US, UK ಯಿಂದ ಪ್ರಜೆಗಳಿಗೆ ಒತ್ತಾಯ: ಯಾವುದಾದರೂ ಟಿಕೆಟ್ ಬಳಸಿ ಲೆಬನಾನ್ ತೊರೆಯಿರಿ
ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷದ ಸ್ಥಿತಿ ; ಇಸ್ರೇಲ್ ನಿಂದ ಭಾರೀ ದಾಳಿಯ ಆತಂಕ
Team Udayavani, Aug 3, 2024, 9:13 PM IST
ಬೈರತ್: ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ನಡುವೆ “ಲಭ್ಯವಿರುವ ಯಾವುದೇ ಟಿಕೆಟ್” ನಲ್ಲಿ ಲೆಬನಾನ್ ಅನ್ನು ತೊರೆಯುವಂತೆ ತಮ್ಮ ಅಮೆರಿಕ ಮತ್ತು ಇಂಗ್ಲೆಂಡ್ ಸರ್ಕಾರಗಳು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.
ಕೆಲವು ವಿಮಾನಯಾನ ಸಂಸ್ಥೆಗಳು ದೇಶದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರೂ ಸಹ, ವಿಮಾನಗಳು ಇನ್ನೂ ಲಭ್ಯವಿವೆ ಮತ್ತು ನಾಗರಿಕರು ಲಭ್ಯವಿರುವ ಯಾವುದೇ ವಿಮಾನವನ್ನು ಕಾಯ್ದಿರಿಸಬೇಕು ಎಂದು ಲೆಬನಾನ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಲೆಬನಾನ್ನಿಂದ ನಿರ್ಗಮಿಸಲು ಬಯಸುವವರು ಅವರಿಗೆ ಲಭ್ಯವಿರುವ ಯಾವುದೇ ಟಿಕೆಟ್ ಅನ್ನು ಬುಕ್ ಮಾಡಲು ನಾವು ಸೂಚಿಸುತ್ತೇವೆ. ವಿಮಾನವು ತತ್ ಕ್ಷಣವೇ ಹೊರಡದಿದ್ದರೂ ಅಥವಾ ಅವರ ಮೊದಲ ಆಯ್ಕೆಯ ಮಾರ್ಗವನ್ನು ಅನುಸರಿಸದಿದ್ದರೂ ಸಹ ಟಿಕೆಟ್ ಮಾಡಿ ಪ್ರಯಾಣ ಮುಂದುವರಿಸಿ ಎಂದು ಬೈರತ್ನಲ್ಲಿರುವ US ರಾಯಭಾರ ಕಚೇರಿ ಹೇಳಿದೆ.ಯುಕೆ ಸರಕಾರವೂ ಲೆಬನಾನ್ನಲ್ಲಿರುವ ಎಲ್ಲಾ ಬ್ರಿಟಿಷ್ ಪ್ರಜೆಗಳಿಗೆ ತತ್ ಕ್ಷಣವೇ ಮರಳುವಂತೆ ಸೂಚನೆ ನೀಡಿದೆ. ಹಲವಾರು ಇತರ ದೇಶಗಳು ಕೂಡ ತಮ್ಮ ನಾಗರಿಕರಿಗೆ ಲೆಬನಾನ್ ಅನ್ನು ಬೇಗನೆ ತೊರೆಯುವಂತೆ ಸಲಹೆಯನ್ನು ನೀಡಿವೆ.
ಕಳೆದ ವರ್ಷ ಅಕ್ಟೋಬರ್ 7 ರಿಂದ ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದ್ದು. ಇರಾನ್ ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮತ್ತು ಲೆಬನಾನ್ ಮೂಲದ ಹೆಜ್ಬುಲ್ಲಾದ ಹಿರಿಯ ನಾಯಕನ ಹತ್ಯೆಯ ನಂತರ ಮತ್ತಷ್ಟು ಉದ್ವಿಗ್ನವಾಗಿದೆ. 10 ತಿಂಗಳ ಹಳೆಯ ಯುದ್ಧವು ಸಂಪೂರ್ಣ ಮಧ್ಯಪ್ರಾಚ್ಯದಲ್ಲಿ ದೊಡ್ಡ ಸಂಘರ್ಷವಾಗಿ ಬದಲಾಗಬಹುದು ಎಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್ ನ ಮೊಸ್ಸಾದ್!
Diddy ;ಸೆ*ಕ್ಸ್ ದಂಧೆ ಆರೋಪ: ಅಮೆರಿಕದ ಖ್ಯಾತ ಹಿಪ್-ಹಾಪ್ ಸ್ಟಾರ್ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.