ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್


Team Udayavani, Jul 31, 2024, 3:28 PM IST

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ಮುಂಬಯಿ: ಒಂದೇ ಪ್ರಾಜೆಕ್ಟ್ ನಲ್ಲಿ 5 ಬಾಲಿವುಡ್‌ (Bollywood) ಸೂಪರ್‌ ಸ್ಟಾರ್‌ ಕಾಣಿಸಿಕೊಳ್ಳುತ್ತಿರುವ ಸಿನಿಮಾವೊಂದು ಬಾಲಿವುಡ್‌ ನಲ್ಲಿ ಇತ್ತೀಚೆಗೆ ಅನೌನ್ಸ್‌ ಆಗಿತ್ತು.  ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಖ್ಯಾತಿಯ ಆದಿತ್ಯ ಧಾರ್‌ (Aditya Dhar) ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ರಣವೀರ್ ಸಿಂಗ್ ಜೊತೆ ಸಂಜಯ್ ದತ್ (Sanjay Dutt), ಆರ್. ಮಾಧವನ್, (R.Madhavan) ಅಕ್ಷಯ್ ಖನ್ನಾ(Akshaye Khanna) ಮತ್ತು ಅರ್ಜುನ್ ರಾಂಪಾಲ್ (Arjun Rampal) ಜೊತೆಯಾಗಿ ನಟಿಸಲಿದ್ದಾರೆ ಎನ್ನುವುದು ಈ ಸಿನಿಮಾದ ವಿಶೇಷ.

ಪೋಸ್ಟರ್‌ ಮೂಲಕ ಸಿನಿಮಾ ಅನೌನ್ಸ್‌ ಆಗಿದೆ. ಆದರೆ ಸಿನಿಮಾ ಯಾವ ವಿಶೇಷ ಕುರಿತು ಎನ್ನುವುದನ್ನು ಚಿತ್ರತಂಡ ರಿವೀಲ್‌ ಮಾಡಿರಲಿಲ್ಲ.

ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಲಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಿನ ಭೌಗೋಳಿಕ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ ಬರಲಿದೆ ಎಂದು ʼಬಾಲಿವುಡ್‌ ಹಂಗಾಮʼ ವರದಿ ಮಾಡಿದೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಅವರ ಜೀವನದ ಕುರಿತು ಸಿನಿಮಾದಲ್ಲಿರಲಿದ್ದು, ಅವರ ಪಾತ್ರವನ್ನು ರಣವೀರ್‌ ಸಿಂಗ್‌ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಬಂದಿರುವ ಲೇಟೆಸ್ಟ್‌ ವರದಿಗಳ ಪ್ರಕಾರ ಆರ್. ಮಾಧವನ್ ಈ ಪಾತ್ರಕ್ಕೆ ಸೂಕ್ತವಾಗಲಿದ್ದು, ಅಜಿತ್‌ ದೋವಲ್‌ ಅವರ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಸಿನಿಮಾದಲ್ಲಿ ಅಜಿತ್‌ ದೋವಲ್‌ ಅವರ ಹೆಸರೇ ಇರಲಿದೆಯೇ ಅಥವಾ ಬೇರೆ  ಹೆಸರು ಬಳಸಲಾಗುತ್ತದೆಯೇ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಆದಿತ್ಯ ಧಾರ್‌ ತಮ್ಮ ಸಿನಿಮಾದಲ್ಲಿ ಅಜಿತ್‌ ದೋವಲ್‌ ಅವರ ಬಗ್ಗೆ ತೋರಿಸುತ್ತಿರುವುದು ಇದು ಎರಡನೇ ಬಾರಿ, ಈ ಹಿಂದೆ ಬಂದ ʼಉರಿʼ ಸಿನಿಮಾದಲ್ಲಿ ಪರೇಶ್ ರಾವಲ್ ಗೋವಿಂದ್ ಭಾರದ್ವಾಜ್ ಪಾತ್ರ ಅಜಿತ್ ದೋವಲ್ ಅವರನ್ನು ಆಧರಿಸಿತ್ತು.

ಸದ್ಯ ಸಿನಿಮಾದ ಟೈಟಲ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದ್ದು, ಜಿಯೋ ಸ್ಟುಡಿಯೋಸ್‌ನಿಂದ ಜ್ಯೋತಿ ದೇಶಪಾಂಡೆ, ಲೋಕೇಶ್ ಧಾರ್ ಮತ್ತು ಆದಿತ್ಯ ಧಾರ್ ಅವರ ಬ್ಯಾನರ್ B62 ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಲಿದೆ.

ಟಾಪ್ ನ್ಯೂಸ್

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Tumbbad 2: ಪ್ರಳಯ್ ಆಯೇಗಾ..‌ ಹಾರರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Tumbbad 2: ಪ್ರಳಯ್ ಆಯೇಗಾ..‌ ಹಾರಾರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

10

Actor James Hollcroft: ಕೆಲ ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನಟ ಶವವಾಗಿ ಪತ್ತೆ

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

Anil Mehta: ಮಲೈಕಾ ಆರೋರಾ ತಂದೆ ಆ*ತ್ಮಹ*ತ್ಯೆ; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Renukaswamy Case ಅನಾಮಿಕ ವಕೀಲನಿಂದ ನಟ ದರ್ಶನ್‌ಗೆ “ಕಾನೂನು ಸಲಹೆ’

Anantha-Padnabha-Swamy

Anant Chaturdashi; ಅನಂತವ್ರತ ಅನಂತಕಲ್ಪನೆ…

1-rrr

Baramulla ಉಗ್ರನ ಹತ್ಯೆ ಡ್ರೋನ್‌ ವೀಡಿಯೋ ವೈರಲ್‌

congress

Congress Manifesto; ಕಣಿವೆ ರಾಜ್ಯದ ಭೂರಹಿತ ಕೃಷಿಕರಿಗೆ 99 ವರ್ಷ ಭೂಗುತ್ತಿಗೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.