Monsoon Special Recipes; ನಿಮಗೆಷ್ಟು ಗೊತ್ತು ತಗತೆ ಸೊಪ್ಪಿನ ಮಹತ್ವ ..ಇಲ್ಲಿದೆ ರೆಸಿಪಿ
ಈ ಸೊಪ್ಪು ಸೇವನೆಯಿಂದ ನಮ್ಮ ಆರೋಗ್ಯ ಹೇಗಿರುತ್ತೆ ಗೊತ್ತಾ .. !
Team Udayavani, Jul 30, 2024, 9:15 AM IST
ಮಳೆಗಾಲ ಶುರುವಾಯ್ತು ಅಂದ್ರೆ ಕರಾವಳಿ ಹಾಗೂ ಮಲೆನಾಡು ಭಾಗದ ಆಹಾರದಲ್ಲಿ ತನ್ನದೇ ಆದ ಛಾಪು ಮೂಡಿದೆ. ಯಾಕೆಂದರೆ ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತಲು ಸಿಗುವ ಪೌಷ್ಟಿಕಾಂಶಯುಕ್ತ ಸೊಪ್ಪುಗಳನ್ನು ಬಳಕೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅದರಂತೆ ಮಳೆಗಾಲದಲ್ಲಿ ನಮ್ಮ ಪರಿಸರದಲ್ಲೇ ಯಥೇಚ್ಛವಾಗಿ ಬೆಳೆದಿರುವ ತಗತೆ(ಟೆ)ಸೊಪ್ಪು ಕಾಣಸಿಗುತ್ತದೆ. ಇದನ್ನು ತುಳುವಿನಲ್ಲಿ ತಜಂಕ್, ತೊಜಂಕ್ ಹೀಗೆ ಆಡುಭಾಷೆಯಲ್ಲಿ ನಾನಾ ರೀತಿಯಲ್ಲಿ ಕರೆಯುತ್ತಾರೆ. ಕರಾವಳಿಯಲ್ಲಿ ಆಷಾಢಮಾಸದಲ್ಲಿ ಇದನ್ನು ಅಡುಗೆ ಮಾಡಿ ತಿನ್ನಬೇಕೆಂಬ ಸಂಪ್ರದಾಯವೂ ನಮ್ಮ ತುಳುನಾಡಿನಲ್ಲಿ ಇವತ್ತಿಗೂ ಜನಪ್ರಿಯವಾಗಿದೆ.
ಈ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೇ ಇದರಲ್ಲಿ ಜೌಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿ ಇದನ್ನು ಉಪಯೋಗಿಸುತ್ತಾರೆ. ಈ ಸೊಪ್ಪಿನಿಂದ ದೋಸೆ, ಪ್ರತೋಡೆ, ವಡೆ, ಸುಕ್ಕ, ಪಲ್ಯ… ಹೀಗೆ ನಾನಾ ಬಗೆಯ ತಿಂಡಿ-ತಿನಿಸುಗಳನ್ನು ಮಾಡುತ್ತಾರೆ.
ಹಾಗಾದರೆ ಬನ್ನಿ ನಾವಿಂದು ನಿಮಗಾಗಿ ವಿಭಿನ್ನ ಟೇಸ್ಟ್ ನ ತಗತೆ ಸೊಪ್ಪಿನ ವಡೆ ಹಾಗೂ ದೋಸೆಯನ್ನು ಹೇಗೆ ಮಾಡುವುದು ಎಂಬುವುದರ ಬಗ್ಗೆ ಹೇಳಿಕೊಡುತ್ತೇವೆ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿ ಸವಿಯಬಹುದು.
