Olympics; ಲಕ್ಷ್ಯ ಸೇನ್ ಕಂಚು ಕಸಿದುಕೊಂಡ ‘ನೋವು’: ಭಾರಿ ನಿರಾಸೆ
ಮೊದಲ ಸೆಟ್ ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದ ಭರವಸೆಯ ಕಿರಣ ಸೇನ್ ಗೆ ಕೈಕೊಟ್ಟ ಅದೃಷ್ಟ!!!
Team Udayavani, Aug 5, 2024, 7:47 PM IST
ಪ್ಯಾರಿಸ್ : ಭಾರತ ಮತ್ತೊಂದು ಕಂಚಿನ ಪದಕದ ನಿರೀಕ್ಷೆ ಇರಿಸಿದ್ದ ಸೋಮವಾರ(ಆಗಸ್ಟ್5) ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೆನ್ ಅವರು ಮಲೇಷ್ಯಾದ ಏಳನೇ ಶ್ರೇಯಾಂಕದ ಝಿ ಜಿಯಾ ಲೀ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಮೊದಲ ಸೆಟ್ ಮುನ್ನಡೆ ಸಾಧಿಸಿದ್ದ ಲಕ್ಷ್ಯ ಸೇನ್ ಅವರಿಗೆ ಬಲ ಗೈ ಗಾಯ ಸೋಲಿಗೆ ಪ್ರಮುಖ ಕಾರಣವಾಯಿತು.
ಸೆಮಿಯಲ್ಲಿ ಸೋತಿದ್ದ ಸೇನ್ ಕಂಚು ಖಂಡಿತ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿ ಭಾರೀ ಆಘಾತ ಎದುರಾಯಿತು. ಲಕ್ಷ್ಯ ಸೇನ್ ಮೊದಲ ಗೇಮ್ ಅನ್ನು 21-13 ರಿಂದ ಗೆದ್ದರು ಆದರೆ ಎರಡನೇ ಗೇಮ್ ಅನ್ನು 21-16 ರಲ್ಲಿ ಕಳೆದುಕೊಂಡರು. ಮೂರನೇ ಸೆಟ್ ನಲ್ಲಿ ಪ್ರತಿ ರೋಧ ತೋರಲು ಸಾಧ್ಯವಾಗದೆ(21-11) ನೋವಿನಲ್ಲೇ ಕಂಚಿನ ಪದಕದ ಆಸೆ ಕೈಬಿಟ್ಟರು.
ಲಕ್ಷ್ಯ ಸೇನ್ ಸೈಡ್ಲೈನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಪಂದ್ಯ ವಿಳಂಬವಾಯಿತು. ಒಂದಾದ ಮೇಲೆ ಒಂದರಂತೆ ಬ್ಯಾಂಡೇಜ್ ಗಳನ್ನು ಬಲಗೈಗೆ ಸುತ್ತಿರುವುದು ಅವರಿಗೆ ತೀವ್ರ ಸೆಳೆತವಿರುದು ಸ್ಪಷ್ಟವಾಗಿ ಗೋಚರವಾಯಿತು.
ಇದು 22 ರ ಹರೆಯದ ಲಕ್ಷ್ಯ ಸೇನ್ ಅವರ ಮೊದಲ ಒಲಿಂಪಿಕ್ಸ್ ಆಗಿದ್ದು ದೇಶದ ಎರಡು ದೊಡ್ಡ ಬ್ಯಾಡ್ಮಿಂಟನ್ ಭರವಸೆಗಳು ವಿಫಲವಾದ ಪಂದ್ಯಾವಳಿಯಲ್ಲಿ ಅವರು ಭಾರತದ ಪ್ರಕಾಶಮಾನವಾದ ಭರವಸೆಯ ಕಿರಣವಾಗಿ ಗೋಚರಿಸಿದ್ದಾರೆ.
ಇಂದು ಪದಕ ಗೆದ್ದಿದ್ದರೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ದಾಖಲೆ ಬರೆಯುತ್ತಿದ್ದರು.ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಲಂಡನ್ ಗೇಮ್ಸ್ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಭಾರತ ಬ್ಯಾಡ್ಮಿಂಟನ್ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೆ ಗೆದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.