Bangladeshದಲ್ಲಿ ಅಶಾಂತಿ: ಭಾರತದ 12ಕ್ಕೂ ಹೆಚ್ಚು ಕಂಪನಿಗಳಿಗೆ ಆರ್ಥಿಕ ಹೊಡೆತ
ಬಾಂಗ್ಲಾ ರಾಜಕೀಯ ಅರಾಜಕತೆಯಿಂದ ಹಲವು ಕಂಪನಿಗಳ ಶೇರು ಮೌಲ್ಯವು ಕುಸಿತ
Team Udayavani, Aug 6, 2024, 7:55 PM IST
ಹೊಸದಿಲ್ಲಿ: ಬಾಂಗ್ಲಾದೇಶ (Bangladesh)ದಲ್ಲಿ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿ ಪ್ರಧಾನಿ ಶೇಖ್ ಹಸೀನಾ (Sheikh Hasina) ರಾಜೀನಾಮೆ ಸಲ್ಲಿಸಿದ ಪರಿಣಾಮ ಅಲ್ಲಿನ ರಾಜಕೀಯ ಅರಾಜಕತೆಯು ಭಾರತ ಮೂಲದ ಕಂಪನಿಗಳ ವಾಣಿಜ್ಯ ಉದ್ಯಮಕ್ಕೆ ಹೊಡೆತ ನೀಡಿದೆ.
ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಪರಿಣಾಮ ಭಾರಿ ಹಿಂಸಾಚಾರದಿಂದಾಗಿ ಅರಾಜಕತೆ ಉಂಟಾಗಿರುವುದು ಆರ್ಥಿಕತೆಗೂ ಹೊಡೆತ ಬಿದ್ದಿದೆ . ಬಾಂಗ್ಲಾದಲ್ಲಿ 2009ರಿಂದ ನಿರಂತರವಾಗಿ ಅಧಿಕಾರದಲ್ಲಿದ್ದ ಶೇಖ್ ಹಸೀನಾ ನೆರೆಯ ರಾಷ್ಟ್ರ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದಿದ್ದರು. ಇದೀಗ ಅಧಿಕಾರದಿಂದ ಹಸೀನಾ ನಿರ್ಗಮನವು ಭಾರತ ಮೂಲದ ವ್ಯಾಪಾರ ಕಂಪನಿಗಳು ಆರ್ಥಿಕ ಸ್ಥಿರತೆ ಸಾಧಿಸುವಲ್ಲಿ ಅಲ್ಪಮಟ್ಟಿನ ಅಪಾಯ ಎದುರಾಗುವ ಸಾಧ್ಯತೆ ಇದೆ.
ಬಾಂಗ್ಲಾದಲ್ಲಿನ ರಾಜಕೀಯ ಪ್ರಕ್ಷುಬ್ದತೆಯಿಂದಾಗಿ ಅಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುವ ಭಾರತ ಮೂಲದ ಕೆಲವು ಕಂಪನಿಗಳಲ್ಲಿನ ಮಾರುಕಟ್ಟೆ ಶೇರುಗಳ ಮೌಲ್ಯವು ಕುಸಿತ ಕಂಡಿದೆ.
ಮಾರಿಕೋ: ಬಾಂಗ್ಲಾದಲ್ಲಿನ ಅರಾಜಕತೆಯಿಂದ ಮಾರಿಕೋ ಕಂಪನಿಯ ಉತ್ಪನ್ನವಾದ ಸಫೋಲಾ ಆಯಿಲ್ ವ್ಯವಹಾರದಲ್ಲಿ ಶೇ.4 ಕುಸಿತ ಕಂಡಿದೆ. ಈ ಕಂಪನಿಗೆ ಬಾಂಗ್ಲಾದೇಶದಿಂದ ಶೇ.11 ರಿಂದ 12 ಆದಾಯವು ಬರುತ್ತಿತ್ತು. ಈಗ ಪ್ರಸ್ತುತ ಬಿಕ್ಕಟ್ಟಿನಿಂದಾಗಿ ವ್ಯಾಪಾರದಲ್ಲಿ ಕುಸಿತ ಕಾಣಲಿದೆ.
ಪರ್ಲ್ ಗ್ಲೋಬಲ್ ಇಂಡಸ್ಟ್ರೀಸ್: ಈ ಕಂಪನಿಗೆ ಬಾಂಗ್ಲಾದೇಶದಿಂದ ಶೇ.25ರಷ್ಟು ಆದಾಯ ಹರಿದು ಬರುತ್ತಿತ್ತು. ಪ್ರಸ್ತುತ ಪರಿಸ್ಥಿತಿಯಿಂದ ಕಂಪನಿಯ ಶೇರು ಮೌಲ್ಯವು ಶೇ.3 ಕುಸಿತ ಕಂಡಿದೆ. ಬಾಂಗ್ಲಾದಲ್ಲಿ ಅಶಾಂತಿ, ಕರ್ಫ್ಯೂನಿಂದಾಗಿ ಈ ಕಂಪನಿಯು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ
Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು
ಇಂದು ದಿಲ್ಲಿಗೆ ಹೊಸ ಸಿಎಂ? ಸಂಜೆ ಸಿಎಂ ಕೇಜ್ರಿವಾಲ್ ರಾಜೀನಾಮೆ
MODI ಇಂದು 75ನೇ ವಸಂತಕ್ಕೆ ಕಾಲಿಟ್ಟ ಮೋದಿ: ಎಲ್ಲೆಡೆ ಹುಟ್ಟುಹಬ್ಬ ಆಚರಣೆ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.