Insect World: ಕೀಟ ಜಗತ್ತಿನ ಸಹಜೀವನ


Team Udayavani, Aug 6, 2024, 5:24 PM IST

8-uv-fusion

ತಮ್ಮ ಮನೆಯ ಹೂ ಕುಂಡಗಳಲ್ಲೋ ಅಥವಾ ನೆಲದಲ್ಲಿ ನೆಟ್ಟ ಹೂವಿನ ಗಿಡ ಅಥವಾ ಹಣ್ಣಿನ ಗಿಡಗಳಲ್ಲಿ ಬಿಳಿ ಬಣ್ಣದ ತೆಪೆಯಂತೆ ಕಾಣುವ ಜೀವಿಗಳ ಸಮೂಹವನ್ನು ಎಲ್ಲರೂ ಗಮನಿಸಿರಬಹುದು. ಈ ಬಿಳಿಯ ತೇಪೆಗಳಂತೆ ಕಂಡು ಬರುವುದು ಆಫಿಡ್‌ ಕೀಟಗಳು (ಬಿಳಿ ಸಸ್ಯ ಹೇನುಗಳು). ಇವು ಸಸ್ಯಗಳ ರಸವನ್ನೇ ಆಹಾರವನ್ನಾಗಿಸಿಕೊಂಡು ಬದುಕುವ ಜೀವಿಗಳು. ಈ ಕೀಟಗಳು ಬರೀ ಸಸ್ಯಗಳ ಜೀವ ಸತ್ವವನ್ನು ಹೀರುವುದು ಮಾತ್ರವಲ್ಲ, ಹಲವು ಸಸ್ಯಗಳ ರೋಗಗಳಿಗೆ ಮೂಲವೂ ಆಗಿರುತ್ತವೆ.

ಇರುವೆಗಳಿಗೆ ಈ ಕೀಟಗಳನ್ನು ಕಂಡರೆ ಒಂದುತರಹದ ಪ್ರೀತಿ. ಇದಕ್ಕೂ ಒಂದು ಬಲವಾದ ಕಾರಣವಿದೆ. ವಿಷಯ ಏನೆಂದರೆ ಈ ಕೀಟಗಳು ಸಸ್ಯ ರಸವನ್ನು ಭಕ್ಷಿಸಿದ ಅನಂತರ ವಿಸರ್ಜಿಸುವ ‘ಹನಿಟ್ನೂ’ ಎಂಬ ಸಿಹಿ ದ್ರವವು ಇರುವೆಗಳ ಪಾಲಿನ ಪಂಚಾಮೃತ. ಹೆಸರೇ ಹೇಳುವಂತೆ ಈ ‘ಹನಿ ಟ್ನೂ’ ರುಚಿಯಲ್ಲಿ ಸಿಹಿಯಾಗಿರುವುದಲ್ಲದೇ ಇದರಲ್ಲಿರುವ ಶರ್ಕರಗಳು ಇರುವೆಗಳಿಗೆ ನೆಚ್ಚಿನ ಆಹಾರವಾಗಿದೆ. ಇದು ಇರುವೆಯ ಗುಂಪು ಹಾಗೂ ರಾಣಿ ಇರುವೆಗೆ ಶಕ್ತಿ ನೀಡುವ ಆಹಾರ ಕೂಡ ಆಗಿದೆ. ಇದೇ ಕಾರಣದಿಂದ ಈ ‘ಹನಿ ಟ್ನೂ’ವನ್ನು ಹಲವು ತಳಿಯ ಇರುವೆಗಳು ಏಫಿಡ್‌ಗಳ ಹೊಟ್ಟೆಯ ಭಾಗವನ್ನು ತನ್ನ ಮೀಸೆಗಳಿಂದ (ಆ್ಯಂಟೆನಾ) ಮೃದುವಾಗಿ ಒತ್ತುವ ಮೂಲಕ ಏಫಿಡ್‌ಗಳು ‘ಹನಿ ಟ್ನೂ’ ವಿಸರ್ಜಿಸುವಂತೆ ಮಾಡುತ್ತವೆ, ಹಾಗೂ ಈ ರಸವನ್ನು ಇರುವೆಗಳು ಸಂಗ್ರಹಿಸುತ್ತವೆ.

ತನಗೆ ಉಪಕಾರ ಮಾಡಿದ ಏಫಿಡ್‌ಗಳನ್ನು ಇರುವೆಗಳೂ ಮರೆಯುವುದಿಲ್ಲ. ತನಗೆ ಆಹಾರ ನೀಡಿದ ಏಫಿಡ್‌ಗಳನ್ನು ಇರುವೆಗಳು ಜೋಪಾನವಾಗಿ ನೋಡಿಕೊಳ್ಳುತ್ತವೆ. ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ಎಷ್ಟೋ ಇರುವೆಗಳ ಪ್ರಜಾತಿಗಳು ಕಾಲಾನುಕಾಲಕ್ಕೆ ಏಫಿಡ್‌ಗಳನ್ನು ತಮ್ಮ ನೆಲೆಗಳತ್ತ, ಹೆಚ್ಚು ಸಸ್ಯ ರಸವನ್ನು ನೀಡಬಲ್ಲ ಸಸ್ಯಗಳತ್ತ ಹೊತ್ತೂಯ್ಯುವ ಕೆಲಸವನ್ನೂ ಮಾಡುತ್ತವೆ.

ಒಟ್ಟಿನಲ್ಲಿ ಏಫಿಡ್‌ಗಳು ಸಸ್ಯಗಳಿಗೆ ಅಪಕಾರಿಯಾದರೂ, ಇರುವೆಗಳ ಪಾಲಿಗೆ ಉಪಕಾರಿಯಾಗಿವೆ. ಈ ಮೂಲಕ ನಿಸರ್ಗದ ಜಟಿಲ ವ್ಯವಸ್ಥೆಯಲ್ಲಿ, ಪ್ರಕೃತಿ ಸೃಷ್ಟಿಸಿದ ಎಲ್ಲ ಜೀವಿಗಳು ಕೂಡ ನಿಸರ್ಗ ವ್ಯವಸ್ಥೆಗೆ ಅಗತ್ಯ ಎಂಬ ಸಂದೇಶ ನೀಡುತ್ತವೆ.

-ಅನುರಾಗ್‌ ಗೌಡ

ಮೂಡಿಗೆರೆ

ಟಾಪ್ ನ್ಯೂಸ್

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.