುತ್ತಿದೆ.
*ಕೇಶವ, ಸ್ಥಳೀಯ ನಿವಾಸಿ

*ಕೃಷ್ಣ ಬಿಜೂರು

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

sand

Kundapura: ಮರಳು ಅಕ್ರಮ ಸಾಗಾಟ ಪತ್ತೆ

4

Kundapura: ಕೆಲಸವಿಲ್ಲದೆ ಜುಗುಪ್ಸೆ: ಯುವಕ ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.