ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ 10ನೇ ದಿನಕ್ಕೆ; ಕರ್ನಾಟಕ ಕರಾವಳಿಗೆ ಅಪಾಯವಿಲ್ಲ

ನಾಪತ್ತೆಯಾದ ಓರ್ವನ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ. 

Team Udayavani, Jul 29, 2024, 11:20 AM IST

ಹಡಗಿನ ಬೆಂಕಿ ನಂದಿಸುವ ಕಾರ್ಯಾಚರಣೆ 10ನೇ ದಿನಕ್ಕೆ; ಕರ್ನಾಟಕ ಕರಾವಳಿಗೆ ಅಪಾಯವಿಲ್ಲ

ಮಂಗಳೂರು: ಗುಜರಾತ್‌ ನಿಂದ ಶ್ರೀಲಂಕಾದ ಕೊಲಂಬೋಗೆ ಸರಕುಗಳನ್ನು ಸಾಗಿಸುತ್ತಿದ್ದ ಪನಾಮಾ ದೇಶದ ಮಾಯರಿಸ್ಕ್ ಫ್ರಾಂಕ್‌ಫ‌ರ್ಟ್‌ ಹೆಸರಿನ ಹಡಗಿನ (ಕಂಟೈನರ್‌ ವಾಹಕ ನೌಕೆ) ಬೆಂಕಿ ನಂದಿಸುವ ಹಾಗೂ ಸಂಭಾವ್ಯ ಸಮುದ್ರ
ಮಾಲಿನ್ಯ ತಡೆಗಟ್ಟುವ “ಸಹಾಯತಾ’ ಕಾರ್ಯಾಚರಣೆ ರವಿವಾರ 10ನೇ ದಿನ ಪೂರೈಸಿದೆ.

ಸದ್ಯ ಹಡಗು ಮಂಗಳೂರಿನಿಂದ ನೈಋತ್ಯಕ್ಕೆ 50 ನಾಟಿಕಲ್‌ ಮೈಲು ಹಾಗೂ ಸಮುದ್ರ ತೀರದಿಂದ 37 ನಾಟಿಕಲ್‌ ಮೈಲು ದೂರದಲ್ಲಿದೆ. ಕರ್ನಾಟಕ ಭಾಗದಲ್ಲಿ ಸಮುದ್ರ ಮಾಲಿನ್ಯ ಅಥವಾ ಇತರ ಯಾವುದೇ ರೀತಿಯ ಅಪಾಯಗಳಿಲ್ಲ ಎಂದು
ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಈ ಹಡಗು ಜು.19ರಂದು ಗೋವಾದಿಂದ 80 ನಾಟಿಕಲ್‌ ಮೈಲು ದೂರದಲ್ಲಿ ಸಂಚರಿಸುತ್ತಿದ್ದಾಗ ಸರಕುಗಳು ತುಂಬಿದ್ದ ಕಂಟೈನರ್‌ ಗೆ ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ 21 ಮಂದಿ ವಿದೇಶಿ ಸಿಬಂದಿ ಇದ್ದು, ಈ ಪೈಕಿ ಓರ್ವ ನಾಪತ್ತೆಯಾಗಿದ್ದಾರೆ. ಉಳಿದವರು ಸುರಕ್ಷಿತರಾಗಿದ್ದಾರೆ.ಹಡಗು ಕೂಡ ಸ್ಥಿರವಾಗಿದೆ ಎಂದು ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಕರಾವಳಿ ರಕ್ಷಣ ಪಡೆಯ 5 ಹಡಗುಗಳು, 2 ಎಎಲ್‌ಎಚ್‌ ಹೆಲಿಕಾಪ್ಟರ್‌ಗಳು ಮತ್ತು 1 ಡಾರ್ನಿಯರ್‌ ಏರ್‌ಕ್ರಾಫ್ಟ್‌ ಗಳು ಸಹಾಯತಾ ಕಾರ್ಯಾಚರಣೆ ನಡೆಸಿದ್ದು, ಇದುವರೆಗೆ ಬೆಂಕಿ ನಂದಿಸುವುದಕ್ಕಾಗಿ 1,200 ಕೆ.ಜಿಗೂ ಅಧಿಕ ಡ್ರೈ ಕೆಮಿಕಲ್‌ ಪೌಡರನ್ನು ಸುರಿಯಲಾಗಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಇರುವ ಕರಾವಳಿ ರಕ್ಷಣ ಪಡೆಯ ವಿಶೇಷ ಹಡಗು “ಸಮುದ್ರ ಪ್ರಹಾರಿ’ ಕೂಡ ಕಾರ್ಯಾಚರಣೆಯಲ್ಲಿದ್ದು, ಈ ಹಡಗು ಡೈನಾಮಿಕ್‌ ಪೊಸಿಸನಿಂಗ್‌ ಸಿಸ್ಟಂ ಅನ್ನು ಹೊಂದಿದೆ. ಹಡಗಿನ ತುಂಬಾ ಸನಿಹದಿಂದಲೇ ಬೆಂಕಿ ನಂದಿಸುವ ಕಾರ್ಯಾಚರಣೆ ಕೂಡ ನಡೆಸುತ್ತದೆ. ಈಗಾಗಲೇ ಶಿಪ್ಪಿಂಗ್‌ ಡಿಜಿ, ರಾಜ್ಯ ಸರಕಾರ, ಬಂದರುಗಳು, ಸಾಲ್ವೇಜ್‌ ಏಜೆನ್ಸಿ, ಶಿಪ್‌ ಮಾಲಕರೊಂದಿಗೆ ಕರಾವಳಿ ರಕ್ಷಣ ಪಡೆ ಸಮನ್ವಯತೆ ಸಾಧಿಸುತ್ತಿದ್ದು, ಶೀಘ್ರ ಬೆಂಕಿ ನಂದಿಸುವ ವಿಶ್ವಾಸವಿದೆ ಎಂದು ಕರಾವಳಿ ರಕ್ಷಣ ಪಡೆ ತಿಳಿಸಿದೆ.

ಹೆಚ್ಚುವರಿ ಟಗ್‌ಗಳು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ. ಅಲ್ಲದೆ ಶಾರ್ಜಾದಿಂದ ಎಚ್‌ಟಿಎಸ್‌ ಹಡಗು ಕೂಡ
ಜು.30ರಿಂದ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಪತ್ತೆಯಾದ ಓರ್ವನ ಪತ್ತೆಗೂ ಕಾರ್ಯಾಚರಣೆ ನಡೆಯುತ್ತಿದೆ.

ಸಮುದ್ರ ಪ್ರಕ್ಷುಬ್ಧಗೊಂಡಿರುವುದು ಕಾರ್ಯಾಚರಣೆಗೆ ಸವಾಲಾಗಿದೆ. ಬೆಂಕಿಯನ್ನು ಶೀಘ್ರದಲ್ಲೇ ಪೂರ್ಣ ವಾಗಿ ನಂದಿಸುವ ವಿಶ್ವಾಸವಿದೆ. ಅದೇ ರೀತಿ ಯಾವುದೇ ಮಾಲಿನ್ಯ ತಡೆಯಲು ಕೂಡ ಅಗತ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ.

ಟಾಪ್ ನ್ಯೂಸ್

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.