Wayanad ದುರಂತದ ಬೆನ್ನಲ್ಲೇ 7 ರಾಜ್ಯಗಳಲ್ಲಿ ವರುಣಾರ್ಭಟ: 42 ಸಾವು
ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮೇಘಸ್ಫೋಟ... ಹೆದ್ದಾರಿಗಳ ಸಂಪರ್ಕ ಕಡಿತ
Team Udayavani, Aug 2, 2024, 1:15 AM IST
ಹೊಸದಿಲ್ಲಿ: ಕೇರಳದ ವಯನಾಡ್ನಲ್ಲಿ ಭೂಕುಸಿತ ಉಂಟಾಗಿ ಸಂಕಷ್ಟ ಉಂಟಾಗಿರುವಂತೆಯೇ ಉತ್ತರ ಭಾರ ತದ 7 ರಾಜ್ಯಗಳಲ್ಲಿ ಮೇಘ ಸ್ಫೋಟ, ಮಳೆ ಉಂಟಾ ಗಿದೆ. ಪ್ರವಾಹ ಸಂಬಂಧಿ ದುರಂತದಲ್ಲಿ 42 ಮಂದಿ ಅಸುನೀಗಿದ್ದಾರೆ. ವಿಶೇಷವಾಗಿ ಹಿಮಾಚಲ ಪ್ರದೇಶ ದಲ್ಲಿ ಮೇಘ ಸ್ಫೋಟದಿಂದಾಗಿ ಭಾರೀ ಹಾನಿ ಉಂಟಾ ಗಿದೆ. ಉತ್ತರಾಖಂಡ, ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಾಗು ತ್ತಿದ್ದು ಅವಾಂತರಗಳು ಸಂಭವಿಸಿವೆ.
ಉತ್ತರಾಖಂಡದಲ್ಲಿ ಮನೆಗಳು ಕುಸಿತ
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಬುಧ ವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಂದೇ ಕುಟುಂಬದ ಮೂವರು ಸೇರಿ 12 ಮಂದಿ ಬಲಿಯಾಗಿದ್ದಾರೆ. 284 ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಹಲವಾರು ಮನೆ ಗಳು ಕುಸಿದಿದ್ದು, ಅನೇಕ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ವಾಗಿದೆ. ಬಹು ತೇಕ ಎಲ್ಲ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬುಧವಾರ ರಾತ್ರಿ ಯಿಡೀ ಮಳೆ ಸುರಿದಿದ್ದು, ಹರಿ ದ್ವಾರದಲ್ಲಿ ನದಿ ದಡದ ಸಮೀಪ ಪಾರ್ಕಿಂಗ್ ಮಾಡ ಲಾಗಿದ್ದ 12ಕ್ಕೂ ಅಧಿಕ ವಾಹನಗಳು ಕೊಚ್ಚಿ ಹೋಗಿವೆ. ಕೇದಾರ ನಾಥಕ್ಕೆ ಹೊರಟಿದ್ದ ಸುಮಾರು 450 ಯಾತ್ರಿಗಳು ಗೌರಿಕುಂಡ್-ಕೇದಾರನಾಥ ಟ್ರೆಕಿಂಗ್ ಮಾರ್ಗದಲ್ಲಿನ ಭಿಂಬಾಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಈ ಮಾರ್ಗದಲ್ಲಿನ 20-25 ಮೀಟರ್ನಷ್ಟು ಭಾಗವು ಭಾರೀ ಮಳೆಯಿಂದಾಗಿ ಕೊಚ್ಚಿಹೋಗಿದೆ.
