Jaggesh: 200 ಕೋಟಿ ರೂ. ಹಾಕಿ ಮಾಡಿದರೆ ಮಾತ್ರ ಅದು ಸಿನಿಮಾ.. ಭಾವುಕರಾದ ನವರಸ ನಾಯಕ


Team Udayavani, Aug 1, 2024, 10:42 AM IST

Jaggesh: 200 ಕೋಟಿ ರೂ. ಹಾಕಿ ಮಾಡಿದರೆ ಮಾತ್ರ ಅದು ಸಿನಿಮಾ.. ಭಾವುಕರಾದ ನವರಸ ನಾಯಕ

ಬೆಂಗಳೂರು: ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ (Sandalwood) ಒಳ್ಳೆಯ ಸಿನಿಮಾಗಳಿಗೆ ಬರಗಾಲ ಬಂದಿದೆ. ಯಾವುದೇ ಕನ್ನಡ ಸಿನಿಮಾಗಳು (Kannada Movies) ಬಂದರೆ ಅದು ಕಷ್ಟಪಟ್ಟು ಥಿಯೇಟರ್ ನಲ್ಲಿ ಎರಡು ವಾರವೂ ಉಳಿಯುವುದು ಅಪರೂಪವಾಗಿಬಿಟ್ಟಿದೆ.

‘ಕೆಜಿಎಫ್’ ‘ಕಾಂತಾರ’,‌ ‘777 ಚಾರ್ಲಿ’ , ಕಾಟೇರ’ ದಂತಹಗಳ ಸಿನಿಮಾಗಳಿಂದ ಚಂದನವನ ಹೊಸ ಹಾದಿಯಲ್ಲಿ ಸಾಗುತ್ತಿದೆ ಎಂದು ಭಾವಿಸಲಾಗಿತ್ತು. ಇತರೆ ಭಾಷಾ ಸಿನಿಮಂದಿಯೂ ಕನ್ನಡ ಸಿನಿಮಾಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಆದರೆ ಇದೆಲ್ಲವೂ ಒಂದು ಕ್ಷಣಿಕಕಾಲದವರೆಗೆ ಮಾತ್ರ ಎನ್ನುವಂಥ ಸ್ಥಿತಿ ಬಂತು.

ಕೊನೆಯ ಸಲಿ ಕನ್ನಡದಲ್ಲಿ ‘ಕಾಟೇರ’ ದೊಡ್ಡ ಹಿಟ್ ತಂದುಕೊಟ್ಟಿತು. ಇದಾದ ನಂತರ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಬರಲಿಲ್ಲ ಎಂದೇನಿಲ್ಲ. ಒಳ್ಳೆಯ ಕಂಟೆಂಟ್ ವುಳ್ಳ ಸಿನಿಮಾಗಳು ಬಂದಿವೆ. ಆದರೆ ಜನ ಥಿಯೇಟರ್ ಗೆ ಬಂದು ನೋಡುವುದನ್ನೇ ಕಮ್ಮಿ ಮಾಡಿದರೆ ಎನ್ನುವ ಮಟ್ಟಿಗೆ ಕನ್ನಡ ಸಿನಿಮಾಗಳ ಸ್ಥಿತಿ ಬಂದು ತಲುಪಿರುವುದು ದುಃಖದ ವಿಚಾರವೇ ಸರಿ.

ಕಳೆದ ಕೆಲ ವರ್ಷಗಳಿಂದ ಕನ್ನಡ ಸಿನಿಮಾಗಳ ಸ್ಥಿತಿ ಈ ಮಟ್ಟಿಗೆ  ಇಳಿದಿರುವ ಬಗ್ಗೆ ಮಾತನಾಡುತ್ತಾ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Actor Jaggesh) ಭಾವುಕರಾಗಿದ್ದಾರೆ.

