ತುಂತುರು ನೀರಿನ ಮೂಲಕ‌ ಗೊಬ್ಬರ ಸಿಂಪಡಣೆ… ಪಾರಂಪರಿಕ ಕೃಷಿ ಪದ್ಧತಿಯಿಂದ ಖುಷಿಕಂಡ ರೈತ

ಸಾವಯವ ಕೃಷಿಯಲ್ಲಿಯೇ "ಪರಮಾನಂದ"

Team Udayavani, Aug 5, 2024, 11:01 AM IST

ತುಂತುರು ನೀರಿನ ಮೂಲಕ‌ ಗೊಬ್ಬರ ಸಿಂಪಡಣೆ… ಪಾರಂಪರಿಕ ಕೃಷಿ ಪದ್ಧತಿಯಿಂದ ಖುಷಿಕಂಡ ರೈತ

ಮುಧೋಳ: ಆಧುನಿಕ ಕೃಷಿ ಪದ್ದತಿಯಲ್ಲಿ ತೊಡಗಿಕೊಂಡಿರುವ ರೈತರು ತಮ್ಮ ಹೊಲಕ್ಕೆ ರಸಾಯನಿಕ ಗೊಬ್ಬರ ಬಳಸುವವರೆ ಹೆಚ್ಚು. ಪಾರಂಪರಿಕ ಕೃಷಿ ಚಟುವಟಿಕೆ ಅಳವಡಿಸಿಕೊಂಡು ಸಾವಯವ ಗೊಬ್ಬರ ಬಳಕೆ‌ ಮಾಡುವ ರೈತರು ಇಂದು ತೀರಾ ಅಪರೂಪವಾಗಿದ್ದಾರೆ. ಅಂತಹ ಅಪರೂಪದ ರೈತರ ಸಾಲಿನಲ್ಲಿ‌ ತಾಲೂಕಿನ ಪರಮಾನಂದ ಜನವಾಡ ಕೂಡಾ ಒಬ್ಬರು. ಮುಗಳಖೋಡದ ನಿವಾಸಿ ಪರಮಾನಂದ ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಯಶಸ್ವಿ ರೈತರಾಗಿದ್ದಾರೆ.

ಐದು ಎಕರೆ ಸಂಪೂರ್ಣ ಸಾವಯವ : ಒಟ್ಟು 9ಎಕರೆ ಜಮೀನು ಹೊಂದಿರುವ ಪರಮಾನಂದ ಅವರು ಸದ್ಯ ಐದು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಐದು ಎಕರೆ ಜಮೀನಿನಲ್ಲಿ‌ ಕಬ್ಬು, ಮೆಕ್ಕೆಜೋಳವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆದಿರುವ ರೈತ ಸಾವಯವ ಗೊಬ್ಬರದ ಮೂಲಕ ಹೊಲವನ್ನು ಹಚ್ಚ ಹಸಿರಾಗಿಟ್ಟುಕೊಂಡಿದ್ದಾನೆ.

ನಾಲ್ಕು ವಿಧಾನ ಅಳವಡಿಕೆ : ರೈತ ಪರಮಾನಂದ ಅವರು ಒಟ್ಟು ನಾಲ್ಕು ವಿಧಗಳ ಮೂಲಕ‌ ಸಾವಯವ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ.
ಜೀವಾಮೃತ, ಗೋ ಕೃಪಾಮೃತ, ವೇಸ್ಟ್ ಡಿಕಂಪೋಸರ್ ಹಾಗೂ ಎರೆಹುಳು ಗೊಬ್ಬರವನ್ನು ತಮ್ಮಲ್ಲಿಯೇ ತಯಾರಿಸಿಕೊಂಡು ನಿತ್ಯ ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ಸಿಂಪಡನೆ ಮಾಡುತ್ತಾರೆ.

ಜೀವಾಮೃತ ಹಾಗೂ ವೇಸ್ಟ್ ಡಿ ಕಂಪೋಸರ್ ಗೊಬ್ಬರವನ್ನು ಹಲವು ವಿಧಗಳ‌‌ ಮೂಲಕ‌ ತಯಾರಿಸಿದರೆ. ಗೋ ಕೃಪಾಮೃತಕ್ಕೆ ಕನ್ಹೇರಿ ಮಠದ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರತಿಯೊಂದನ್ನು ವಾರಕ್ಕೆ 200 ಲೀಟರ್ ಗೊಬ್ಬರವನ್ನು ಕ್ರಮವಾಗಿ ತಯಾರಿಸಿ ಬಳಕೆ ಮಾಡುತ್ತಾರೆ.

