UV Fusion: ಬಾಲ್ಯದ ಮಳೆ ಹನಿಗಳ ಸವಿ ನೆನಪು


Team Udayavani, Aug 6, 2024, 6:07 PM IST

12-uv-fusion

ಎಡೆಬಿಡದೆ ಸುರಿಯುವ ಈ ಜಿಟಿಜಿಟಿ ಮಳೆಯನ್ನು ಮನೆಯ ಕಿಟಕಿಯ ಬಳಿ ಕೂತು ನೋಡುತ್ತಿದ್ದರೆ ಯಾರಿಗಾದರೂ ಸರಿ ಅವರ ಬಾಲ್ಯದ ದಿನಗಳು ಒಮ್ಮೆ ಕಣ್ಣ ಮುಂದೆ ಸರಿದು ಹೋಗುವುದಂತು ಖಂಡಿತ. ಮಳೆ ಜೋರಾಗುತ್ತಿದೆ ಅಂದಾಗ ನಾಳೆ ಶಾಲೆಗೆ ರಜೆ ಇರಲಿ ಎಂದು ದೇವರಲ್ಲಿ ಅಂಗಲಾಚುವುದು, ಟಿವಿಯಲ್ಲಿ ಬರೀ ಕಾಟೂìನ್‌ ನೋಡುತ್ತಿದ್ದವರು ನಾಳೆ ರಜೆ ಘೋಷಿಸುವರೇ ಎಂದು ಶ್ರದ್ಧೆಯಿಂದ ವಾರ್ತೆಯನ್ನು ನೋಡುವುದು. ನಾಳೆ ಶಾಲೆಗೆ ರಜೆ ಇದೆ ಎಂದು ಖಚಿತವಾದಾಗ ಖುಷಿಯಿಂದ ಕುಣಿದು ಕುಪ್ಪಳಿಸುವುದು, ಆಹಾ, ಬಾಲ್ಯದ ಆ ದಿನಗಳೇ ಚೆನ್ನಾಗಿದ್ದವು.

ಮಳೆಗಾಲದಲ್ಲಿ ಸಿಗುವ ಈ ರಜೆಯಲ್ಲಿ ಏನಾದರು ಬಿಸಿಬಿಸಿ ಕುರುಮ್‌ ಕುರುಮ್‌ ತಿಂಡಿ ತಿನ್ನುತ್ತಾ ಟಿವಿ ನೋಡೋಣವೆಂದರೆ ಮಳೆಯಿಂದ ಆಗಾಗ ತಪ್ಪುವ ನೆಟ್ವರ್ಕ್‌, ನೆಟ್ವರ್ಕ್‌ ಸರಿಯಾಯಿತೆಂದಾಗ ಕೈಕೊಡುವ ಕರೆಂಟ್‌. ಈ ಎಲ್ಲ ಪಜೀತಿಗಳಿಂದ ರಜೆಯ ಮಜಾ ಹಾಳಾಗುತ್ತದೆಯಲ್ಲ ಎಂದು ಹೊರಗೆ ಹೋಗಿ ಆಟವಾಡೋಣ ಅಂದುಕೊಂಡರೆ ಸಾಕು ಆಗ ಧೋ ಎಂದು ಜೋರಾಗಿ  ಮಳೆಯ ಆರಂಭ. ಆದರೂ ಮನೆಯವರ ಅದರಲ್ಲೂ ಅಮ್ಮನ ಕಣ್ಣುತಪ್ಪಿಸಿ ಕದ್ದು ಮುಚ್ಚಿ ಮಳೆಯಲ್ಲಿ ಆಟವಾಡುವುದರಲ್ಲೂ ಒಂದು ಮಜವಿತ್ತು. ಇನ್ನು ಮಳೆ ಸ್ವಲ್ಪ ವಿರಾಮ ನೀಡಿದರೆ ಸಾಕು ಅಂಗಳ , ಮೈದಾನದಲ್ಲಿ ಕೆಸರು ತುಂಬಿದ್ದರೂ ಅದರಲ್ಲೇ ಕುಂಟೆ-ಬಿಲ್ಲೆ, ಲಗೋರಿ, ಕಣ್ಣಮುಚ್ಚಾಲೆ, ಖೋ-ಖೋ ಆಟ ಆರಂಭವೇ.

