Bangladeshದಲ್ಲಿ ಸೇನಾಡಳಿತ: ಭಾರತಕ್ಕೂ ತಲೆನೋವು!

ಉನ್ನತ ಮಟ್ಟದ ಅಧಿಕಾರಿಗಳ ಜತೆ ಪ್ರಧಾನಿ ಮೋದಿ ಸೋಮವಾರ ರಾತ್ರಿ ತುರ್ತು ಸಭೆ

Team Udayavani, Aug 6, 2024, 7:13 AM IST

PM-Modi-Meeting

ಹೊಸದಿಲ್ಲಿ:  ಬಾಂಗ್ಲಾದೇಶದ ಅಸ್ಥಿರತೆ, ದಂಗೆ, ಸೇನಾಡಳಿತ ಭಾರತಕ್ಕೂ ತಲೆ ನೋವಾಗಿ ಪರಿಣಮಿ ಸುವ ಸಾಧ್ಯ ತೆ ಯಿದೆ. ಭಾರತ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಹಸೀನಾ ಅವರ ರಾಜೀನಾಮೆಯೊಂದಿಗೆ ಭಾರತಕ್ಕೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ.

* ಹತ್ತಿ, ಆಹಾರ ಪದಾರ್ಥ, ಸೆಣಬು, ಕಾಫಿ ಸೇರಿ ಹಲವು ವಸ್ತುಗಳನ್ನು ಬಾಂಗ್ಲಾಗೆ ಭಾರತ ರಫ್ತು ಮಾಡುತ್ತದೆ. ಅಲ್ಲಿನ ಸದ್ಯದ ಬೆಳವಣಿಗೆ ರಫ್ತಿಗೆ ಅಡ್ಡಿಯುಂಟಾಗಬಹುದು.

* ಈಗಾಗಲೇ ಪಾವತಿ ಬಾಕಿಯಂಥ ಸಮಸ್ಯೆಗಳು ಎದುರಾಗಿವೆ. ಈಗ ಅದು ಮತ್ತಷ್ಟು ಬಿಗಡಾಯಿಸಿ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧಕ್ಕೂ ತೊಡಕಾಗಬಹುದು.

* ದಂಗೆ ಹಿನ್ನೆಲೆಯಲ್ಲಿ ಬಾಂಗ್ಲಾದಿಂದ ಪರಾರಿಯಾದವರಿಗೆ ಆಶ್ರಯ ಒದಗಿಸಬೇಕಾದ ಸ್ಥಿತಿ ಎದುರಾಗಬಹುದು. ಗಡಿಯಲ್ಲಿನ ಸ್ಥಳೀಯರ ವಿರೋಧ ಎದುರಿಸಬೇಕಾಗಬಹುದು.

* ಬಾಂಗ್ಲಾದ ಮೂಲಕ ಪಾಕ್‌ ಉಗ್ರರನ್ನು ಭಾರತಕ್ಕೆ ಕಳುಹಿಸಬಹುದು.

*ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಬಾಂಗ್ಲಾ  ದೇಶದಲ್ಲಿ ನೆಲೆ ಸಿಗುವ ಅಪಾಯವೇ ಹೆಚ್ಚು.

*ಬಾಂಗ್ಲಾ ದೇಶದಲ್ಲಿ ಪ್ರಮುಖ ಭೂ ಬಂದರು ಪೆಟ್ರಾಪೋಲ್‌ನಲ್ಲಿ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

*ಬಾಂಗ್ಲಾ ದೇಶದ ಸಂಭಾವ್ಯ ಸರಕಾರ ದೊಂದಿಗೆ ಚೀನ ಕೈ ಜೋಡಿಸಿ, ಭಾರತದ ವಿರುದ್ಧ ಕುತಂತ್ರ ರೂಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಮೋದಿ ಉನ್ನತ ಮಟ್ಟದ ಸಭೆ
ಬಾಂಗ್ಲಾದಲ್ಲಿ ದಂಗೆ ಪರಿಸ್ಥಿತಿ ಮಿತಿ ಮೀರುತ್ತಿರುವ ಹಿನ್ನಲೆ ದೇಶದ ಗಡಿ ಭದ್ರತಾ ಕ್ರಮಗಳ ಬಗ್ಗೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿದಂತೆ ಇತರೆ ಉನ್ನತ ಮಟ್ಟದ ಅಧಿಕಾರಿಗಳ ಜತೆ ಪ್ರಧಾನಿ ಮೋದಿ ಸೋಮವಾರ ರಾತ್ರಿ ತುರ್ತು ಸಭೆ ನಡೆಸಿದ್ದಾರೆ. ಅಜಿತ್‌ ದೋವಲ್‌ ಹಾಗೂ ಜೈಶಂಕರ್‌ ಪರಿಸ್ಥಿತಿ ಬಗ್ಗೆ ವಿವರ ನೀಡಿದ್ದಾರೆ.

