Dharwad University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

ರಾಸಾಯನಿಕ ಕೃಷಿಯ ಭಾರ ತಗ್ಗಿಸುವ ಪ್ರಯತ್ನ ಇದಾಗಿದೆ.

Team Udayavani, Aug 6, 2024, 6:10 PM IST

Dharwad  University: ಧಾರವಾಡ ಕೃಷಿ ವಿವಿಯಿಂದ ಜೈವಿಕ ಗೊಬ್ಬರ!

ಉದಯವಾಣಿ ಸಮಾಚಾರ
ಧಾರವಾಡ: ಕ್ವಿಂಟಲ್‌ಗ‌ಟ್ಟಲೇ ರಾಸಾಯನಿಕ ಗೊಬ್ಬರ ಹಾಕಿ, ನೂರಾರು ಲೀಟರ್‌ ಕೀಟನಾಶಕ ಬಳಸಿ ಕೃಷಿ ಮಾಡುವುದು ಈಗ
ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಕೃಷಿ ಕೊನೆಗಾಣಿಸಲು ಧಾರವಾಡ ಕೃಷಿ ವಿವಿ ಜೈವಿಕ ರಸಗೊಬ್ಬರ, ಜೀವಾಣುಗಳು ಮತ್ತು ಕ್ರಿಮಿನಾಶಕಗಳನ್ನು ಸಂಶೋಧಿಸಿದೆ. ಅವುಗಳ ಬಳಕೆಗೂ ಹೊಸ ಪರಿಭಾಷಿಕೆ ಬರೆದಿದೆ.

20 ಕ್ವಿಂಟಲ್‌ ರಸಗೊಬ್ಬರ ಬಳಸುವ ಒಂದು ಬೆಳೆ ಅಥವಾ ಹೊಲಕ್ಕೆ ಕೇವಲ 20 ಕೆ.ಜಿ. ಜೈವಿಕ ಗೊಬ್ಬರ ಬಳಕೆ ಮಾಡಿ ಅಷ್ಟೇ ಇಳುವರಿ ಮತ್ತು ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬೆಳೆಯುವ ಸಂಶೋಧನೆ ವಿವಿಯ ಸಾವಯವ ಕೃಷಿ ವಿಭಾಗ ಸತತ 2017ರಿಂದ ನಡೆಸಿ ಇದೀಗ ಯಶಸ್ವಿಗೊಳಿಸಿದೆ.

ಪೇಟೆಂಟ್‌ಗೂ ಚಿಂತನೆ: ಜೈವಿಕ ದ್ರವ ಮತ್ತು ಜೈವಿಕ ಕಣಗಳನ್ನು ಕೂಡ ಶೋಧಿಸಿ ವಿವಿ ಸೈ ಎನಿಸಿಕೊಂಡಿದೆ. ಅಷ್ಟೇಯಲ್ಲ, ಈ ಎಲ್ಲ ಜೀವಾಣುಗಳನ್ನು ವರ್ಷಗಟ್ಟಲೇ ಕೆಡದಂತೆ ಮತ್ತು ಸುರಕ್ಷಿತವಾಗಿ ಕಾಯ್ದಿಡುವ ತಂತ್ರಜ್ಞಾನಗಳನ್ನು ಸ್ವತಃ
ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದು, ಅವುಗಳ ಪೇಟೆಂಟ್‌ಗೂ ಸಿದ್ಧತೆ ನಡೆಸಿದೆ.

