Jan Suraaj; ಗಾಂಧಿ ಜಯಂತಿಯ ದಿನ ಹೊಸ ಪಕ್ಷ ಹುಟ್ಟು ಹಾಕಲಿರುವ ಪ್ರಶಾಂತ್ ಕಿಶೋರ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ... ಕರ್ಪೂರಿ ಠಾಕೂರ್ ಮೊಮ್ಮಗಳ ಬೆಂಬಲ
Team Udayavani, Jul 28, 2024, 9:36 PM IST
ಪಾಟ್ನಾ: ಗಾಂಧಿ ಜಯಂತಿಯ ದಿನ ಅಕ್ಟೋಬರ್ 2 ರಂದು ತಮ್ಮ ‘ಜನ್ ಸೂರಾಜ್’ ಅಭಿಯಾನವು ರಾಜಕೀಯ ಪಕ್ಷವಾಗಲಿದೆ ಮತ್ತು ಮುಂದಿನ ವರ್ಷ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಮಾಜಿ ಚುನಾವಣ ತಂತ್ರಗಾರ ಪ್ರಶಾಂತ್ ಕಿಶೋರ್ ಭಾನುವಾರ ಘೋಷಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರ ಮೊಮ್ಮಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದ ‘ಜನ್ ಸೂರಾಜ್’ ನ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಕಿಶೋರ್ ಅವರು ಮಾತನಾಡಿದರು.”ಈ ಹಿಂದೆ ಹೇಳಿದಂತೆ, ‘ಜನ್ ಸೂರಾಜ್’ ಅಕ್ಟೋಬರ್ 2 ರಂದು ರಾಜಕೀಯ ಪಕ್ಷವಾಗುತ್ತದೆ ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಕ್ಷದ ನಾಯಕತ್ವದಂತಹ ಇತರ ವಿವರಗಳನ್ನು ಸೂಕ್ತ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಎರಡು ವರ್ಷಗಳ ಹಿಂದೆ ಪ್ರಚಾರವನ್ನು ಪ್ರಾರಂಭಿಸಿದ ಕಿಶೋರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಕಿರಿಯ ಪುತ್ರ ವೀರೇಂದ್ರ ನಾಥ್ ಠಾಕೂರ್ ಅವರ ಪುತ್ರಿ ಜಾಗೃತಿ ಠಾಕೂರ್ ಅವರು ಬೆಂಬಲಿಸಿದ್ದಾರೆ. ಠಾಕೂರ್ ಅವರ ಹಿರಿಯ ಪುತ್ರ ರಾಮ್ ನಾಥ್ ಠಾಕೂರ್ ಜೆಡಿಯು ಸಂಸದ ಮತ್ತು ಕೇಂದ್ರ ರಾಜ್ಯ ಸಚಿವರಾಗಿದ್ದಾರೆ.
ಅಶಿಸ್ತಿನ ಆಧಾರದ ಮೇಲೆ ಇತ್ತೀಚೆಗೆ ವಿಧಾನ ಪರಿಷತ್ತಿಗೆ ಅನರ್ಹಗೊಂಡಿದ್ದ ಆರ್ಜೆಡಿ ಮಾಜಿ ಎಂಎಲ್ಸಿ ರಂಬಾಲಿ ಸಿಂಗ್ ಚಂದ್ರವಂಶಿ ಮತ್ತು ಬಿಜೆಪಿ ಟಿಕೆಟ್ ಸಿಗದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಬಕ್ಸರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರೂ ‘ಜನ್ ಸೂರಾಜ್’ ಸೇರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.