ಭಾರತ ಗಡಿಯಲ್ಲಿ ಹೈ ಅಲರ್ಟ್‌
ಬಾಂಗ್ಲಾದಲ್ಲಿ ಸೇನಾಡಳಿತ ಜಾರಿಯಾಗುತ್ತಿದ್ದಂತೆ ಭಾರ ತ- ಬಾಂಗ್ಲಾ ಗಡಿ ಯಲ್ಲಿ ಕಟ್ಟೆ ಚ್ಚರ ವಹಿ ಸ ಲಾ ಗಿದೆ. ಗಡಿಯುದ್ದಕ್ಕೂ ಪ್ರತೀ ಪೋಸ್ಟ್‌ ಗಳಿಗೂ ಬಿಎಸ್‌ಎಫ್ ಹೈ ಅಲರ್ಟ್‌ ಘೋಷಿಸಿದ್ದು, ಯಾವುದೇ ಗಡಿ ನಿಯಮ ಉಲ್ಲಂಘನೆಗಳು ನಡೆಯದಂತೆ ಎಚ್ಚರ ವಹಿಸಿದೆ.

ಭಾರತ-ಬಾಂಗ್ಲಾ ರೈಲು ಸ್ಥಗಿತ
ಮುನ್ನೆಚ್ಚರಿಕೆ ಕ್ರಮ ವೆಂಬಂತೆ ಭಾರತ ಮತ್ತು ಬಾಂಗ್ಲಾ ನಡುವೆ ರೈಲು ಸಂಚಾರ ನಿರ್ಬಂಧವನ್ನು ಭಾರತೀಯ ರೈಲ್ವೇ ವಿಸ್ತರಿಸಿದೆ. ಜು. 19 ಮತ್ತು 21ರಂದೇ ಭಾರತ ಬಾಂಗ್ಲಾಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಚಾರಕ್ಕೆ ನಿರ್ಬಂಧ ಹೇರಲಾ ಗಿತ್ತು. ಇದೀಗ ಗಡಿಯಲ್ಲಿ ಬಿಎಸ್‌ಎಫ್ ಸೂಚನೆ ಮೇರೆಗೆ ಕಟ್ಟೆಚ್ಚರಿಕೆ ವಹಿಸಬೇಕಾಗಿರುವುದರಿಂದ ಮುಂದಿನ ಆದೇಶದವರೆಗೂ ರೈಲು ಸಂಚಾರಕ್ಕೆ ತಡೆ ಮುಂದುವರಿಸಲಾಗಿದೆ.

ಬಾಂಗ್ಲಾ ಪ್ರಯಾಣ ಮುಂದೂಡಿ: ನಾಗರಿಕರಿಗೆ ಭಾರತ ಸಲಹೆ
ಬಾಂಗ್ಲಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಆ ದೇಶಕ್ಕೆ ಪ್ರಯಾಣಿಸುವುದನ್ನು ಮುಂದೂಡುವಂತೆ ಭಾರ ತೀ ಯ ರಿಗೆ ಕೇಂದ್ರ ಸರಕಾರ ಸೂಚಿ ಸಿದೆ. ಅಲ್ಲದೇ ಬಾಂಗ್ಲಾದಲ್ಲಿ ನೆಲೆಸಿರುವ ಭಾರತೀಯರು ಎಚ್ಚರಿಕೆ ವಹಿಸುವಂತೆ ಮತ್ತು ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದೆ.

ಹಸೀನಾ -ದೋವಲ್‌ ಭೇಟಿ
ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಾಯುನೆಲೆಗೆ ಬಂದಿಳಿದ ಬಳಿಕ ಶೇಖ್‌ ಹಸೀನಾ ಅವ ರ ನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿಯಾಗಿದ್ದಾರೆ. ಈ ವೇಳೆ ಏನು ಚರ್ಚೆ ನಡೆ ದಿದೆ ಎಂಬ ಮಾಹಿ ತಿ ಯಿ ಲ್ಲ.

“ಬಾಂಗ್ಲಾದೇಶದಲ್ಲಿನ ಹಿಂಸಾಚಾರದಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ದೇಶದಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ರಕ್ಷಿಸಬೇಕೆಂದು ಅಲ್ಲಿನ ಆಡಳಿತಕ್ಕೆ ಮನವಿ ಮಾಡುತ್ತೇವೆ.‘ – ಕೀರ್‌ ಸ್ಟಾರ್ಮರ್‌, ಬ್ರಿಟನ್‌ ಪ್ರಧಾನಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.