Speed Limit: ವಾಹನಗಳ ವೇಗಮಿತಿ ಗೊಂದಲಗಳ ಗೂಡು

ಅಧಿಸೂಚನೆಯಲ್ಲೊಂದು, ಹೆದ್ದಾರಿಯ ಕೆಲವು ಭಾಗಗಳಲ್ಲಿ ಇನ್ನೊಂದು ಮಿತಿ!

Team Udayavani, Aug 5, 2024, 6:40 AM IST

Rader

ಮಂಗಳೂರು/ ಉಡುಪಿ: ವಾಹನಗಳ ವೇಗ ಮಿತಿಯನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯನ್ನು ರಾಜ್ಯದಲ್ಲೂ ಆ.1ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ವಾಹನಗಳ ವೇಗವನ್ನು ಸುಮಾರು 100 ಮೀಟರ್‌ ದೂರದಲ್ಲಿಯೇ ಪತ್ತೆ ಹಚ್ಚಲು ಮೊಬೈಲ್‌ ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌ಗಳನ್ನು ಪೊಲೀಸರು ಬಳಸಲಿದ್ದಾರೆ. ದ.ಕ ಜಿಲ್ಲಾ ಪೊಲೀಸರಿಗೂ ಎಡಿಜಿಪಿಯವರು ಸೂಚನೆಗಳನ್ನು ನೀಡಿದ್ದು, ಅದರಂತೆ ದ.ಕ. ಜಿಲ್ಲಾ ಪೊಲೀಸರು ಮತ್ತು ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.

ವೇಗದ ಮಿತಿ ಎಷ್ಟು?
ಅಧಿಸೂಚನೆ ಪ್ರಕಾರ, ಪ್ರಯಾಣಿಕರನ್ನು ಕರೆದೊಯ್ಯುವ 9ಕ್ಕಿಂತ ಕಡಿಮೆ ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 100 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 70 ಕಿ.ಮೀ., ಇತರ ರಸ್ತೆಗಳಲ್ಲಿ 70 ಕಿ.ಮೀ. ವೇಗ ಮಿತಿ. 9ಕ್ಕಿಂತ ಹೆಚ್ಚು ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 90 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ., ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ. ಎಲ್ಲ ರೀತಿಯ ಗೂಡ್ಸ್‌ ವಾಹನಗಳು ಮತ್ತು ಮೋಟಾರು ಸೈಕಲ್‌ಗ‌ಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 80, ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ. ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ., ತ್ರಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 50 ಕಿ.ಮೀ., ನಗರಸಭೆ, ಪುರಸಭೆಯ ರಸ್ತೆಗಳಲ್ಲಿ ಮತ್ತು ಇತರ ರಸ್ತೆಗಳಲ್ಲಿ 50 ಕಿ.ಮೀ. ವೇಗದ ಮಿತಿಯಲ್ಲಿ ಸಂಚರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕೆಲವು ಕಡೆಗಳಲ್ಲಿ ಈ ಮಿತಿಗಿಂತಲೂ ಕಡಿಮೆ ವೇಗದ ಮಿತಿಯನ್ನು ನಿಗದಿ ಮಾಡ ಲಾಗಿದ್ದು, ಅಲ್ಲೆಲ್ಲ ಫ‌ಲಕಗಳನ್ನು ಅಳವಡಿಸಲಾಗಿದೆ. ಗರಿಷ್ಠ 100 ಕಿ.ಮೀ. ವೇಗದ ಮಿತಿ ಇರುವ ಹೆದ್ದಾರಿಯ ಕೆಲವು ಭಾಗಗಳಲ್ಲೂ ಈ ಮಿತಿಯನ್ನು ಕಡಿಮೆ ಮಾಡಲಾಗಿದ್ದು, ಆ ಪ್ರದೇಶದಲ್ಲಿ ಫ‌ಲಕ ಅಳವಡಿಸಲಾಗಿದೆ. ಆದ್ದರಿಂದ ಚಾಲಕರು ಅಂಥ ಫ‌ಲಕಗಳನ್ನು ಗಮನಿಸಬೇಕು ಎಂಬುದು ಪೊಲೀಸರ ಸೂಚನೆ.

ದ.ಕ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಮಾತ್ರ ಸದ್ಯ ದಂಡ ವಿಧಿಸಲಾಗುತ್ತಿದೆ. ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ವೇಗಮಿತಿ ಫ‌ಲಕಗಳನ್ನು ಆಧರಿಸಿ ದಂಡ ವಿಧಿಸಲಾಗುತ್ತಿದೆ ಎಂದು ಎಸ್‌ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

ಸಿಗದ ಸ್ಪಷ್ಟ ಮಾಹಿತಿ
ಕೆಲವು ಕಡೆ ಅಧಿಸೂಚನೆಯಲ್ಲಿ ಇರುವ ಮಿತಿಗಿಂತ ಕಡಿಮೆ ವೇಗದ ಮಿತಿ ಇರುವ ಬಗ್ಗೆ ಸೂಚನಾ ಫ‌ಲಕಗಳಿಲ್ಲ ಹಾಗೂ ಇರುವಂಥವು ಕೂಡ ಅಸ್ಪಷ್ಟವಾಗಿವೆ. ಕೆಲವು ಹೆದ್ದಾರಿಯಲ್ಲಿ 50 ಕಿ.ಮೀ. ವೇಗದ ವಿತಿಯನ್ನೂ ನಿಗದಿ ಮಾಡಲಾಗಿದ್ದು, ಆದರೆ ಅದರ ಬಗ್ಗೆ ಚಾಲಕರಿಗೆ ಸ್ಪಷ್ಟವಾಗಿ ಕಾಣುವಂತೆ ಫ‌ಲಕ ಅಳವಡಿಸಿಲ್ಲ. ಆದ್ದರಿಂದ ಇಂಥ ಅವ್ಯವಸ್ಥೆ ನಡುವೆ ದಂಡ ವಿಧಿಸುವುದು ಸರಿಯಲ್ಲ ಎಂದು ಬಹುತೇಕ ವಾಹನ ಚಾಲಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

“ಮಂಗಳೂರು ನಗರದೊಳಗಿನ ರಸ್ತೆಗಳಲ್ಲಿ ವೇಗದ ಮಿತಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಆದ್ದರಿಂದ ಹೆದ್ದಾರಿಗಳ ಕೆಲವು ಕಡೆ ಬೋರ್ಡ್‌ ಅಳವಡಿಕೆ ಮಾಡಿರುವ ಸ್ಥಳಗಳಲ್ಲಿ ವಾಹನಗಳ ವೇಗ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಹೆದ್ದಾರಿ ಜಿಲ್ಲಾ ವ್ಯಾಪ್ತಿಯಲ್ಲಿಲ್ಲ. ಅದರಂತೆ ಗರಿಷ್ಠ ವೇಗ ಮಿತಿ 80 ಕಿ.ಮೀ.ಗಳು. ಕೆಲವು ಕಡೆಗಳಲ್ಲಿ 50 ಕಿ.ಮೀ. 30 ಕಿ.ಮೀ. ಇದೆ.”  –ಬಿ.ಪಿ. ದಿನೇಶ್‌ ಕುಮಾರ್‌, ಪೊಲೀಸ್‌ ಉಪ ಆಯುಕ್ತ (ಅಪರಾಧ ಮತ್ತು ಸಂಚಾರ ವಿಭಾಗ)

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.