Railway Track: ಸುರಕ್ಷೆ, ತ್ವರಿತ ಕಾರ್ಯಕ್ಕೆ ಆದ್ಯತೆ: ಶ್ರೀವಾಸ್ತವ

ದೋಣಿಗಾಲ್‌ ಭೂಕುಸಿತ ಸ್ಥಳಕ್ಕೆ ನೈಋತ್ಯ ರೈಲ್ವೇ ಮಹಾಪ್ರಬಂಧಕರ ಭೇಟಿ

Team Udayavani, Jul 30, 2024, 7:10 AM IST

Railway-Track

ಮಂಗಳೂರು: ಕಡಗರವಳ್ಳಿ ಹಾಗೂ ಎಡಕುಮೇರಿ ಮಧ್ಯೆ ರೈಲು ಮಾರ್ಗದಲ್ಲಿ ಆಗಿರುವ ಭೂಕುಸಿತ, ಅಲ್ಲಿನಡೆಯುತ್ತಿರುವ ದುರಸ್ತಿ ಕೆಲಸಗಳ ಪರಿಶೀಲನೆಗೆ ವಿಶೇಷ ಪರಿಶೀಲನಾ ರೈಲಿನಲ್ಲಿ ನೈಋತ್ಯ ರೈಲ್ವೇ ಮಹಾಪ್ರಬಂಧಕರು ಸೋಮವಾರ ಆಗಮಿಸಿದ್ದಾರೆ.

ಆಗಬೇಕಾದ ಕೆಲಸಗಳನ್ನು ಮನಗಂಡು, ಅಗತ್ಯವಿರುವ ತಾಂತ್ರಿಕ ಸಲಹೆ ನೀಡುವುದಕ್ಕಾಗಿ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಅವರು ಈ ರೈಲಿನಲ್ಲಿ ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳ ಪರಿಶೀಲಿಸಿ, ಭೂಕುಸಿತ ಪ್ರದೇಶದಲ್ಲಿ ಸುಧಾರಣ ಕೆಲಸಗಳ ಪ್ರಗತಿ ವೀಕ್ಷಿಸಿ, ದುರಸ್ತಿ ಕೆಲಸದಲ್ಲಿ ಆಗಬೇಕಿರುವ ಸುರಕ್ಷಾ ಕ್ರಮಗಳನ್ನು ಸೂಚಿಸಿದರು.
ಈ ವೇಳೆ ಮಾತನಾಡಿದ ಶ್ರೀವಾಸ್ತವ, ಸುರಕ್ಷೆ, ತ್ವರಿತವಾದ ದುರಸ್ತಿ ಕಾರ್ಯಗಳು ನಮ್ಮ ಆದ್ಯತೆ, ಇದರಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಸುರಿಯುವ ನಡುವೆ ನಿರಂತರವಾಗಿ ದುರಸ್ತಿ ಕಾರ್ಯಗಳು ನಡೆಯುತ್ತಿವೆ. ಸುಮಾರು 50 ಅಡಿ ಭೂಕುಸಿತವಾದ ಹಿನ್ನೆಲೆಯಲ್ಲಿ ತಳದಿಂದಲೇ ಮರಳುಚೀಲ, ಬಂಡೆಗಳ ನ್ನಿರಿಸಿ ಜಾರದಂತೆ ಗೇಬಿಯನ್‌ ಮೆಷ್‌ನೊಂದಿಗೆ ದುರಸ್ತಿ ನಡೆಸಲಾಗುತ್ತಿದೆ.

ಈ ರೀತಿಯ ಸನ್ನಿವೇಶಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಮೂರು ಕನ್ಸಲ್ಟೆನ್ಸಿಗಳ ಅಭಿಪ್ರಾಯ ವನ್ನೂ ಕೇಳಲಾಗಿದ್ದು, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಮಳೆಯ ಪರಿಸ್ಥಿತಿ ತುಸು ಸುಧಾರಿಸಿದ್ದು, ಕಾಮಗಾರಿ ವೇಗ ಪಡೆದಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಹಳಿ ರೈಲು ಸಂಚಾರಕ್ಕೆ ಸಿದ್ಧಗೊಳ್ಳುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

2 ವಿಶೇಷ ರೈಲು
ಈ ನಡುವೆ ರೈಲು ಪ್ರಯಾಣಿಕರ ದಟ್ಟಣೆ ಹಗುರಗೊಳಿಸಲು ಮಡ ಗಾಂವ್‌- ಬೆಂಗಳೂರು ಮಧ್ಯೆ ಹಾಗೂ ಕಾರವಾರ ಬೆಂಗಳೂರು ಮಧ್ಯೆ ಮಂಗಳೂರು-ಶೋರನೂರು ದಾರಿಯಾಗಿ ಎರಡು ರೈಲುಗಳನ್ನು ಓಡಿಸಲಾಗುತ್ತಿದೆ.

ನಂ.01696 ಮಡಗಾಂವ್‌ ಜಂಕ್ಷನ್‌ ಕೆಎಸ್‌ಆರ್‌ ಬೆಂಗಳೂರು ಏಕಮುಖ ರೈಲು ಮಡಗಾಂವ್‌ನಿಂದ ಜು.30ರಂದು ಸಂಜೆ 4.30ಕ್ಕೆ ಹೊರಟು ಮರುದಿನ ಸಂಜೆ 3.30ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೆ ಕಾನಕೋನ, ಕಾರವಾರ, ಅಂಕೋಲ, ಗೋಕರ್ಣರೋಡ್‌, ಕುಮಟ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್‌ ಬೈಂದೂರು, ಕುಂದಾಪುರ, ಬಾಕೂìರು, ಉಡುಪಿ, ಮೂಲ್ಕಿ, ಸುರತ್ಕಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು, ಕಣ್ಣೂರಿನಲ್ಲಿ ನಿಲುಗಡೆ ಇರುತ್ತದೆ.

ನಂ.01656 ಕಾರವಾರ ಯಶವಂತಪುರ ಏಕಮುಖ ರೈಲು ಜು.31ರಂದು ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಟು ಮರುದಿನ ಮುಂಜಾನೆ 2.15ಕ್ಕೆ ಯಶವಂತಪುರ ತಲುಪಲಿದೆ. ಅಂಕೋಲ, ಗೋಕರ್ಣರೋಡ್‌, ಕುಮಟ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್‌ ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್‌, ಮಂಗಳೂರು ಜಂಕ್ಷನ್‌, ಕಾಸರಗೋಡು, ಕಣ್ಣೂರು ಸಹಿತ ನಿಲುಗಡೆ ಇರುತ್ತದೆ. ಈ ರೈಲಿನಲ್ಲಿ 2 ವಿಸ್ತಾಡೋಮ್‌ ಕೋಚ್‌ಗಳೂ ಇರಲಿವೆ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.