Guru Purnima 2024: ಗುರುಭ್ಯೊ ನಮಃ


Team Udayavani, Aug 6, 2024, 4:40 PM IST

4-uv-fusion

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’. ಹೌದು ಅಕ್ಷರಶಃ ಸತ್ಯವಾದ ಮಾತು, ನಾವು ಗುರುವಿಗೆ ಗುಲಾಮರಾಗುವ ತನಕವೂ ಮುಕ್ತಿ ದೊರೆಯದು.

ನಾವು ಜೀವನದಲ್ಲಿ ಏನೆÇÉಾ ಸಾಧಿಸಿರಬಹುದು, ಉತ್ತಮ ಬದುಕು ಕಟ್ಟಿಕೊಂಡಿರಬಹುದು, ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದಿರಬಹುದು, ನಾವು ಒಳ್ಳೆಯದೆಂದು ಜೀವನದಲ್ಲಿ ಏನೆÇÉಾ ಕಂಡಿದ್ದೇವೆಯೋ ಅನುಭವಿಸಿದ್ದೇವೋ ಅದೆಲ್ಲವೂ ಗುರುಗಳ ಆಶೀರ್ವಾದ ಮಾರ್ಗದರ್ಶನದ ಫ‌ಲವಾಗಿರುತ್ತದೆ. ಗುರುಗಳ ಆಶೀರ್ವಾದ ಮಾರ್ಗದರ್ಶನ ಇಲ್ಲದೆ ನಾವು ಏನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ.

ತಂದೆ ತಾಯಿ ನಮಗೆ ಜನುಮ ನೀಡುತ್ತಾರೆ ಆದರೆ ಮಣ್ಣಿನ ಮುದ್ದೆಯಂತಿರುವ ಮಕ್ಕಳನ್ನು ತಿದ್ದಿ ತೀಡಿ, ವಿದ್ಯೆ ವಿನಯ ಬುದ್ದಿ ಕಲಿಸಿ ಅವರನ್ನು ಜೀವನದಲ್ಲಿ ದಡ ಸೇರುವಂತೆ ಮಾಡುವವರು ಗುರುಗಳು. ಮಕ್ಕಳ ಎಲ್ಲ ಸಾಧನೆಗೂ ಮಕ್ಕಳ ಹಿಂದಿರುವ ಗುರುಗಳೇ ಕಾರಣರಾಗುತ್ತಾರೆ.

ಮಾತೇ ಇದೆ ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು ಎಂದು. ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಮುಂದೆ ಏನಾಗಬೇಕೆಂಬ ಗುರಿ ನಮ್ಮಲ್ಲಿರಬೇಕು. ಆಗ ಆ ಗುರಿಯನ್ನು ಹೇಗೆ ತಲುಪಬೇಕು, ಯಾವ ವಿಧಾನ, ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಗುರುಗಳು ಮಾರ್ಗದರ್ಶನ ಮಾಡುತ್ತಾರೆ. ಗುರುವಿನ ಮಾರ್ಗದರ್ಶನದ ಮೇರೆಗೆ ಮುಂದಿನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ಗುರುಗಳು ನಮ್ಮ ಪಾಲಿಗೆ ಕೇವಲ ವಿದ್ಯೆ ಬುದ್ದಿ ಕಲಿಸುವವರು ಮಾತ್ರ ಆಗಿರುವುದಿಲ್ಲ, ಬದಲಿಗೆ ತಾಯಿಯ ಪ್ರೀತಿಯನ್ನು ತಂದೆಯ ಪ್ರೇಮವನ್ನು, ಗೆಳೆಯನ ಸ್ನೇಹವನ್ನು ನೀಡುವ ಕರುಣಾಮಯಿ. ದುಃಖದಲ್ಲಿ ಕಣ್ಣೀರ ಒರೆಸಿ ಗುರುತರವಾದ ಮಾರ್ಗ ತೋರುವ ಆತ್ಮಸ್ಥೆçರ್ಯ ತುಂಬುವ, ಗೆಲ್ಲಲೇಬೇಕು ಸಾಧಿಸಲೇಬೇಕು ಎಂಬ ಅಛಲ ವಿಶ್ವಾಸ ತುಂಬುವವರು ಗುರುವಾಗಿರುತ್ತಾರೆ. ಇಂತಹ ಗುರುಗಳು ಜೀವನದಲ್ಲಿ ನಮ್ಮಯ ಜತೆಯಿರೆ ನಾವೇ ಪುಣ್ಯಜೀವಿಗಳು ಅಲ್ಲವೇ.

