Bajpe: ಹಬ್ಬದ ದಿನಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆ
ಮಳೆಗೆ ತರಕಾರಿ ಇಳುವರಿ ಕುಂಠಿತ: ಕೃಷಿಕರಿಗೆ ನಷ್ಟ
Team Udayavani, Aug 6, 2024, 3:35 PM IST
ಬಜಪೆ: ಸತತ ಮಳೆಗೆ ತರಕಾರಿ ಬೆಳೆಗೆ ಭಾರಿ ಹಾನಿಯಾಗಿದ್ದು ಕೃಷಿಕರಿಗೆ ನಷ್ಟ ಸಂಭವಿಸಿದೆ. ಈ ಬಾರಿ ಮಳೆ ತಡವಾಗಿ ಬಂದ ಕಾರಣ ಕೃಷಿಕರಲ್ಲಿ ತರಕಾರಿ ಬೆಳೆಯ ಲೆಕ್ಕಾಚಾರಗಳಿಗೆ ಸ್ವಲ್ಪಮಟ್ಟಿಗೆ ತೊಂದರೆಕೊಟ್ಟಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ತರಕಾರಿ ಬೆಳೆಯ ಕಾರ್ಯ ಆರಂಭಿಸಿ, ಬೀಜ ಬಿತ್ತನೆ ಮಾಡಲಾಗಿತ್ತು. ಇನ್ನೂ ಕೆಲವರು ತಡವಾಗಿ ಬೀಜ ಬಿತ್ತನೆ ಮಾಡಿದ್ದಾರೆ.
ಬಜಪೆ ಊರಿನ ತರಕಾರಿಗೆ ಪ್ರಸಿದ್ದಿ ಪಡೆದಿದ್ದು, ಅದ ರಲ್ಲೂ ಬಜಪೆ ಬೆಂಡೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿನ ಪರಿಸರದಲ್ಲಿ ಎಕರೆಗಟ್ಟೆಲೆ ಬೆಂಡೆಕಾಯಿ ಬೆಳೆ ಯುವ ಕೃಷಿಕರೇ ಹೆಚ್ಚು. ಇದಕ್ಕೆ ಬೆಲೆಯೂ ಉತ್ತ ಮ ವಾಗಿ ಸಿಗುವ ಕಾರಣ ಊರಿನ ಬೆಂಡೆಯನ್ನು ಹೆಚ್ಚಿನ ಎಲ್ಲಕೃಷಿಕರು ಬೆಳೆಸುತ್ತಿದ್ದಾರೆ. ಈ ಬಾರಿಯೂ ಮಳೆ ತಡವಾಗಿ ಬಂದರೂ ಊರಿನ ಬೆಂಡೆ ಬೀಜದ ಬಿತ್ತನೆಯೂ ಜೂನ್ ಮೊದಲವಾರದಲ್ಲಿ ನಡೆದಿದೆ.
ಬಿತ್ತನೆ ಮಾಡಿ 60 ದಿನವಾದರೂ ಬೆಂಡೆ ಇಲ್ಲ
ಬೆಂಡೆ ಬೀಜ ಬಿತ್ತನೆ ಮಾಡಿ 45 ದಿನಗಳಲ್ಲಿ ಬೆಂಡೆ ಸಿಗುವುದು ಮಾಮೂಲು. ಆದರೆ ಈಗ 60 ದಿನಗಳಾದರೂ ಬೆಂಡೆಕಾಯಿ ಆಗಲಿಲ್ಲ. ಕೇವಲ ಹೂಗಳು ಬಿಟ್ಟಿವೆ. ಅಧಿ ಕ ಮಳೆ ಇದಕ್ಕೆ ಕಾರಣ.
ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಾಗೂ ತೆನೆಹಬ್ಬವನ್ನು ಗಮನದಲ್ಲಿಟ್ಟುಕೊಂಡು ಬೆಂಡೆಯನ್ನು ಜೂನ್ ಮೊದಲ ವಾರದಲ್ಲಿ ಬಿತ್ತನೆಮಾಡಲಾಗುತ್ತದೆ. ನಾಗರ ಪಂಚಮಿಗೆ ಮುನ್ನ ತರಕಾರಿಯನ್ನು ಮಾರುಕಟ್ಟೆಗೆ ತರಲು ಕ್ಲಪ್ತಸಮಯದಲ್ಲಿ ಸಿಗುತ್ತದೆ. ಬಳಿಕ ಅಷ್ಟಮಿಗೆ, ಚೌತಿಗೆ ಹಾಗೂ ತೆನೆ ಹಬ್ಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಡೆ ಸಿಗುತ್ತದೆ. ಇದ್ದರಿಂದ ಇಲ್ಲಿನ ಕೃಷಿಕರಿಗೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಕೆಲವೆಡೆ ಬೆಂಡೆ ಗಿಡಗಳಲ್ಲಿ ಹಳದಿ ರೋಗ ಕಂಡು ಬಂದಿದೆ. ಇದು ಇಳುವರಿಗೆ ದೊಡ್ಡ ಹೊಡೆತವಾಗಿದೆ.
ಗಿಡ ಬೆಳವಣಿಗೆ ಕುಂಠಿತ
ಮಳೆ ಜಾಸ್ತಿಯಾದ ಕಾರಣ ಬೆಂಡೆ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಬಿಟ್ಟ ಹೂಗಳು ಕೊಳೆತು ಹೋಗಿವೆ.ಇದರಿಂದ ಈ ಬಾರಿ ಈಗ ನಾಗರಪಂಚಮಿಗೆ ಹೆಚ್ಚು ಬೆಂಡೆ ಸಿಗದು, ಇನ್ನೂ ಬಿಸಿಲು ಇದ್ದರೆ ಗಿಡಗಳ ಬೆಳವಣಿಗೆ ಸಾಧ್ಯ. ಅಷ್ಟಮಿ ಹಬ್ಬಕ್ಕಾದರೂ ಬೆಂಡೆ ಸಿಗಬಹುದು ಎಂಬುವುದು ಅಡ್ಕಬಾರೆಯ ಕೃಷಿಕ ರಿಚಾರ್ಡ್ ಡಿ’ಸೋಜಾ ಅವರ ನಂಬಿಕೆ.
ಹರಿವೆ ಗಿಡಬೆಳವಣಿಗೆಯೂ ಕುಂಠಿತ ವಾಗಿದೆ. ಊರಿನ ಬೆಂಡೆ ಕೆ.ಜಿ.ಗೆ 200 ರೂ.ಯಲ್ಲಿ ಮಾರಾಟವಾಗುತ್ತಿದೆ. ಆದರೆ ಕೃಷಿಕರಿಗೆ 80 ರೂ.ಸಿಗುತ್ತಿದೆ. ಇತರ ಜಿಲ್ಲೆಯ ಬೆಂಡೆ ಕೆ.ಜಿಗೆ 80 ರೂ. ಯಲ್ಲಿ ಮಾರಾಟ ವಾಗುತ್ತಿದೆ. ಊರಿನ ಪೀರೆಗೆ ಕೆ.ಜಿಗೆ 80 ರೂ. ಮಾರಾಟವಾಗುತ್ತಿದ್ದರೆ. ಕೃಷಿಕರಿಗೆ 50 ರೂ. ಸಿಗುತ್ತಿದೆ. ಊರಿನ ಮುಳ್ಳು ಸೌತೆ ಕೆ.ಜಿಗೆ 120 ರೂ.ಮಾರಾಟವಾಗುತ್ತಿದೆ. ಕೃಷಿಕರಿಗೆ 60 ರೂ.ಸಿಗುತ್ತಿದೆ. ಬಜಪೆಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಕರಂಬಾರು, ಪಡುಪೆರಾರ ಪಡೀಲ್ ಪ್ರದೇಶಗಳು ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.