ತಗತೆ ಸೊಪ್ಪಿನ ವಡೆ
ಬೇಕಾಗುವ ಸಾಮಗ್ರಿಗಳು
ತಗತೆ ಸೊಪ್ಪು(ಚಿಗುರು ಎಲೆ)-4 ಕಪ್(ಸಣ್ಣದಾಗಿ ಹೆಚ್ಚಿದ್ದು),ಬೆಳ್ತಿಗೆ ಅಕ್ಕಿ-ಅರ್ಧ ಕಪ್(2ಗಂಟೆ ನೆನೆಸಿದ ಅಕ್ಕಿ),ತೊಗರಿ ಬೇಳೆ-1/4 ಕಪ್(2 ಗಂಟೆ ನೆನೆಸಿದ ಬೇಳೆ), ಒಣಮೆಣಸು (ಬ್ಯಾಡಗಿಮೆಣಸು)-6ರಿಂದ8, ತೆಂಗಿನ ತುರಿ-1/4ಕಪ್, ಕೊತ್ತಂಬರಿ-2ಚಮಚ, ಹುಣಸೇ ಹಣ್ಣು(ಲಿಂಬೆ ಗಾತ್ರದಷ್ಟು), ಹಿಂಗಿನ ನೀರು ಸ್ವಲ್ಪ, ಎಣ್ಣೆ-ಕರಿಯಲು,ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ಚಿಗುರಿದ ತಗತೆ ಎಲೆಗಳನ್ನು ಬಿಡಿಸಿ ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ನೆನೆಸಿದ ಅಕ್ಕಿ,ತೊಗರಿ ಬೇಳೆ, ಒಣಮೆಣಸು, ಕೊತ್ತಂಬರಿ, ಹುಣಸೇ ಹಣ್ಣು ಹಾಗೂ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬಬಾರದು). ರುಬ್ಬಿಟ್ಟ ಮಸಾಲೆಗೆ ಸ್ವಲ್ಪ ಹಿಂಗಿನ ನೀರನ್ನು ಬೆರೆಸಿ ಅದಕ್ಕೆ ತಗತೆ ಸೊಪ್ಪನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ತದನಂತರ ಒಲೆಯ ಮೇಲೆ ಒಂದು ಬಾಣಲೆಯಿಟ್ಟು ಎಣ್ಣೆ ಹಾಕಿ ಕಾದನಂತರ ಮಾಡಿಟ್ಟ ಹಿಟ್ಟನ್ನು ಚಿಕ್ಕ-ಚಿಕ್ಟ ಉಂಡೆಗಳನ್ನಾಗಿ ಮಾಡಿ ತೆಳ್ಳಗೆ ತಟ್ಟಿ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಆರೋಗ್ಯಭರಿತ ತಗತೆ ಸೊಪ್ಪಿನ ವಡೆ ಸವಿಯಲು ಸಿದ್ಧ.
ತಗತೆ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್, ತಗತೆ ಸೊಪ್ಪು-1ಕಪ್, ಕಡ್ಲೆಬೇಳೆ-2ಚಮಚ, ಉದ್ದಿನ ಬೇಳೆ-2ಚಮಚ, ಮೆಂತೆ-1/4ಚಮಚ, ಕೊತ್ತಂಬರಿ-2ಚಮಚ, ಜೀರಿಗೆ-1ಚಮಚ, ಒಣಮೆಣಸು-7ರಿಂದ8, ಎಣ್ಣೆ-3ಚಮಚ, ಹುಣಸೇ ಹಣ್ಣು-ಬೆಲ್ಲ(ನೆಲ್ಲಿ ಗಾತ್ರದಷ್ಟು), ಕರಿಬೇವು-2ಎಸಳು, ತೆಂಗಿನ ತುರಿ-ಅರ್ಧಕಪ್, ಹಿಂಗು-ಸ್ವಲ್ಪ, ಅರಿಶಿನ ಪುಡಿ-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಮೊದಲಿಗೆ ತಗತೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ 3 ಚಮಚ ಎಣ್ಣೆ ಹಾಕಿ ಅದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಮೆಂತೆ ಹಾಕಿ ಸ್ವಲ್ಪ ಕೆಂಪಾಗುವ ತನಕ ಹುರಿಯಿರಿ. ತದನಂತರ ಕೊತ್ತಂಬರಿ, ಜೀರಿಗೆ, ಒಣಮೆಣಸು, ಕರಿಬೇವಿನ ಎಸಳು ಹಾಕಿ ಪುನಃ ಸ್ವಲ್ಪ ಹುರಿಯಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿಜಾರಿಗೆ ತೆಂಗಿನ ತುರಿ, ಹಿಂಗು, ಹುಣಸೇ ಹಣ್ಣು, ಬೆಲ್ಲ, ಅರಿಶಿನ, ನೆನೆಸಿಟ್ಟ ಅಕ್ಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಾಡಿಟ್ಟ ಮಸಾಲೆಯನ್ನು ಹಾಕಿ,ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತದನಂತರ ಹೆಚ್ಚಿಟ್ಟ ತಗತೆ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ನಂತರ ಒಲೆಯ ಮೇಲೆ ಕಾವಲಿ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ,ಸೌಟಿನಲ್ಲಿ ಮಾಡಿಟ್ಟ ತಗತೆ ಸೊಪ್ಪಿನ ದೋಸೆ ಹಿಟ್ಟನ್ನು ಕಾವಲಿ ಮೇಲೆ ಹಾಕಿ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿದರೆ ಸ್ವಾದಿಷ್ಟಕರವಾದ ತಗತೆ ಸೊಪ್ಪಿನ ದೋಸೆ ಸವಿಯಲು ಸಿದ್ಧ.
-ಶ್ರೀರಾಮ್ ಜಿ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!
International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ
Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್ ಪ್ಯಾಕ್; ಇದರ ಲಾಭವೇನು ಗೊತ್ತಾ?
South Indian actors: ನಾಗಾರ್ಜುನ್ ಟು ವಿಜಯ್; ದಕ್ಷಿಣ ಭಾರತದ ಶ್ರೀಮಂತ ನಟರು ಯಾರ್ಯಾರು
Special Food ಮನೆಯಲ್ಲೊಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ… ಟೇಸ್ಟ್ ಹೇಗಿದೆ ಹೇಳಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.