‘ಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಒಂದು ಮೂರು – ನಾಲ್ಕು ವರ್ಷಗಳಿಂದ ಎಲ್ಲವೂ ನಾಶವಾಗಿದೆ. ಎಲ್ಲರೂ ಒಳ್ಳೆಯ ಪಿಕ್ಚರ್ ಮಾಡುತ್ತಾ ಇದ್ದಾರೆ. ಕೆಟ್ಟ ಪಿಕ್ಚರ್ ಯಾರು ಮಾಡುತ್ತಾ ಇಲ್ಲ. ಸಿನಿಮಾಗಳ ಬಗ್ಗೆ ಟಿವಿ, ಪೇಪರ್ ಗಳು ಜಾಹೀರಾತುಗಳನ್ನು ಕೊಡುತ್ತವೆ. ಆದರೆ ಸಿನಿಮಾ ಥಿಯೇಟರ್ ಗೆ ಬಂದಾಗ ಜನವೇ ಬರಲ್ಲ. ಯಾಕೆ ಹೀಗಾಯಿತು. ಕನ್ನಡವೇ ಹೀಗೆ ಅಂದರೆ ಸತ್ಯವಾಗಲೂ ಅಲ್ಲ. ಏನು ಆಗ್ತಾ ಇದೆ. ನಾವು ಹೇಗೆ ಸಿನಿಮಾ ಮಾಡುವುದು. ಜನ ಬರ್ತಾ ಇಲ್ಲ ಅಂತಾರೆ. ಅಕ್ಷಯ್ ಕುಮಾರ್ ಅವರದು ಕೋಟ್ಯಂತರ ರೂ. ಹಾಕಿ ಮಾಡಿದ ಸಿನಿಮಾ ನಾಶವಾಗಿದೆ. ಇಡೀ ಇಂಡಿಯಾದ ಸಿನಿಮಾ ವಾಶ್ ಔಟ್ ಆಗಿದೆ” ಎಂದಿದ್ದಾರೆ.

 

View this post on Instagram

 

A post shared by Zee Kannada (@zeekannada)

 

“ಈಗ ಯಾವ ಸ್ಥಿತಿ ಬಂದಿದೆ ಎಂದರೆ 200 ಕೋಟಿ ರೂ. ಹಾಕಿ ಸಿನಿಮಾ ಮಾಡಿದರೆ ಅದು ಸಿನಿಮಾ. ಯಾರು ಒಳ್ಳೆ ಕಥೆ ಮಾಡಿ, ಸಣ್ಣಪುಟ್ಟ ಸಿನಿಮಾ ಮಾಡುತ್ತಾರೋ ಅದು ಸಿನಿಮಾವಲ್ಲ. ನನ್ನ ಅಣ್ಣ ತಮ್ಮಂದಿರು, ಒಡಹುಟ್ಟಿದವರು ಪಿಕ್ಚರ್ ರಿಲೀಸ್ ಆದಾಗ, ಇದೊಂದು ದರಿದ್ರ ಪಿಕ್ಚರ್, ಇದೊಂದು‌‌ ಕಿತ್ತೋಗಿರುವ ಪಿಕ್ಚರ್, ಇದನ್ನು ನೋಡೋದು ವೇಸ್ಟ್ ಅಂತ ತಮ್ಮ ಶ್ರಮವನ್ನು ಹಾಕಿ ಇನ್ನೊಬ್ಬರ ಲೈಫ್ ನ ಹಾಳು ಮಾಡ್ತಾರೆ ಅದನ್ನು ‌ನೋಡಿ ಬರುವವರು ಇರುತ್ತಾರೆ. ಎಲ್ಲರೂ ಚೆನ್ನಾಗಿರಲಿ ನಾವು ಯಾರಿಗೂ ಕೆಟ್ಟದು ಬಯಸೋದು ಬೇಡ. ನಿಮಗೆ ಬೇಜಾರ್ ಆಗಿ ಸಮಯವೇ ಹೋಗ್ತಾ ಇಲ್ಲ ಅಂದಾಗ ಯೂಟ್ಯೂಬ್ ‌ನಲ್ಲಿ ಒಂದು ಸೀನ್ ನೋಡುತ್ತೀರಿ ಅದು ನನ್ನ ಸಿನಿಮಾ. ನನ್ನ ಬಟ್ಟೆ, ಕನಸು, ನನ್ನ ಊಟ ಸಿನಿಮಾ ಕೊಟ್ಟಿದ್ದು. ಹಾಗಾಗಿ ನಾನು ಸಿನಿಮಾವನ್ನು ತಾಯಿ ಥರಾ ಪ್ರೀತಿಸುತ್ತೇನೆ” ಎಂದು ಜಗ್ಗೇಶ್ ಭಾವುಕರಾಗಿದ್ದಾರೆ.

ಸದ್ಯ ಜಗ್ಗೇಶ್ ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Vishnuvardhan: ನಟ ವಿಷ್ಣುವರ್ಧನ್‌ ಸಮಾಧಿ ದರ್ಶನ ವೇಳೆ ಗೊಂದಲ

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

Kiccha sudeep: ಫೈರ್‌ ಸಂಸ್ಥೆ ಬಗ್ಗೆ ನನಗೆ ಗೊತ್ತಿಲ್ಲ; ನಟ ಸುದೀಪ್‌

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

UI Movie: ತಲೆಯ ಹುಳ ತೆಗೆಯುವ ಸಿನಿಮಾ…: ಯು-ಐ ಬಗ್ಗೆ ಉಪ್ಪಿ ಮಾತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.