Rain ರಜೆ ಸರಿದೂಗಿಸಲು ವಿಶೇಷ ತರಗತಿ ಆಯೋಜನೆ?

ಕರಾವಳಿಯಲ್ಲಿ ತರಗತಿ ನಷ್ಟ ಹೊಂದಿಸಲು ಇಲಾಖೆ ಚಿಂತನೆ

Team Udayavani, Aug 4, 2024, 7:15 AM IST

School bag

ಮಂಗಳೂರು: ಕರಾವಳಿಯಾದ್ಯಂತ ಮುಂಗಾರು ಅಬ್ಬರಿಸಿದ ಪರಿಣಾಮ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ರಜೆ ವಿಸ್ತರಣೆಯಾ ಗುತ್ತಲೇ ಇದ್ದು, ಆಗಿರುವ ತರಗತಿ ನಷ್ಟವನ್ನು ಸರಿದೂ ಗಿಸಲು ಎರಡೂ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ “ವಿಶೇಷ ತರಗತಿ’ ಆರಂಭವಾಗುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಯ ಶಾಲೆಗಳಿಗೆ ಒಂದು ತಿಂಗಳಿನಲ್ಲಿ ಬೇರೆ ಬೇರೆ ತಾಲೂಕುವಾರು ಸೇರಿ 15ಕ್ಕೂ ಅಧಿಕ ರಜೆ ನೀಡಲಾಗಿದೆ. ಆ ದಿನಗಳ ಕಡಿತವಾಗುವ ಪಾಠವನ್ನು ಮುಗಿಸುವುದು ಹೇಗೆ ಎಂಬುದೇ ಈಗಿನ ಚಿಂತೆ.

ಮೊದಲ ಪರೀಕ್ಷೆ ಮುಂದೂಡಿಕೆ
ಪಿಯು ಮಕ್ಕಳಿಗೆ ಮೊದಲ ಪರೀಕ್ಷೆಗೆ ಈಗ ಸಿದ್ಧತೆ ಮಾಡಬೇಕಿತ್ತು. ಆದರೆ ರಜೆ ಕಾರಣದಿಂದ ಪಾಠ ಆಗದೆ ಪರೀಕ್ಷೆ ಕಷ್ಟ ಎನ್ನುತ್ತಾರೆ ಪಿಯು ಶಿಕ್ಷಕರು. ಆ. 12ಕ್ಕೆ ನಡೆಯಬೇಕಿದ್ದ ಮೊದಲ ಪರೀಕ್ಷೆಯನ್ನು ದ.ಕ. ಜಿಲ್ಲೆಯಲ್ಲಿ ಆ. 21ಕ್ಕೆ ಮುಂದೂಡಲಾಗಿದೆ. ಪ.ಪೂ. ಕಾಲೇಜುಗಳ ಪ್ರಾಚಾರ್ಯರ ಸಂಘದ ದ.ಕ. ಅಧ್ಯಕ್ಷ ಜಯಾನಂದ ಎನ್‌.ಸುವರ್ಣ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಶೇ. 25ರಷ್ಟು ಪಾಠ ಈ ವೇಳೆಗೆ ಆಗಬೇಕಿತ್ತು.

ರಜೆ ಕಾರಣದಿಂದ ಬಹುತೇಕ ಬಾಕಿಯಾಗಿದ್ದು, ಇದನ್ನು ಸರಿಹೊಂದಿಸುವ ಸವಾಲಿದೆ. ಶನಿವಾರ ಪೂರ್ಣ ದಿನ, ರವಿವಾರ ಪಾಠ ಮಾಡುವ ಸಾಧ್ಯತೆಯೂ ಇದೆ’ ಎಂದಿದ್ದಾರೆ.

ರವಿವಾರವೂ ತರಗತಿ?
ಮಳೆ ಕಾರಣದಿಂದ ತರಗತಿ ನಷ್ಟ ಆಗಿರುವುದನ್ನು ಸರಿದೂಗಿಸಲು ದ.ಕ., ಉಡುಪಿಯಲ್ಲಿ ಶಿಕ್ಷಣ ಇಲಾಖೆಗಳು ವಿವಿಧ ಆಯಾಮದ ಚಿಂತನೆ ನಡೆಸಿವೆ. ಎರಡೂ ಜಿಲ್ಲೆಯಲ್ಲಿ ಪಿಯು ತರಗತಿ ನಷ್ಟವನ್ನು ಸರಿಹೊಂದಿಸಲು ಶನಿವಾರ ಪೂರ್ಣದಿನ ಹಾಗೂ ರವಿವಾರವೂ ತರಗತಿ ನಡೆಸುವ ಬಗ್ಗೆ ಸದ್ಯ ಮಾತುಕತೆ ನಡೆಸುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಡುಪಿಯಲ್ಲಿ ರವಿವಾರ ತರಗತಿ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ, ದಕ್ಷಿಣ ಕನ್ನಡದಲ್ಲಿ ರವಿವಾರ ತರಗತಿಗೆ ಒಲವು ಇದ್ದಂತಿಲ್ಲ! ಈ ನಡುವೆ ಕೆಲವು ಖಾಸಗಿ ಮತ್ತು ಅನುದಾನಿತ ಶಾಲೆಗಳು ಈಗಾಗಲೇ ವಿಶೇಷ ತರಗತಿ ಆರಂಭಿಸಿವೆ.

“ಮಳೆ ಕಾರಣದಿಂದ ರಜೆಯಾಗಿ ಈಗ ಪಾಠ ಸರಿದೂಗಿಸುವ ಸವಾಲು ನಮಗಿದೆ. ಆದರೆ ರವಿವಾರ ತರಗತಿ ಮಾಡುವುದು ಮಕ್ಕಳು ಹಾಗೂ ಶಿಕ್ಷಕರಿಗೂ ಹಿತವಲ್ಲ. ಅದರ ಬದಲು ದಿನದಲ್ಲಿ ಹೆಚ್ಚುವರಿ ತರಗತಿ ಮಾಡುವ ಬಗ್ಗೆ ಯೋಚಿಸುವುದು ಉತ್ತಮ’ ಎನ್ನುವುದು ಶಿಕ್ಷಕರೊಬ್ಬರ ಅಭಿಪ್ರಾಯ.

ಆನ್‌ಲೈನ್‌ ಮೊರೆ !
ಕೆಲವು ಖಾಸಗಿ ಶಾಲೆಗಳು ಕೊರೊನಾ ಕಾಲದಲ್ಲಿ ಇದ್ದಂತೆ ಈಗಾಗಲೇ ಆನ್‌ಲೈನ್‌ ತರಗತಿ ಆರಂಭಿಸಿವೆ. ಆದರೆ ಕೆಲವು ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಸದ್ಯಕ್ಕಿಲ್ಲ. ಒಂದು ವೇಳೆ ಮಳೆ ರಜೆ ಇನ್ನೂ ವಿಸ್ತರಣೆ ಆದರೆ ಆನ್‌ಲೈನ್‌ ತರಗತಿ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆಯೂ ಇದೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.