ಮಳೆಗೆ ರಾಜಸ್ಥಾನದಲ್ಲಿ ಮಗು ಸೇರಿ 3 ಸಾವು
ಜೈಪುರ: ರಾಜಸ್ಥಾನದಲ್ಲೂ ಬಿರುಸಿನ ಮಳೆಯಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರದ ಮನೆಯೊಂದಕ್ಕೆ ನೀರು ನುಗ್ಗಿದ್ದ ರಿಂದ ಮಹಿಳೆ, ಮಗು ಹಾಗೂ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಒಂದು ಗಂಟೆಯ ಕಾರ್ಯಾ ಚರಣೆಯ ಬಳಿಕ ಮೃತದೇಹ ಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿಮಾಚಲದಲ್ಲಿ 50 ಜನರು ನಾಪತ್ತೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟ ಸಂಭವಿಸಿದ್ದು, 3 ಮಂದಿ ಸಾವಿ ಗೀಡಾಗಿ, ಸುಮಾರು 50 ಮಂದಿ ನಾಪತ್ತೆ ಯಾಗಿದ್ದಾರೆ. ಕುಲ್ಲುವಿನ ನಿರ್ಮಾಂದ್, ಸೈಂಜ್ ಮತ್ತು ಮಲಾನಾ ಪ್ರದೇಶದಲ್ಲಿ, ಮಂಡಿಯ ಪಧಾರ್ ಪ್ರದೇಶ ದಲ್ಲಿ ಮತ್ತು ಶಿಮ್ಲಾದ ರಾಂಪು ರದಲ್ಲಿ ಮೇಘ ಸ್ಫೋಟ ಉಂಟಾಗಿ, ಹಲವಾರು ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. ರಸ್ತೆಗಳ ಸಂಪರ್ಕ ಕಡಿತ ಗೊಂಡಿರುವ ಕಾರಣ, ರಕ್ಷಣಾ ಕಾರ್ಯಾಚರಣೆಯೂ ದೊಡ್ಡ ಸವಾ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಲ್ಲಿ ಸಿಡಿಲಿಗೆ 12 ಸಾವು
ಪಾಟ್ನಾ: ಬಿಹಾರದ ವಿವಿಧ ಸ್ಥಳಗಳಲ್ಲೂ ಮಳೆಯಾಗಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ 4 ಜಿಲ್ಲೆಗಳಲ್ಲಿ 12 ಮಂದಿ ಅಸುನೀಗಿದ್ದಾರೆ. ಗಯಾದಲ್ಲಿ 5, ಜೆಹನಾಬಾದ್ನಲ್ಲಿ 3, ನಲಂದಾ ಮತ್ತು ರೋಹ್ತಾಸ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಅಸುನೀಗಿದ್ದಾರೆ.
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಪ್ರವಾಹ
ಶ್ರೀನಗರ: ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನ ದಚನ್ ಪ್ರದೇಶದಲ್ಲಿಯೂ ಭಾರೀ ಮಳೆ ಯಿಂದಾಗಿ ಪ್ರವಾಹ ಉಂಟಾಗಿದೆ. ಇಲ್ಲಿ ಸಾವು ನೋವು ಉಂಟಾಗದಿದ್ದರೂ ಪ್ರವಾಹದಿಂದಾಗಿ ಸೇತುವೆಗಳು ಮತ್ತು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ರಜೌರಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ.
ದಿಲ್ಲಿ: ಜನಜೀವನ ಅಸ್ತವ್ಯಸ್ತ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 10 ಮಂದಿ ಅಸುನೀಗಿದ್ದಾರೆ. ನೋಯ್ಡಾದಲ್ಲಿ ಇಬ್ಬರು, ಗುರುಗ್ರಾಮದಲ್ಲಿ 3 ಹಾಗೂ ಹೊಸದಿಲ್ಲಿಯಲ್ಲಿ 5, ಒಟ್ಟು 10 ಮಂದಿ ಸಾವಿಗೀಡಾಗಿದ್ದಾರೆ. ಹಲವಾರು ಪ್ರದೇಶಗಳು ಜಲಾವೃತಗೊಂಡ ಪರಿಣಾಮ ಸಾಕಷ್ಟು ಟ್ರಾಫಿಕ್ ಜಾಮ್ ಸಂಭವಿಸಿತ್ತು. ಮಳೆ ಮುಂದುವರಿದ ಕಾರಣ ಗುರುವಾರ ದಿಲ್ಲಿಯ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಗುರುವಾರ ಕೂಡ ರಾಷ್ಟ್ರ ರಾಜಧಾನಿಯ ಹಲವು ಸ್ಥಳಗಳಲ್ಲಿ ನೆರೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಸೋಮ ವಾರದ ವರೆಗೆ ದ್ಲಿಲಿಯಲ್ಲಿ ಗುಡುಗು -ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದೂ ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.