Mangaluru: ಚಡ್ಡಿಗ್ಯಾಂಗ್ ಸಿಕ್ಕಿಬಿದ್ದರೂ ತಪ್ಪದ ಕಳ್ಳರ ಭೀತಿ!
ಕನಿಷ್ಠ 5 ಮಂದಿ ಆರೋಪಿಗಳ ಬಂಧನ ಇನ್ನೂ ಬಾಕಿ ಇದೆ.
Team Udayavani, Jul 28, 2024, 2:10 PM IST
ಮಹಾನಗರ: ನಗರದಲ್ಲಿ ಇತ್ತೀಚೆಗೆ ದರೋಡೆ, ಕಳ್ಳತನಗಳನ್ನು ನಡೆಸಿ ಆತಂಕ ಮೂಡಿಸಿದ್ದ “ಚಡ್ಡಿಗ್ಯಾಂಗ್’ನ ಬಂಧನವಾಗಿದ್ದರೂ ಕಳ್ಳರ ಕುರಿತಾದ ಆತಂಕ ಪೂರ್ಣ ದೂರವಾಗಿಲ್ಲ. ಚಡ್ಡಿಗ್ಯಾಂಗ್ನ ನಾಲ್ವರು ಸದಸ್ಯರು ಹಾಗೂ ಇತರ ನಾಲ್ವರು ಕಳ್ಳರ ಬಂಧನವಾದ ಬಳಿಕವೂ ಎರಡು ಕಡೆ ಕಳವು ಯತ್ನ, ಒಂದು ಕಡೆ ಕಳವು ಪ್ರಕರಣ ನಡೆದಿದ್ದು ಅದನ್ನು ಭೇದಿಸುವುದು ಸಾಧ್ಯವಾಗಿಲ್ಲ.
ಮನೆ ಕಳವು ಪ್ರಕರಣ
ಬಿಜೈ ನ್ಯೂರೋಡ್ ಮನೆಯೊಂದರಲ್ಲಿ ಮನೆಯವರು ಇಲ್ಲದ ಸಮಯ ಕಳ್ಳತನ ನಡೆದಿತ್ತು. ಇದು ಜು. 14ರಂದು ಗೊತ್ತಾಗಿತ್ತು. ಪೊಲೀಸರ ಪ್ರಕಾರ ಇಲ್ಲಿನ ಕೃತ್ಯಕ್ಕೂ ಚಡ್ಡಿಗ್ಯಾಂಗ್ ಇತರ ಕೆಲವೆಡೆ ಕೃತ್ಯಕ್ಕೂ ಸಾಮ್ಯತೆ ಇರಲಿಲ್ಲ. ಈ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ.
ಎರಡು ಕಡೆ ಕಳವು ಯತ್ನ
ಜು. 20ರ ತಡರಾತ್ರಿ ಪದವಿನಂಗಡಿ ಸಮೀಪದ ಮನೆಯೊಂದರಲ್ಲಿ ಮನೆಯವರು ಒಳಗೆ ಮಲಗಿದ್ದಾಗ ಕಳ್ಳರ ತಂಡ ಬಾಗಿಲು ಒಡೆಯಲು ಯತ್ನಿಸಿತ್ತು. ಅದೇ ದಿನ ಪದವಿನಂಗಡಿ ಪೆರ್ಲಗುರಿಯಲ್ಲಿ ದೇವಸ್ಥಾನದ ಪರಿಸರದಲ್ಲಿ ಕಳ್ಳರ ತಂಡ ಕಳವಿಗೆ ಹೊಂಚು ಹಾಕುತ್ತಿರುವುದನ್ನು ಸಾರ್ವಜನಿಕರು ನೋಡಿದ್ದರು.
ಉಳಾಯಿಬೆಟ್ಟು ಪ್ರಕರಣ: ಬಾಕಿ ಉಳಾಯಿಬೆಟ್ಟಿನ ಪೆರ್ಮಂಕಿಯಲ್ಲಿ ಉದ್ಯಮಿಯ ಮನೆಯಲ್ಲಿ ನಡೆದಿದ್ದ ದರೋಡೆ
ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಕೃತ್ಯದಲ್ಲಿ ಮತ್ತಷ್ಟು ಮಂದಿ ಪಾಲ್ಗೊಂಡಿದ್ದರು ಎಂಬುದು
ತನಿಖೆ ವೇಳೆ ಗೊತ್ತಾಗಿತ್ತು. ಕನಿಷ್ಠ 5 ಮಂದಿ ಆರೋಪಿಗಳ ಬಂಧನ ಇನ್ನೂ ಬಾಕಿ ಇದೆ.
ಚಡ್ಡಿ ಗ್ಯಾಂಗ್ ಹೆಸರಲ್ಲಿ ಬೇರೆ ಕಳ್ಳರ ಕೃತ್ಯ?
ಚಡ್ಡಿಗ್ಯಾಂಗ್ನ ನಾಲ್ಕು ಮಂದಿಯನ್ನು ಬಂಧಿಸಿದಾಗ ಆ ಗ್ಯಾಂಗ್ನಲ್ಲಿ ಇನ್ನಷ್ಟು ಸದಸ್ಯರಿರುವ ಬಗ್ಗೆ ಗುಮಾನಿ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಚಡ್ಡಿಗ್ಯಾಂಗ್ ಕೋಡಿಕಲ್ನಲ್ಲಿ ನಡೆಸಿದ್ದ ಕೃತ್ಯದಲ್ಲಿ 5 ಮಂದಿ ಪಾಲ್ಗೊಂಡಿದ್ದು, ಸಿಸಿ ಕೆಮರಾ ದೃಶ್ಯದಲ್ಲಿ ಸೆರೆಯಾಗಿತ್ತು. ಆದರೆ ಅನಂತರ 5ನೇ ವ್ಯಕ್ತಿಯಾಗಲಿ, ಚಡ್ಡಿಗ್ಯಾಂಗ್ನ ಇತರ ಸದಸ್ಯರು ಅಥವಾ ಬೇರೊಂದು ತಂಡದ ಪತ್ತೆಯಾಗಿಲ್ಲ.
ಬಂಧಿತವಾಗಿರುವ ಚಡ್ಡಿಗ್ಯಾಂಗ್ನ ಇತರ ಸದಸ್ಯರು ಮತ್ತಷ್ಟು ಕೃತ್ಯಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆಯೇ ಅಥವಾ ಚಡ್ಡಿಗ್ಯಾಂಗ್ನ ಇನ್ನೊಂದು ತಂಡ ಕಳವು ಕೃತ್ಯಗಳನ್ನು ಮುಂದುವರಿಸುತ್ತಿದೆಯೇ? ಚಡ್ಡಿಗ್ಯಾಂಗ್ ಮೇಲೆ ಪೊಲೀಸರು, ಜನರು ಗಮನ ಕೇಂದ್ರೀಕರಿಸುತ್ತಿರುವ ಈ ಸಂದರ್ಭವನ್ನು ಬಳಸಿಕೊಂಡು ಇತರ ತಂಡಗಳು ಕಳವಿಗೆ ಯತ್ನಿಸುತ್ತಿವೆಯೇ ಎಂಬ ಸಂಶಯಗಳು ಕೂಡ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.