ನೀರಿನೊಂದಿಗೆ ಮಿಶ್ರಣ : ಪರಮಾನಂದ ಅವರು ತಯಾರಿಸುವ ಗೊಬ್ಬರವನ್ನು ಅವರು ಜಮೀನಿಗೆ ಹರಿಸುವ ನೀರಿನಲ್ಲಿ‌‌ ಮಿಶ್ರಣ ಮಾಡಿ ಬೆಳೆಗಳಿಗೆ ಉಣಿಸುತ್ತಾರೆ. ತುಂತುರು ನೀರಾವರಿ ಅಳವಡಿಸಿಕೊಂಡು ಪೈಪ್ ಮೂಲಕ‌ ನೇರವಾಗಿ ಬೆಳೆಗಳಿಗೆ ಹರಿಸುತ್ತಾರೆ. ಜಮೀನಿಲ್ಲಿ‌ ಬಿತ್ತಿರುವ ಮೆಕ್ಕೆಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಮೂಲಕ‌ ಸಾವಯವ ಗೊಬ್ಬರ ಹಾಯಿಸುವುದರಿಂದ ಬೆಳೆ ಬಲು ಸೋಂಪಾಗಿ ಬಂದು ಇಳುವರಿಯೂ ಹೆಚ್ಚಾಗಲಿದೆ.

ಮಿಶ್ರ ಬೆಳೆಯಿಂದ ಹೆಚ್ಚಿನ ಆದಾಯ : ಪರಮಾನಂದ ಬೆಳೆದಿರುವ ಕಬ್ಬು ಬೆಳೆಯಲ್ಲಿ ಅಲ್ಪಾವಧಿಯಲ್ಲಿ ಇಳುವರಿ ಕೊಡುವ ಟೊಮೋಟೊ‌ವನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಆರ್ಥಿಕತೆ ಆದಾಯದ ಮೂಲ ಹೆಚ್ಚಿಸಿಕೊಂಡಿದ್ದಾರೆ. ಕಬ್ಬು ದೀರ್ಘಾವಧಿ ಬೆಳೆಯಾಗಿರುವ ಕಾರಣ ಕಬ್ಬು ನಾಟಿಯ ಮಧ್ಯೆ‌ ಟೊಮೊಟೊ‌ ಬೆಳೆದು ನಿತ್ಯದ‌‌ ಆರ್ಥಿಕ ಅವಶ್ಯಕತೆ ಪೂರೈಸಿಕೊಳ್ಳುತ್ತಾರೆ.

ಎರೆಹುಳು ಗೊಬ್ಬರ ಉತ್ಪಾದನೆ‌‌‌ ಕೇಂದ್ರ‌ : ಪರಮಾನಂದ ತಮ್ಮ‌ ಜಮೀನಿನಲ್ಲಿಯೇ ಎರೆಹುಳು ಗೊಬ್ಬರ ತಯಾರಿಕೆ‌‌‌ ಕೇಂದ್ರವನ್ನು ನಿರ್ಮಿಸಿಕೊಂಡಿದ್ದಾರೆ. ವರ್ಷಕ್ಕೆ‌ ಸರಿಸುಮಾರು ಒಂದು ಟನ್ ನಷ್ಟು ಗೊಬ್ಬರ ಉತ್ಪಾದಿಸುವ ಅವರು ತಮ್ಮ ಜಮೀನಿಗೆ ಬಳಕೆ‌‌ ಮಾಡಿ ಮಣ್ಣಿಮ ಫಲವತ್ತತೆಯನ್ನು ಹೆಚ್ಚಿಸುವತ್ತ ಹೆಚ್ಚಿನ‌ ಗಮನ ಹರಿಸಿ ಯಶಸ್ವಿಯಾಗಿದ್ದಾರೆ.

ಹೈನುಗಾರಿಕೆಗೆ ಒತ್ತು : ಕೃಷಿಯೊಂದಿಗೆ ಕೃಷಿಗೆ ಪೂರಕವಾದ ಚಟುವಟಿಕೆಯಲ್ಲಿ‌ ತೊಡಗಿಕೊಂಡು ಹಸು ಸಾಕಿಕೊಂಡಿದ್ದಾರೆ ಅವುಗಳಿಂದ ನಿತ್ಯ 20ಲೀಟರ್ ಹಾಲು‌‌ ಮಾರಾಟ ಮಾಡುತ್ತಾರೆ. ಸಣ್ಣ ಪ್ರಮಾಣದಲ್ಲಿ ಮೇಕೆ ಸಾಕಿ ಅಗತ್ಯಕ್ಕೆ ತಕ್ಕಾಗ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳುತ್ತಿದ್ದಾರೆ.

– ಕೇವಲ‌ ರಸಗೊಬ್ಬರ ಬಳಳಕೆಯಿಂದ ಕೃಷಿ ಮಾಡುವುದರಿಂದ ಭೂಮಿ‌ ತನ್ನ ಸತ್ವವನ್ನು ಬಹುಬೇಗ ಕಳೆದುಕೊಳ್ಳುತ್ತದೆ. ಸಾವಯವ ಕೃಷಿಗೆ ಒತ್ತು ನೀಡುವುದರಿಂದ ಆರೋಗ್ಯಯುತ ಆಹಾರ ಪಡೆಯುವುದರೊಂದಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.
– ಪರಮಾನಂದ ಜನವಾಡ ಮುಗಳಖೋಡ ರೈತ

– ಗೋವಿಂದಪ್ಪ ತಳವಾರ ಮುಧೋಳ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.