Crocodile Operation; ನಾಗೂರು: ಬಾವಿಯಲ್ಲಿದ್ದ ಮೊಸಳೆ ಸೆರೆ
ಬಾವಿಯ ಸುತ್ತಲೂ ಸಿಸಿ ಕೆಮರಾ ಅಳವಡಿಸಿ ರಾತ್ರಿಯಿಡಿ ಮೊಸಳೆ ಓಡಾಟದ ಮೇಲೆ ನಿಗಾ
Team Udayavani, Aug 1, 2024, 6:45 AM IST
ಉಪ್ಪುಂದ: ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮಂಗಳವಾರ ಕಂಡುಬಂದ ಮೊಸಳೆಯನ್ನು ಸತತ ಕಾಯಾಚರಣೆ ಮೂಲಕ ಬುಧವಾರ ಮಧ್ಯಾಹ್ನ ಸೆರೆಹಿಡಿಯಲಾಯಿತು.
ನಾಗೂರು ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಮೊಸಳೆ ಕಂಡುಬಂದಿತ್ತು. ಮೊಸಳೆಯನ್ನು ಸೆರೆಹಿಡಿಯಲು ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕದಳ ಕಂದಾಯ ಇಲಾಖೆಯ ಸಹಾಯದೊಂದಿಗೆ ನಾಗೂರು, ಕೊಡೇರಿ, ಕಿರಿಮಂಜೇಶ್ವರ ಹೊಸಹಿತ್ಲು ಭಾಗದ ಮೀನುಗಾರರು ಕಾರ್ಯಾಚರಣೆ ನಡೆಸಿದರು.
ರಾತ್ರಿಯಿಡಿ ನಿಗಾ:
ಮಂಗಳವಾರ ಸಂಜೆ ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲ ಸಮಾನಕ್ಕೆ ಒಡೆದು ಬೊನಿಗೆ ಕೋಳಿಯ ಮಾಂಸವನ್ನು ಹಾಕಿ ಇಡಲಾಗಿತ್ತು. ಬಾವಿಯ ಸುತ್ತಲೂ ಸಿಸಿ ಕೆಮರಾ ಅಳವಡಿಸಿ ಕಂಪ್ಯೂಟರ್ ಮೂಲಕ ರಾತ್ರಿಯಿಡಿ ಮೊಸಳೆಯ ಓಡಾಟವನ್ನು ಗಮನಿಸಲಾಯಿತು. ಅರಣ್ಯ ಇಲಾಖೆಯವರು ಇಟ್ಟಿರುವ ಮಾಂಸದ ಕಡೆಗೆ ತಿರುಗಿಯೂ ನೋಡದ ಮೊಸಳೆ ರಾತ್ರಿಯಿಡೀ ಬಾವಿಯಲ್ಲಿ ಸುತ್ತುತ್ತಿತ್ತು.
ಬುಧವಾರ ಮಧ್ಯಾಹ್ನ ಹೊತ್ತಿಗೆ ಬೋನಿಗೆ ಬರುವ ಸಾಧ್ಯತೆ ಇಲ್ಲದಿರುವುದನ್ನು ಅರಿತ ಮೀನುಗಾರರು ಬೀಡಿನ ಬಲೆ ಹಾಕಿ ಹಿಡಿಯುವ ಪ್ರಯತ್ನಕ್ಕೆ ಕೈಹಾಕಿದರು. ಸುಮಾರು ಒಂದು ಗಂಟೆಗಳ ಪ್ರಯತ್ನದಿಂದ ಮೊಸಳೆಯ ಸುತ್ತ ಬಲೆಯನ್ನು ಎಳೆದು ಸುತ್ತಿ ಹಗ್ಗದಿಂದ ಕಟ್ಟಲು ಯಶಸ್ವಿಯಾದರು. ಬಾಯಿ ಹಾಗೂ ಕಾಲಿಗೆ ಗಮ್ಟೇಪ್ ಅಂಟಿಸಿ ಮೊಸಳೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮೇಲಕ್ಕೆ ಎತ್ತಿದರು. ಮೊಸಳೆಗೆ 25-30 ವರ್ಷ ಪ್ರಾಯ ಅಂದಾಜಿಸಲಾಗಿದ್ದು, ಎಲ್ಲಿಗೆ ಬೀಡಲಾಗುತ್ತದೆ ಎನ್ನುವ ಮಾಹಿತಿ ನೀಡಲಿಲ್ಲ.