ಗುರುಗಳು ಎಂದಿಗೂ ತಮ್ಮ ಶಿಷ್ಯಂದಿರ ಏಳಿಗೆಯನ್ನೇ ಬಯಸುತ್ತಾರೆ. ನಮ್ಮ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು, ಸಮಾಜದಲ್ಲಿ ಗುರುತರವಾದ ಸಾಧನೆಯನ್ನು ಮಾಡಬೇಕು, ಒಳ್ಳೆಯ ಸ್ಥಾನಕ್ಕೇರಬೇಕು ಎಂಬ ಭಾವ ಗುರುವರ್ಯರದಾಗಿರುತ್ತದೆ. ವಿದ್ಯಾರ್ಥಿಗಳು ಸಾಧಿಸಿದಾಗ ಮೊದಲು ಖುಷಿಪಡುವ ಜೀವ ಎಂದರೆ ಅದು ಗುರುಗಳು ಮಾತ್ರ.

ಗುರುಗಳು ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಮೊದಲು ಶಾಲೆಗೆ ಓಡಿ ಬರುತ್ತಾರೆ ಕಾರಣ ಶಾಲೆಯಲ್ಲಿ ತನಗಾಗಿ ಕಾದಿರುವ ಜೀವಗಳಿವೆ ಎಂದು. ಮಕ್ಕಳಿಗೆ ಕಲಿಸುತ್ತಾ ತನ್ನಯ ದುಃಖವನ್ನೆÇÉಾ ಮರೆಯುವಾತ ಗುರು. ಹಾಗೆಯೇ ಗುರುವು ತನ್ನ ಸ್ವಂತ ಮಗುವಿಗೇ ಅನಾರೋಗ್ಯ ಉಂಟಾದರೂ ಸಹ ತನ್ನ ಮನೆಯಲ್ಲಿ ಮಗುವಿನ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಿ ಶಾಲೆಗೆ ಬರುತ್ತಾನೆ ಕಾರಣ ಶಾಲೆಯಲ್ಲಿ ತನ್ನನ್ನು ನಂಬಿರುವ ಮಕ್ಕಳಿದ್ದಾರೆ ಎಂದು. ಅಂತಹ ಹೃದಯವಂತರು ನಮ್ಮ ಗುರುಗಳು.

ಇಂತಹ ಗುರುಗಳಿಗೆ ನಾವು ವಂದನೆಗಳನ್ನು ಗೌರವವನ್ನು ಸಲ್ಲಿಸಬೇಕು. ಎಷ್ಟು ಜನುಮ ಪಡೆದರೂ ತಂದೆತಾಯಿಯ, ಗುರುವಿನ ಋಣವನ್ನು ತೀರಿಸಲಾಗದು ಆದರೂ ಅವರಿಗೆ ಧನ್ಯವಾದವನ್ನು ತಿಳಿಸುವ ಮನೋಭಾವ ನಮ್ಮಲ್ಲಿರಬೇಕು.

ಗುರುಗಳಿಗೆ ವಂದನೆಯನ್ನು ತಿಳಿಸುವ ಸಲುವಾಗಿಯೇ ಪ್ರತಿ ವರುಷವೂ ಆಷಾಡ ಮಾಸದಲ್ಲಿ ಗುರುಪೂರ್ಣಿಮೆಯು ಬರುತ್ತದೆ. ಅಂದು ನಾವೆಲ್ಲರೂ ನಮ್ಮ ನಮ್ಮ ಗುರುಗಳನ್ನು ನೆನೆದು ಅವರಿಗೆ ಭಕ್ತಿಪೂರ್ವಕವಾದ ಗೌರವಯುತವಾದ ಧನ್ಯವಾದಗಳನ್ನು ಅರ್ಪಿಸೋಣ. ಗುರುಗಳ ಜೀವ ಏನನ್ನೂ ಬಯಸದು ಅಂದಿನ ದಿನ ಅವರ ನೆನೆದು ಧನ್ಯವಾದ ಹೇಳಿದರೆ ಅದರಿಂದಲೇ ಸಂತಸಪಡುವ ಮಾತೃ ಹೃದಯಿ ಮನಸು ಅವರದು.

ಗುರುಗಳಿಗೆ ವಂದಿಸುವುದು, ನೆನೆಯುವುದು ಅವರ ಸೇವೆಯನ್ನು ನೆನೆದು ಧನ್ಯವಾದಗಳನ್ನು ಸಲ್ಲಿಸುವುದು ಹಿಂದಿನಿಂದಲೂ ನಡೆದುಬಂದ ನಮ್ಮ ಸಂಸ್ಕೃತಿಯಾಗಿದೆ. ಈ ಆಚಾರ ವಿಚಾರಗಳನ್ನು ನಾವು ತಿಳಿಯುವುದರೊಂದಿಗೆ ನಮ್ಮ ಮಕ್ಕಳಿಗೂ ತಿಳಿಸೋಣ ಕಲಿಸೋಣ ಮನವರಿಕೆ ಮಾಡಿಕೊಡೋಣ.

-ಭಾಗ್ಯ ಜೆ. ಬೋಗಾದಿ

ಮೈಸೂರು

ಟಾಪ್ ನ್ಯೂಸ್

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.