ಮಳೆಗಾಲದಲ್ಲಿ ಸಂಜೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುವಾಗ ರಸ್ತೆಬದಿಯ ಮರಗಳಲ್ಲಿರುತ್ತಿದ್ದ ಜೂಸೆಹಣ್ಣು, ಮಾವಿನಹಣ್ಣುಗಳನ್ನು ಕದ್ದು ತಿನ್ನುವುದರಲ್ಲಿರುವ ಖುಷಿ ಅನುಭವಿಸುವವರಿಗೇ ಗೊತ್ತು. ಮಳೆಗಾಲದ ತಂಪು ವಾತಾವರಣದಲ್ಲಿ, ಚುಮು ಚುಮು ಚಳಿಗೆ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಅದಕ್ಕೆಂದೇ ಇನ್ನೇನು ಮಳೆಗಾಲ ಶುರು ಅನ್ನುವಷ್ಟರಲ್ಲಿ ಮನೆಯಲ್ಲಿ ಮಳೆಗಾಲಕ್ಕೆ ಬೇಕಾಗುವ ಹಲಸಿನಕಾಯಿಯ ಹಪ್ಪಲ, ಸಂಡಿಗೆ, ಉಪ್ಪಿನಕಾಯಿ, ಹಾಗಲಕಾಯಿ ಚಿಪ್ಸ್‌, ಆಲೂಗಡ್ಡೆ ಚಿಪ್ಸ್‌ಗಳ ತಯಾರಗುತ್ತಿತ್ತು. ಮಳೆ ಬರುವಾಗ ಇದನ್ನೆಲ್ಲಾ ಚಪ್ಪರಿಸಿ ತಿನ್ನುವ ಸುಖವೇ ಬೇರೆ.

ಬಾಲ್ಯದ ನೆನಪುಗಳು ಇವಾದರೆ ಇನ್ನು ಯೌವನದಲ್ಲಿ ಮಳೆಗಾಲ ಕಳೆಯುವ ರೀತಿಯೇ ಬೇರೆ. ಮಳೆ ರಜೆಗೆ ಸ್ನೇಹಿತರೊಂದಿಗೆ, ಮನೆಯವರೊಂದಿಗೆ ಪ್ರವಾಸ ಆರಂಭವಾಗುತ್ತಿತ್ತು. ಈ ಸಂದರ್ಭಗಳಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ನೆನಪುಗಳು ಇನ್ನೂ ಅಚ್ಚಳಿಯದಂತೆ ಹಸುರಾಗಿವೆ. ಮಡಿಕೇರಿಯ ರಾಜಾಸೀಟ್‌, ಅಬ್ಬಿ ಜಲಪಾತ, ಜೋಗಜಲಪಾತ, ಶಿವನ ಸಮುದ್ರ, ಶೃಂಗೇರಿ, ಚಿಕ್ಕಮಗಳೂರು, ಮಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದೆವು. ಈ ಸ್ಥಳಗಳನ್ನು ಮಳೆಗಾಲದಲ್ಲೇ ವೀಕ್ಷಿಸಬೇಕು. ವರ್ಷದ ಈ ಅವಧಿಯಲ್ಲೇ ಮಲೆನಾಡು, ಕರಾವಳಿಯ ನಿಜವಾದ ಪ್ರಕೃತಿಕ ಸೌಂದರ್ಯ ಕಾಣುವುದು. ಪ್ರಕೃತಿಯ ರಮಣೀಯ ದೃಶ್ಯಗಳು ನಮ್ಮ ಮನಸ್ಸಿನ ದುಃಖಗಳೆಲ್ಲ ಒಂದೇ ಕ್ಷಣದಲ್ಲಿ ಮಾಯ ಮಾಡುವುದರಲ್ಲಿ ಎರಡು ಮಾತಿಲ್ಲ.

ಈಗ ಕಾಲೇಜು, ಈವರೆಗೆ ನಡೆದುದ್ದದ್ದೆಲ್ಲವೋ ಒಂದು ಕನಸಿನಂತೆ ಭಾಸವಾಗುತ್ತಿದೆ. ಈಗ ಮಳೆಯನ್ನೂ ನೋಡುತ್ತಿದ್ದರೆ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿಕೊಂಡು ಅಂತಹ ದಿನಗಳನ್ನು ನಾವು ಅನುಭವಿಸಿದ್ದು ನಿಜವೇ ಎಂಬ ಪ್ರಶ್ನೆ ಮೂಡುತ್ತದೆ. ಏನೇ ಆದರೂ  ಮಳೆಯೊಂದಿಗೆ ಕಳೆದ ಬಾಲ್ಯದ ನೆನಪುಗಳು ಎಂದೆಂದೂ ಅಮರ.

ಅಕ್ಷಿತಾ ಡಿ.

ಬಿ. ವೋಕ್‌ (ಡಿಎಂಎಫ್ಎಂ), ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು, 10 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

Education System: ಶಿಕ್ಷಕರು, ಶಿಕ್ಷಣ ಹೇಗಿದ್ದರೆ ಚೆನ್ನ..?

19-uv-fusion

UV Fusion: ಶಿಕ್ಷಕರೊಂದಿಗಿನ ನೆನಪುಗಳು

18-uv-fusion

UV Fusion: ಬಯಕೆಯ ಬೆನ್ನೇರಿದಷ್ಟು ನೆಮ್ಮದಿ ಮರೀಚಿಕೆಯಷ್ಟೇ?

17-uv-fusion

Kasaragod Inscriptions: ಇತಿಹಾಸದ ಕಥೆ ಹೇಳುವ ಕಾಸರಗೋಡಿನ ಶಾಸನಗಳು

16-uv-fusion

UV Fusion: ಮಾತು ಅತಿಯಾಗದಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Bengaluru: ಪೊಲೀಸರ ಹಲ್ಲೆಯಿಂದ ಪತಿ ಸಾವು; ಪತ್ನಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.