ಎಲ್ಲಿಂದ ಬಂದಿರಬಹುದು?: ಹಲವು ವರ್ಷಗಳ ಹಿಂದೆ ಮರವಂತೆ ಸೌರ್ಪಣಿಕಾ ನದಿ, ಬಿಜೂರು ಸುಮನಾವತಿ ನದಿಯಲ್ಲಿ ಮೊಸಳೆ ಗುಂಡಿ ಇರುವುದಾಗಿ ಹಿರಿಯರು ನೆನಪು ಮಾಡಿಕೊಳ್ಳುತ್ತಾರೆ. ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಕಂಬದಕೋಣೆ ಎಡಮಾವಿನ ಹೊಳೆ ಮೂಲಕ ಬಂದಿದೆ ಎನ್ನಲಾಗುತ್ತಿದೆ.
3ದಿನದ ಹಿಂದೆ ಹೆಜ್ಜೆ ಪತ್ತೆ:
ಎಡೆಮಾವಿನ ನದಿ ತೀರದ ಗದ್ದೆಯಲ್ಲಿ 3 ದಿನ ಹಿಂದೆ ಯಾವುದೋ ಪ್ರಾಣಿ ತಿರುಗಾಡಿ ಭತ್ತದ ಪೈರು ಹಾಳಾಗಿತ್ತು. ಗದ್ದೆಯಲ್ಲಿ ಕಳೆ ತೆಗೆಯುವ ಮಹಿಳೆಯರು ಕಡಲಾಮೆಯಿಂದ ಹಾಳಾಗಿದೆ ಎಂದು ಭಾವಿಸಿದ್ದರು. ಆದರೆ ಹೆಜ್ಜೆಗಳನ್ನು ಗಮನಿಸಿದಾಗ ಮೊಸಳೆ ತಿರುಗಾಡಿರುವುದು ಖಚಿತವಾಗಿತ್ತು.
ಮಣಿಪಾಲ: ಮುಂದುವರಿದ ಚಿರತೆ ಹುಡುಕಾಟ
ಮಣಿಪಾಲ: ಮಣಿಪಾಲ ಪರಿಸರದಲ್ಲಿ ಆತಂಕ ಮೂಡಿಸಿದ್ದ ಚಿರತೆ ಹುಡುಕಾಟ ಮುಂದುವರಿದಿದ್ದು, ಮಂಗಳವಾರ ತಡರಾತ್ರಿ ಮತ್ತು ಬುಧವಾರ ಚಿರತೆ ಕುರುಹು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮಣಿಪಾಲ ಪ್ರದೇಶದಲ್ಲಿ ರಾತ್ರಿ ಗಸ್ತು ಆರಂಭಿಸಿದ್ದಾರೆ. ಚಿರತೆ ಓಡಾಡಿದೆ ಎನ್ನಲಾದ ಅನಂತನಗರ, ಮಣ್ಣಪಳ್ಳ ಪರಿಸರದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಭಾಗದಲ್ಲಿ ಚಿರತೆ ಓಡಾಟದ ಸುಳಿವು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಪೆರಂಪಳ್ಳಿ, ಎಂಡ್ಪಾಯಿಂಟ್ನಲ್ಲಿ ಚಿರತೆ ಓಡಾಡಿರುವ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇಲ್ಲಿ ಬೋನು ಇರಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಚಿರತೆ ಕಾಣಿಸಿಕೊಂಡ ಬಗ್ಗೆ ಬುಧವಾರ ಸಾರ್ವಜನಿಕರಿಂದಲೂ ಯಾವುದೇ ದೂರವಾಣಿ ಕರೆಗಳು ಬಂದಿಲ್ಲ. ಅರಣ್ಯ ಇಲಾಖೆ ಸಿಬಂದಿ ಗಸ್ತು ತಂಡವು ರಾತ್ರಿ ಸೂಕ್ಷ್ಮ ಪ್ರದೇಶದಲ್ಲಿ ನಿಗಾ ವಹಿಸುತ್ತಿದ್ದು, ಮಣಿಪಾಲ ಆರ್ಡಿಎಫ್ ಅವರ ನೇತೃತ್ವ ತಂಡ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಸ್ಥಳೀಯರಿಗೆ ಚಿರತೆ ಕಾಣಿಸಿಕೊಂಡಲ್ಲಿ ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಉಡುಪಿ ಆರ್ಎಫ್ಒ ವಾರಿಜಾಕ್ಷಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.