‘Kantara’ 24 ವರ್ಷಗಳ ಕಾಯುವಿಕೆಯ ನಂತರ ಚಿಯಾನ್ ವಿಕ್ರಮ್ ಭೇಟಿಯಾದ ರಿಷಬ್ ಶೆಟ್ಟಿ!
ನಮಗೆ ಸ್ಫೂರ್ತಿ ನೀಡಿದ್ದೇ ಕಾಂತಾರ... ರಿಷಬ್ ಹಾಡಿ ಹೊಗಳಿದ ದಿಗ್ಗಜ ನಟ
Team Udayavani, Aug 7, 2024, 9:00 AM IST
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ತಮಿಳು ದಿಗ್ಗಜ ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾದರು.
ಚಿಯಾನ್ ವಿಕ್ರಮ್ ಅವರು ತಮ್ಮ ಮುಂಬರುವ ಪಾ ರಂಜಿತ್ ನಿರ್ದೇಶನದ ಆ.15ರಂದು ತೆರೆಕಾಣುತ್ತಿರುವ ಚಿತ್ರ ‘ತಂಗಾಲನ್’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಭೇಟಿಯ ಚಿತ್ರಗಳನ್ನು ಹಂಚಿಕೊಂಡಿರುವ ರಿಷಬ್ ‘ಅಮೂಲ್ಯ ಸಮಯವನ್ನು ಕಳೆದಿದ್ದರಿಂದ ತುಂಬಾ ಸಂತೋಷವಾಯಿತು’ ಎಂದು ಕೆಲವು ಕ್ಯಾಂಡಿಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ”ನಟನಾಗುವ ನನ್ನ ಪಯಣದಲ್ಲಿ ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನನ್ನ ಆರಾಧ್ಯ ಮೂರ್ತಿ ಯನ್ನು ಭೇಟಿಯಾದ ಕ್ಷಣ ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ.ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ಎಂದು ತಂಗಲನ್ಗಾಗಿ ಶುಭ ಹಾರೈಸಿದ್ದಾರೆ.
ನಮಗೆ ಸ್ಫೂರ್ತಿ ನೀಡಿದ್ದು ಕಾಂತಾರ ವಿಕ್ರಮ್ ಮುಕ್ತ ಮಾತು
‘ತಂಗಾಲನ್’ ಕಂಟೆಂಟ್ ಅನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲು ನಮಗೆ ಕನ್ನಡದ ಕಾಂತಾರ ಸಿನಿಮಾ ಸ್ಫೂರ್ತಿ’ ಎಂದು ಚಿಯಾನ್ ವಿಕ್ರಮ್ ಹೇಳಿದರು
“ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗಾದರೂ ಸಿನಿಮಾವನ್ನು ತೆಗೆದುಕೊಂಡು ಹೋಗಬಹುದು ಎಂದು ತೋರಿಸಿದ್ದು ಕಾಂತಾರ. ಮಂಗಳೂರಿನ ಒಂದು ಕಥೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿದ್ದು ನಮಗೆ ಸ್ಫೂರ್ತಿಯಾಯಿತು. ನಾವು ನಮ್ಮ ಸಿನಿಮಾವನ್ನು ಚಿತ್ರೀಕರಣ ಮಾಡುವಾಗ “ಕಾಂತಾರ’ ಬಿಡುಗಡೆಯಾಯಿತು. ಈ ಚಿತ್ರವನ್ನು ನಾವು ಹೊರಜಗತ್ತಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದಾಗ “ಕಾಂತಾರ’ ದಾರಿ ತೋರಿಸಿತು’ ಎನ್ನುವ ಮೂಲಕ “ಕಾಂತಾರ’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.
“ತಂಗಲಾನ್’ ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಪಾತ್ರ ಹಾಗೂ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ತುಂಬಾ ಭಿನ್ನವಾದ ಚಿತ್ರವಂತೆ. ಈ ಕುರಿತು ಮಾತನಾಡುವ ಅವರು, “ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಿತ್ರ. ಪ್ರತಿ ದೃಶ್ಯಕ್ಕೂ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ರೊಮ್ಯಾಂಟಿಕ್ ದೃಶ್ಯಗಳು ಸಹ ಕಷ್ಟವಾಗಿತ್ತು’ ಎಂದರು.
In my journey in becoming an actor, #Vikram Sir has always been my inspiration.
After 24 long years of waiting, meeting my idol today makes me feel like the luckiest person on Earth.
Thank you for inspiring actors like me, and wishing you all the best for #Thangalaan.
Love… pic.twitter.com/CrmwnW4CEM— Rishab Shetty (@shetty_rishab) August 6, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
Sanju Movie; ಯತಿ ಕಣ್ಣಲ್ಲಿ ಸಂಜು ಕನಸು: ಹರೆಯದ ಪ್ರೀತಿಯ ಏರಿಳಿತದ ಪಯಣ
BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
World Tourism Day 2024: ಮಧ್ಯ ಕರ್ನಾಟಕದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೀರಾ?
Munirathna Case: ವಿಕಾಸಸೌಧದಲ್ಲೇ ಮುನಿರತ್ನ ರೇಪ್; ಸಂತ್ರಸ್ತೆ
Thirthahalli: ಸಿಬಿಐ ಬರಬಾರದು ಎಂದು ಬೇಲಿ ಹಾಕಿದ್ದು ಯಾಕೆ: ಆರಗ ಪ್ರಶ್ನೆ
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
High Court: ಜೈಲಿನಲ್ಲಿ ಆತಿಥ್ಯ; ಕೈದಿ ಕುಳ್ಳ ಸೀನ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.