Wayanad; ಯುದ್ದೋಪಾದಿಯಲ್ಲಿ ರಕ್ಷಣೆ ಕಾರ್ಯಾಚರಣೆ, ಪರಿಹಾರ; ಎನ್‌ಡಿಆರ್‌ಎಫ್, ಸೇನೆ ಭಾಗಿ


Team Udayavani, Jul 31, 2024, 6:59 AM IST

Wayanad; Rescue operation;NDRF, Army involved

ತಿರುವನಂತಪುರ: ವಯನಾಡಿನಲ್ಲಿ ಭೂಕುಸಿತದಿಂದ ಉಂಟಾದ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಯುದ್ಧದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಎನ್‌ಡಿಆರ್‌ಎಫ್, ಕೇರಳ ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಭಾರತೀಯ ಸೇನಾ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣ ಕಾರ್ಯ ಕೈಗೊಳ್ಳಲು ಎನ್‌ಡಿಆರ್‌ಎಫ್ 4 ತಂಡಗಳನ್ನು ನಿಯೋಜಿಸಿದೆ.  ಅವುಗಳು ಸಾಮಗ್ರಿ, ಯಂತ್ರಗಳು, ಆಧುನಿಕ ಬೋಟ್‌ಗಳು, ಔಷಧಗಳನ್ನು ಹೊಂದಿವೆ. ಪ್ರತೀ ತಂಡದಲ್ಲಿ 30 ಸದಸ್ಯರಿದ್ದು ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ.

ಭಾರತೀಯ ಸೇನೆಯೂ ಭಾಗಿ: ಭೂಕುಸಿತದಲ್ಲಿ ಸಿಲುಕಿದವರ ರಕ್ಷಣೆ, ನಾಪತ್ತೆಯಾದವರ ಹುಡುಕಾಟಕ್ಕೆ ಭಾರತೀಯ ಸೇನೆಯೂ ಕೈಜೋಡಿಸಿದ್ದು ಮದ್ರಾಸ್‌  ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಸೆಕೆಂಡ್‌ ಇನ್‌ ಕಮಾಂಡ್‌ನ‌ 43 ಯೋಧರ ತಂಡ ವಯನಾಡ್‌ನ‌ಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಇದರಲ್ಲಿ ಓರ್ವ ಮೆಡಿಕಲ್‌ ಆಫೀಸರ್‌, ಇಬ್ಬರು ಜೂನಿಯರ್‌ ಕಮಿಷನ್‌x ಅಧಿಕಾರಿ, 40 ಯೋಧರಿದ್ದು ತೀವ್ರ ಕಠಿನ ಪ್ರದೇಶದಲ್ಲಿ ನೆರವು ನೀಡಲು ಅಗತ್ಯ ಉಪಕರಣಗಳನ್ನು ಈ ತಂಡ ಹೊಂದಿದೆ. ಇದರ ಜತೆಗೆ ಸೇನಾ ಎಂಜಿನಿಯರಿಂಗ್‌ ತಂಡ ಕೂಡ ವಯನಾಡಿಗೆ ಬಂದಿದೆ.  ಜತೆಗೆ 67 ಮಂದಿ ಡಿಫೆನ್ಸ್‌ ಸೆಕ್ಯುರಿಟಿ ಕಾಪ್ಸ್‌ì ಯೋಧರು ಕಣ್ಣೂರಿನಿಂದ ಆ್ಯಂಬುಲೆನ್ಸ್‌, 3 ಟ್ರಕ್‌ ಲೋಡ್‌ ಸಾಮಗ್ರಿಗಳ ಜತೆ ಬಂದಿದ್ದಾರೆ. ಇದಲ್ಲದೆ ಎಳಿಮಾಲಾ ನೌಕಾ ಅಕಾಡೆಮಿಯ ನೌಕಾ ತಂಡ ಕೂಡ ವಯನಾಡಿಗೆ ಆಗಮಿಸಿದೆ.  ಡ್ರೋನ್‌ ಮತ್ತು ಪೊಲೀಸ್‌ ಶ್ವಾನದಳವನ್ನು ರಕ್ಷಣ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ.

ಕೇರಳ ಶಸಸ್ತ್ರ ಪೊಲೀಸ್‌ ಪಡೆಯ 4 ಮತ್ತು 5ನೇ ಬೆಟಾಲಿಯನ್‌, ಮಲಬಾರ್‌ ಸ್ಪೆಷಲ್‌ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಸೇನಾ ಶ್ವಾನದಳದಿಂದಲೂ ರಕ್ಷಣ ಕಾರ್ಯಕ್ಕೆ ನೆರವು: ಭಾರತೀಯ ಸೇನೆಯ ವಿಶೇಷ ಶ್ವಾನ ದಳ ಕೂಡ ವಯನಾಡಿಯಲ್ಲಿ ರಕ್ಷಣ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದೆ. ಉತ್ತರ ಪ್ರದೇಶದ ಮೇರs…ನ ಪ್ರತಿಷ್ಠಿತ ರಿಮೌಂಟ್‌ ವೆಟರ್ನರಿ ಕಾಪ್ಸ್‌ì ಸೆಂಟರ್‌ನ ಬೆಲ್ಜಿಯನ್‌ ಮಲಿನೋಯಿಸ್‌, ಲ್ಯಾಬ್ರಾಡರ್‌, ಜರ್ಮನ್‌ ಶೆಫ‌ರ್ಡ್‌ ಶ್ವಾನಗಳು ಶೀಘ್ರ ವಯನಾಡಿಗೆ ಆಗಮಿಸ ಲಿವೆ. ಈ ಶ್ವಾನಗಳು ಮಾನವರ ಅವಶೇಷಗಳು, ಮಣ್ಣಿನಲ್ಲಿ ಹುದುಗಿದವರ ಉಸಿರಾಟವನ್ನು ಗುರುತಿಸುವ ವಿಶೇಷ ಪರಿಣತಿಯನ್ನು ಹೊಂದಿವೆ. ಈ ಹಿಂದೆ ಕೂಡ ಸೇನಾ ಶ್ವಾನಗಳು ಕೇರಳದ ಕವಲಪ್ಪಾರಾ, ಪುತ್ತುಮಾಲಾದಲ್ಲಿ ಭೂಕುಸಿತದಲ್ಲಿ ಸಿಲುಕಿದ್ದವರ ಶವಗಳನ್ನು ಹುಡುಕಲು ನೆರವಾಗಿದ್ದವು.

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.