Mangaluru Train schedule: ಮಂಗಳೂರು – ಬೆಂಗಳೂರು ರೈಲು ವೇಳಾಪಟ್ಟಿ ಪರಿಷ್ಕರಣೆ
ರೈಲಿನ ಸಮಯವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
Team Udayavani, Aug 2, 2024, 12:00 PM IST
ಮಂಗಳೂರು: ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರು ಜಂಕ್ಷನ್- ಯಶವಂತಪುರ ಮಧ್ಯೆ ಸಂಚರಿಸುವ
ನಂ.16576 ಎಕ್ಸ್ಪ್ರೆಸ್ ರೈಲಿನ ಸಮಯವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ.
ಇದುವರೆಗೆ ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದ ಈ ರೈಲು, ಇನ್ನು ಬೇಗ ಹೊರಟು ಸಂಜೆ ಬೆಂಗಳೂರು ತಲುಪಲಿದೆ. ಈಗ ಪೂರ್ವಾಹ್ನ 11.30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಡುತ್ತಿರುವ ರೈಲು, ಇನ್ನು ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ರಾತ್ರಿ 8.45ಕ್ಕೆ ಯಶವಂತಪುರ ತಲುಪುತ್ತಿದ್ದ ರೈಲು ಇನ್ನು ಸಂಜೆ 4.30ಕ್ಕೇ ತಲುಪಲಿದೆ.
ಈ ಸಂಬಂಧ ರೈಲ್ವೇ ಸಚಿವರನ್ನು ಒತ್ತಾಯಿಸಲಾಗಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿ ಆದೇಶವೂ ಆಗಿರುವುದು ಖುಷಿ ತಂದಿದೆ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಎಕ್ಸ್ ತಾಣದಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ
ಮಂಗಳೂರು(ಬೆಳಗ್ಗೆ7), ಪಡೀಲ್ (7.20), ಬಂಟ್ವಾಳ(7.33/7.35), ಕಬಕ ಪುತ್ತೂರು (8.20/8.22), ಸುಬ್ರ ಹ್ಮಣ್ಯ(9.00/9.10), ಸಕಲೇಶ ಪುರ(11.30/11.40), ಹೊಳೆಆಲೂರು (12.14/12/15), ಹಾಸನ (ಮಧ್ಯಾಹ್ನ 1/1/10), ಚನ್ನರಾಯ ಪಟ್ಟಣ (1.21/1.22),
ಶ್ರವಣ ಬೆಳಗೊಳ(1.31/1.32), ಬಿ.ಜಿ. ನಗರ (1.58/1.59), ಯಡಿಯೂರು(2.11/2.12), ಕುಣಿಗಲ್ (2.24/2.25), ನೆಲಮಂಗಲ (2.59/3.00), ಚಿಕ್ಕ ಬಾಣಾವರ(3.44/3.45), ಯಶವಂತಪುರ(4.30).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.