Shravana Month: ಅನುಭವದಿಂದ ಅನುಭಾವದ ಕಡೆಗೆ…


Team Udayavani, Aug 4, 2024, 3:41 PM IST

11

“ಶ್ರಾವಣ ಮಾಸ’ ಅಂದಾಗ ತಕ್ಷಣ ನೆನಪಾಗುವ ವರಕವಿ ಬೇಂದ್ರೆಯವರ “ಶ್ರಾವಣ’ ಪದ್ಯದ ಕೆಲವು ಅಪೂರ್ವ ಸಾಲುಗಳು ಇಲ್ಲಿವೆ. ಇಡೀ ಪದ್ಯದಲ್ಲಿ “ಶ್ರಾವಣ ಬಂತು ಬಂತು’ ಎನ್ನುವ ಪುನರುಕ್ತಿ ಇದೆ. ಇದು ಕಾಯುವ ಕಾತುರತೆಯನ್ನು, ಸಂಭ್ರಮವನ್ನೂ ಹೇಳುತ್ತದೆ. ಮಾತ್ರವಲ್ಲ, ನಿಸರ್ಗದಲ್ಲಿನ ಪ್ರಕ್ರಿಯೆಯನ್ನೇ ಬೇಂದ್ರೆ ಕಾವ್ಯದಲ್ಲಿ ತರುತ್ತಾರೆ. ಮಳೆ ಬಿಟ್ಟು ಬಿಟ್ಟು ಬರುವುದು, ಗಾಳಿ ಕೂಡ ಆವರ್ತನಶೀಲವಾಗಿ ಚಲಿಸುವುದು, ದುಂಬಿಗಳ ಸುತ್ತಾಟ, ಮರಳಿ ಹೂವು ಚಿಗುರು, ಹಣ್ಣು ಕಾಯಿ, ಬೀಜ ಹೀಗೆ ನಿಸರ್ಗ ವ್ಯಾಪಾರವನ್ನು ಮನುಷ್ಯ ಜೀವಿತದ ಎಲ್ಲ ಅವಸ್ಥಾಂತರಗಳಿಗೆ ಹೋಲಿಸುವುದನ್ನು ನೋಡುತ್ತೇವೆ. ಜತೆಗೆ ಶ್ರಾವಣ ಎಲ್ಲಿಗೆ ಬಂತು? ಹೇಗೆ ಬಂತು? ಯಾಕೆ ಬಂತು? ಎನ್ನುವ ಕುತೂಹಲ, ಅಚ್ಚರಿ, ಬೆರಗನ್ನು ಒಳಗೊಂಡಿದೆ. ಇಡೀ ಪದ್ಯದ ತುಂಬ ಶಬ್ದಚಿತ್ರಗಳೇ. ಬೇಂದ್ರೆಯವರಿಗೆ ಮಳೆ ಮೊದಲಿಗೇ ರೌದ್ರವಾಗಿ ಕಂಡಿದೆ. ಕಡಲಿಗೆ ಬಂದ ಶ್ರಾವಣವನ್ನು “ಕುಣಿದಾಗ ರಾವಣ’ ಎಂದಿರುವುದು ಮಳೆ ಗಾಳಿಯ ಜೊತೆ ಸೇರಿ ಇಡೀ ಪ್ರಕೃತಿಯೇ ಕೆರಳಿ ರೌದ್ರವಾಗುವ ಅನುಭವವನ್ನು ಕೊಡುತ್ತದೆ. ಅಂದರೆ ಮಳೆ ಬರಿಯ ಸೌಂದರ್ಯಾನುಭೂತಿ ಮಾತ್ರವಲ್ಲ; ಅದರೊಂದಿಗೆ ರೌದ್ರತೆಯೂ ಸೇರಿಕೊಂಡಿದೆ. ಮುಂದೆ ಮೃದುವಾಗುತ್ತಾ ಅವರು ಹೇಳುತ್ತಾರೆ.

