Women’s ಟೇಬಲ್ ಟೆನಿಸ್: ಕ್ವಾರ್ಟರ್ ಫೈನಲ್ಗೆ ಭಾರತ ತಂಡ
ರೊಮೇನಿಯಾ ವಿರುದ್ಧ ಮಣಿಕಾ, ಶ್ರೀಜಾ, ಅರ್ಚನಾ ತಂಡಕ್ಕೆ ಜಯ
Team Udayavani, Aug 5, 2024, 10:29 PM IST
ಪ್ಯಾರಿಸ್: ಒಲಿಂಪಿಕ್ಸ್ ಮಹಿಳಾ ಟೇಬಲ್ ಟೆನಿಸ್ ತಂಡ ಸ್ಪರ್ಧೆಯಲ್ಲಿ ಭಾರತ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿ ದಾಖಲೆ ಬರೆದಿದೆ. ಸೋಮವಾರದ ಸ್ಪರ್ಧೆಯಲ್ಲಿ ಕನ್ನಡತಿ ಅರ್ಚನಾ ಗಿರೀಶ್ ಕಾಮತ್, ಮಣಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಅವರನ್ನೊಳಗೊಂಡ ತಂಡ ರೊಮೇನಿಯಾ ವಿರುದ್ಧ 3-2 ಅಂತರದ ಜಯ ಸಾಧಿಸಿತು.
ಒಟ್ಟು 5 ಸುತ್ತುಗಳ ಸ್ಪರ್ಧೆಯಲ್ಲಿ ಭಾರತ ಆರಂಭಿಕ 2 ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ಆದರೆ ತಿರುಗಿ ಬಿದ್ದ ರೊಮೇನಿಯಾ ಮುಂದಿನೆರಡು ಪಂದ್ಯಗಳನ್ನು ಗೆದ್ದು 2-2 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಿರ್ಣಾಯಕ ಪಂದ್ಯದಲ್ಲಿ ಮಣಿಕಾ ಬಾತ್ರಾ ಭಾರತದ ಗೆಲುವನ್ನು ಸಾರಿದರು.
ಮೊದಲ ಡಬಲ್ಸ್ನಲ್ಲಿ ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್-ಶ್ರೀಜಾ ಅಕುಲಾ ಸೇರಿಕೊಂಡು ಅಡಿನಾ ಡಿಯಾಕೊನು-ಎಲಿಜಬೆತ ಸಮರಾ ಜೋಡಿ ವಿರುದ್ಧ 11-9, 12-10, 11-7 ಅಂತರದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಮಣಿಕಾ ಬಾತ್ರಾ 11-5, 11-7, 11-7 ಅಂತರದಿಂದ ಬರ್ನಾಡೆಟ್ ಸೋಕ್ಸ್ ವಿರುದ್ಧ ಗೆದ್ದರು.
3ನೇ ಪಂದ್ಯದಲ್ಲಿ ಎಲಿಜಬೆತ್ ಸಮರಾ ವಿರುದ್ಧ ಶ್ರೀಜಾ ಸೋಲು ಕಾಣಬೇಕಾಯಿತು. ಅಂತರ 11-8, 4-11, 11-7, 6-11. 4ನೇ ಪಂದ್ಯದಲ್ಲಿ ಅರ್ಚನಾಗೆ ಅದೃಷ್ಟ ಒಲಿಯಲಿಲ್ಲ. ಅವರು ಬರ್ನಾಡೆಟ್ ಸೋಕ್ಸ್ ವಿರುದ್ಧ 5-11, 11-8, 7-11 ಅಂತರದಿಂದ ಸೋತರು. ರೊಮೇನಿಯಾ ಹೋರಾಟವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಮಣಿಕಾ ಬಾತ್ರಾ ಭಾರತದ ಪಾಲಿನ ಆಪತಾºಂಧವರಾಗಿ ಮೂಡಿಬಂದರು. ಅವರು ಅಡಿನಾ ಡಿಯಾಕೊನು ವಿರುದ್ಧ 11-5, 11-9, 11-9 ಮೇಲುಗೈ ಸಾಧಿಸಿದರು.
* ಪುರುಷರ ಟಿಟಿ, ಚೀನ ಎದುರಾಳಿ
ಟೇಬಲ್ ಟೆನಿಸ್ ತಂಡ ವಿಭಾಗದಲ್ಲಿ ಭಾರತದ ಪುರುಷರು ಸೋಮವಾರ ಚೀನವನ್ನು ಎದುರಿಸಲಿದೆ. ಶರತ್ ಕಮಲ್, ಮಾನವ್ ಥಾಕರ್, ಹರ್ಮೀತ್ ದೇಸಾಯಿ ಭಾರತ ತಂಡದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vinesh Phogat ತೀರ್ಪು ನಮ್ಮ ಪರ ಬರುವ ನಿರೀಕ್ಷೆ;ಅದು ವೈಯಕ್ತಿಕ ಪದಕವಲ್ಲ: ಸಂಜಯ್ ಸಿಂಗ್
Paris Olympics: ಅಮೆರಿಕಕ್ಕೆ ಬಂತು ಒಲಿಂಪಿಕ್ಸ್ ಧ್ವಜ
Paris: 2036ರ ಒಲಿಂಪಿಕ್ಸ್ ಭಾರತ ನಡೆಸಬಲ್ಲದು: ಫ್ರಾನ್ಸ್ ಅಧ್ಯಕ್ಷ
Paris Olympics 2024ಕ್ಕೆ ವರ್ಣರಂಜಿತ ವಿದಾಯ
IOA; ವಿನೀಶ್ ಫೋಗಾಟ್ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.