![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 5, 2024, 11:39 AM IST
ಕೊಲೊಂಬೊ: ಶ್ರೀಲಂಕಾ ವಿರುದ್ದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು (Team India) ನೀರಸ ಸೋಲುಕಂಡಿದೆ. ಲೆಗ್ ಸ್ಪಿನ್ನರ್ ಜೆಫ್ರಿ ವಾಂಡೆರ್ಸೆ (Jeffrey Vandersay) ಜಾಲಕ್ಕೆ ನಲುಗಿದ ಟೀಂ ಇಂಡಿಯಾ ಬ್ಯಾಟರ್ ಗಳು ಕೇವಲ 208 ರನ್ ಗಳಿಗೆ ಆಲೌಟಾಯಿತು. ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಪಂದ್ಯದಲ್ಲಿ ಲಂಕಾ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 240 ರನ್ ಗಳಿಸಿದರೆ, ಭಾರತ 208 ರನ್ ಮಾತ್ರ ಗಳಿಸಲು ಶಕ್ತವಾಯಿತು. ಮೊದಲ ವಿಕೆಟ್ ಗೆ 97 ರನ್ ಗಳಿಸಿದ್ದ ಭಾರತ ನಂತರ ಸತತ ವಿಕೆಟ್ ಕಳೆದುಕೊಂಡಿತು. ಅದರಲ್ಲೂ 10 ಓವರ್ ಗಳ ಅಂತರದಲ್ಲಿ ಭಾರತ ಆರು ವಿಕೆಟ್ ಕಳೆದುಕೊಂಡಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma), “ನೀವು ಪಂದ್ಯ ಸೋತಾಗ ಎಲ್ಲವೂ ನಿಮಗೆ ಬೇಸರ ತರಿಸುತ್ತದೆ. ಇದು ಕೇವಲ ಆ ಹತ್ತು ಓವರ ವಿಷಯವಲ್ಲ. ನೀವು ಸ್ಥಿರ ಕ್ರಿಕೆಟ್ ಆಡಬೇಕಾಗುತ್ತದೆ, ಆದರೆ ನಾವು ಅದರಲ್ಲಿ ಸೋತೆವು. ಸ್ವಲ್ಪ ಬೇಜಾರಾಗಿದೆ, ಆದರೆ ಇಂತಹ ವಿಷಯಗಳು ನಡೆಯುತ್ತದೆ” ಎಂದರು.
“ನಾವು ಸಾಕಷ್ಟು ಒಳ್ಳೆಯ ಪಂದ್ಯ ಆಡಲಿಲ್ಲ. ನಾವು ಹೇಗೆ ಆಡಿದ್ದೇವೆ ಎಂಬುದರ ಬಗ್ಗೆ ಹೆಚ್ಚು ನೋಡಲು ಬಯಸುವುದಿಲ್ಲ. ಆದರೆ ಮಧ್ಯಮ ಓವರ್ ಗಳ ನಮ್ಮ ಬ್ಯಾಟಿಂಗ್ ಬಗ್ಗೆ ಮಾತುಕತೆ ನಡೆಯಲಿದೆ” ಎಂದು ರೋಹಿತ್ ಹೇಳಿದರು.
ಇಲ್ಲಿನ ಪಿಚ್ ಪರಿಸ್ಥಿತಿಗೆ ಬ್ಯಾಟರ್ ಗಳು ಶೀಘ್ರ ಹೊಂದಿಕೊಳ್ಳಬೇಕು ಎಂದು ರೋಹಿತ್ ಹೇಳಿದರು.
“ನಿಮ್ಮೆದುರಲ್ಲಿ ಏನಿದೆಯೋ ಅದಕ್ಕೆ ನೀವು ಹೊಂದಿಕೊಳ್ಳಬೇಕು. ಬಲಗೈ-ಎಡಗೈ ಬ್ಯಾಟರ್ ಹೊಂದಾಣಿಕೆಯಲ್ಲಿ ಸ್ಟ್ರೈಕ್ ರೊಟೇಟ್ ಮಾಡುವುದು ಸುಲಭ ಎಂದು ನಾನು ಭಾವಿಸಿದ್ದೆ. ಆದರೆ ಆರು ವಿಕೆಟ್ ಪಡೆದ ವಾಂಡರ್ಸೆಗೆ ಕ್ರೆಡಿಟ್ ಸಲ್ಲಬೇಕು” ಎಂದು ಟೀಂ ಇಂಡಿಯಾ ನಾಯಕ ಹೇಳಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.