ಮನೆಮನೆಯಲ್ಲೂ ಹಾಡಿದೆ, ಶುಭಗಳಿಗೆಯ ಸಂಭ್ರಮವಿದೆ, ಅದು ಪ್ರಕೃತಿ ಮೈದುಂಬಿಕೊಳ್ಳುವ ಕಾಲ, ಝರಿ, ಹೊಳೆ, ನದಿ ಎಲ್ಲವೂ ತುಂಬಿಕೊಳ್ಳುತ್ತವೆ. ಬೆಟ್ಟ ಹಸುರಂಗಿಯನ್ನು ಧರಿಸಿದರೆ, ಕಾಡು ಮದುಮಗನ ಹಾಗೆ ಶೃಂಗಾರಗೊಳ್ಳುತ್ತದೆ. ಗುಡ್ಡಗಳೂ ಸ್ಥಾವರಲಿಂಗವಾಗಿ ಮೋಡಗಳು ಅವಕ್ಕೆ ಅಭ್ಯಂಜನ ಮಾಡಿಸಲಿಕ್ಕೆ ನೆರೆದಂತೆಯೂ ಕಾಣುತ್ತಿದೆ ಎನ್ನುತ್ತಾ ಮಾನವ, ನಿಸರ್ಗ ಮತ್ತು ದೈವವನ್ನು ಒಂದುಗೂಡಿಸಿ ಪೂರ್ಣವಾಗುವ ವಿಶ್ವಚೈತನ್ಯವನ್ನು ವಿಷದೀಕರಿಸು­ತ್ತಾರೆ. ಅಷ್ಟಕ್ಕೆ ನಿಲ್ಲದೆ ಈ ಮಳೆಯ ನೀರು ಜೀವಕುಲಕ್ಕೆ ಅಮೃತ ಎನ್ನುವುದನ್ನು “ಹಾಲಿನ ತೊರಿ’ ಎಂದು ಪಾಲನೆಯ ಬಹುದೊಡ್ಡ ಸಂಕೇತವಾಗಿಸುತ್ತಾರೆ. ಹೀಗೆ “ಅನುಭವ’ದಿಂದ “ಅನುಭಾವ’ದ ಕಡೆಗೆ ಕವಿತೆ ಹೊರಳುತ್ತದೆ.

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |

ಬಂತು ಬೀಡಿಗೆ | ಶ್ರಾವಣಾ ಬಂತು ||

ಕಡಲಿಗೆ ಬಂತು ಶ್ರಾವಣಾ | ಕುಣಿದಾØಂಗ ರಾವಣಾ

ಕುಣಿದಾಗ ಗಾಳಿ | ಭೈರವನ ರೂಪತಾಳಿ ||

ಶ್ರಾವಣ ಬಂತು ಘಟ್ಟಕ್ಕ | ರಾಜ್ಯಪಟ್ಟಕ್ಕ| ಬಾನಮಟ್ಟಕ್ಕ |

ಏರ್ಯಾವ ಮುಗಿಲು | ರವಿ ಕಾಣೆ ಹಾಡೆಹಗಲು ||

ಬನ ಬನ ನೋಡು ಈಗ ಹ್ಯಾಂಗ | ಮದುವಿ ಮಗನ್ಹಾಂಗ |

ತಲಿಗೆ ಬಾಸಿಂಗ | ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||

ಹಸಿರುಟ್ಟ ಬಸುರಿಯ ಹಾಂಗ | ನೆಲಾ ಹೊಲಾ ಹಾಂಗ |

ಅರಿಸಿಣ ಒಡೆಧಾಂಗ | ಹೊಮ್ಮತಾವ | ಬಂಗಾರ ಚಿಮ್ಮತಾವ ||

ಗುಡ್ಡ ಗುಡ್ಡ ಸ್ಥಾವರಲಿಂಗ | ಅವಕ ಅಭ್ಯಂಗ | ಎರಿತಾವನ್ನೋ ಹಾಂಗ |

ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ನಾಡೆಲ್ಲ ಏರಿಯ ವಾರಿ | ಹರಿತಾವ ಝರಿ |

ಹಾಲಿನ ತೊರಿ | ಈಗ ಯಾಕ | ನೆಲಕೆಲ್ಲ ಕುಡಿಸಲಾಕ |

 

-ಪಿ. ಚಂದ್ರಿಕಾ, ಬೆಂಗಳೂರು

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.