Panchamasali ಉಭಯ ಸ್ವಾಮೀಜಿಗಳ ಮುನಿಸು ಮುಂದುವರಿಕೆ
ಮುಖ ನೋಡಲಿಲ್ಲ, ಔಪಚಾರಿಕವಾಗಿಯೂ ಮಾತನಾಡಲಿಲ್ಲ....
Team Udayavani, Jul 28, 2024, 7:30 PM IST
ಗದಗ: ಪಂಚಮಸಾಲಿ ಸಮಾಜದ ಉಭಯ ಸ್ವಾಮಿಜಿಗಳ ಮುನಿಸು ಮುಂದುವರೆದಿದೆ ಎಂಬುದಕ್ಕೆ, ಇಂದು ನಗರದಲ್ಲಿ ನಡೆದ ಪಂಚಮಸಾಲಿ ಸಮಾಜದ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಹೌದು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಪಂಚಮಸಾಲಿ ಸಮಾಜದ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಭಾಗವಹಿಸಿ, ಅಕ್ಕ ಪಕ್ಕ ಕುಳಿತು ವೇದಿಕೆ ಹಂಚಿಕೊಂಡರು. ನಾನೊಂದು ತೀರ, ನಿನೊಂದು ತೀರ ಅನ್ನುವ ಹಾಗೆ ಎರಡು ಗಂಟೆಗಳ ಕಾಲ ಕೂತರು ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಕಾರ್ಯಕ್ರಮದಲ್ಲಿ ಇಬ್ಬರು ಅಕ್ಕ ಪಕ್ಕದ ಆಸನದಲ್ಲೇ ಕೂತಿದ್ದರೂ ಮುಖ ನೋಡಲಿಲ್ಲ, ಔಪಚಾರಿಕವಾಗಿಯೂ ಮಾತನಾಡಲಿಲ್ಲ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ 2019 ರಲ್ಲಿ ಉಭಯ ಶ್ರೀ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆ ನಂತರ ಪ್ರತ್ಯೇಕವಾಗಿ ಹೋರಾಟ ಮಾಡಿಕೊಂಡು ಬಂದರು. ಆಗಿಂದ ಇಲ್ಲಿಯವರೆಗೆ ಪಂಚಮಸಾಲಿ ಸಮಾಜದ ಇಬ್ಬರು ಸ್ವಾಮಿಗಳ ಮಧ್ಯೆ ಮುನಿಸು ಮತ್ತೆ ಮುಂದುವರೆದಿತ್ತು. ಇವತ್ತು ಸಚಿವ ಎಚ್.ಕೆ ಪಾಟೀಲ್, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸಿ.ಸಿ ಪಾಟೀಲ್ ಹಾಗೂ ಹಲವು ಶಾಸಕರು, ಮುಖಂಡರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮುನಿಸು ಜೋರಾಗಿತ್ತು. ಇವನ್ನೆಲ್ಲಾ ನೋಡಿದ್ರೆ ಶ್ರೀಗಳ ಮುನಿಸು ಇಬ್ಬರ ಮನದಲ್ಲಿದೆ ಎಂಬುದು ಇವತ್ತಿನ ಗದಗ ಕಾರ್ಯಕ್ರಮದಲ್ಲಿ ಮತ್ತಷ್ಟು ಸಾಬೀತಾದಂತಾಯಿತು. ಕೂಡಲಸಂಗಮ ಪೀಠದ ಶ್ರೀಗಳು ಈ ಬಗ್ಗೆ ಅಲ್ಲಗಳೆದು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.