ಕೃಷಿ ವಿವಿ ತನ್ನ ವ್ಯಾಪ್ತಿಯ ಜಿಲ್ಲೆಗಳ ಸುತ್ತಲಿನ ಎಲ್ಲ ಬೆಳೆಗಳಿಗೂ ಕಡಿಮೆ ಖರ್ಚಿನಲ್ಲಿ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಮಾಡುವ ವಿಧಾನಗಳನ್ನು ಶೋಧಿಸಿಟ್ಟಿದೆ. ಮುಂಗಾರು ಬೆಳೆಗಳಾದ ಶೇಂಗಾ, ಸೋಯಾ, ಗೋವಿನಜೋಳ ಹಾಗೂ ಹಿಂಗಾರಿ ಬೆಳೆಗಳಾದ ಕಡಲೆ, ಗೋಧಿ, ಜೋಳ ಬೆಳೆಗಳ ಮೇಲೆ ಜೈವಿಕ ಗೊಬ್ಬರ ಮತ್ತು ಕ್ರಿಮಿನಾಶಕ ಯಶಸ್ವಿಯಾಗಿ ಶೇ.100 ಫಲಿತ ಬಂದಿದೆ. ವರ್ಷದಿಂದ ವರ್ಷಕ್ಕೆ ಜೈವಿಕ ಗೊಬ್ಬರ ಉತ್ಪಾದನೆ ಮತ್ತು ರೈತರಿಗೆ ಹಂಚಿಕೆ ಶೇ.500 ಪಟ್ಟು ಹೆಚ್ಚಾಗುತ್ತಿದ್ದು, ಸಾವಯವ ಕೃಷಿಯತ್ತ ರೈತರು ದಾಪುಗಾಲಿಡುವಂತೆ ಮಾಡಿದೆ.

ಒಂದೇ ಪದಾರ್ಥದಲ್ಲಿ 8-11 ಜೀವಾಣು:
ಸಾವಯವ ಕೃಷಿ ವಿಭಾಗ, ಈಗ ಭೂಮಿಯ ಒಳಭಾಗದಲ್ಲಿ ಸಸ್ಯ ಮತ್ತು ಗಿಡಗಳ ಬೇರಿಗೆ ಎಂಟು ವಿಭಿನ್ನ ಜೀವಾಣುಗಳನ್ನು ಒಂದೇ ಪದಾರ್ಥದಲ್ಲಿ ಕೂಡಿಟ್ಟು ನೀಡುವ ವಿನೂತನ ತಂತ್ರಜ್ಞಾನ ಶೋಧಿಸಿ ಯಶಸ್ವಿಯಾಗಿದೆ. ಭೂ ಮೇಲ್ಪದರದಲ್ಲಿ ಸಸ್ಯಗಳಿಗೆ, ಬೆಳೆಗಳಿಗೆ ದಾಳಿ ಮಾಡುವ ರೋಗಾಣುಗಳನ್ನು ತಡೆಯುವ 11 ಜೈವಿಕ ಜೀವಾಣುಗಳುಳ್ಳ ಒಂದೇ ಪದಾರ್ಥ ಸಿದ್ಧಗೊಳಿಸಿದೆ.

ರಾಸಾಯನಿಕ ಕೃಷಿಯ ಭಾರ ತಗ್ಗಿಸುವ ಪ್ರಯತ್ನ ಇದಾಗಿದೆ. ಸದ್ಯಕ್ಕೆ ಶೇ.30 ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳ ಹೊರೆಯಿಂದ ರೈತರು ಮುಕ್ತರಾಗುವ ಸೂತ್ರ ಸಿದ್ಧಗೊಂಡಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಜೈವಿಕ ಕೃಷಿ ಮಾಡುವ ತಂತ್ರಜ್ಞಾನ ಶೋಧಿಸುತ್ತೇವೆ.
●ಡಾ| ಶ್ರೀಪಾದ ಕುಲಕರ್ಣಿ,
ಕೃಷಿ ವಿಜ್ಞಾನಿ, ಕೃಷಿ ವಿವಿ ಧಾರವಾಡ

ರಾಸಾಯನಿಕ ಕೃಷಿಯಿಂದ ಸಾಕಷ್ಟು ಬೆಲೆ ತೆತ್ತಿದ್ದೇವೆ. ಇದೀಗ ದೇಶಿ ಮತ್ತು ಸಾವಯವ ಕೃಷಿ ಶೋಧನೆ ಮತ್ತು ಫಲಿತಗಳು ರೈತರ ಹೊಲ ಸೇರಬೇಕಿದೆ. ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ.
●ಸಿ.ಪಿ.ಪಾಟೀಲ, ಕುಲಪತಿ, ಕೃಷಿ ವಿವಿ ಧಾರವಾಡ

■ ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

ShreeKanth

Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

Hubli: ಬೈಕಲ್ಲಿ ಹೋಗುತ್ತಿದ್ದಾಗ ತಲೆಗೆ ರಾಡ್‌ ಬಿದ್ದು ಗಾಯಗೊಂಡಿದ್ದ ಎಎಸ್‌ಐ ಸಾವು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.