Bengaluru: ಅಪಾರ್ಟ್ಮೆಂಟ್ಗೆ ಬಂದು ಆತ್ಮಹತ್ಯೆ ಮಾಡಿಕೊಂಡ ಅಪರಿಚಿತ ಮಹಿಳೆ!
Team Udayavani, Aug 7, 2024, 11:19 AM IST
ಬೆಂಗಳೂರು: ಅಪರಿಚಿತ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ವೊಂ ದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಮಾರು 45 ವರ್ಷದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಆಕೆಯ ಗುರುತು ಪತ್ತೆಗಾಗಿ ನಗರದ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಮಾರ್ಗೊಸಾ ರಸ್ತೆಯ 15ನೇ ಕ್ರಾಸ್ನಲ್ಲಿರುವ ಸಾಯಿ ಕೃಪಾ ಅಪಾರ್ಟ್ಮೆಂಟ್ನ 3 ಮತ್ತು 4ನೇ ಮಹಡಿ ಮಧ್ಯದ ಮೆಟ್ಟಿಲುಗಳ ಬಳಿ ಇರುವ ಕಬ್ಬಿಣ ಗ್ರೀಲ್ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಅದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಮಲ್ಲೇಶ್ವರ ಠಾಣೆ ಪೊಲೀಸರು, ಮಹಿಳೆಯ ಪೋಟೋ ಪಡೆದು ಕೊಂಡಿದ್ದಾರೆ.
ಆಕೆಯ ಬಗ್ಗೆ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಯಾವುದೇ ಮಾಹಿತಿ ಇಲ್ಲ. ಅಪಾರ್ಟ್ ಮೆಂಟ್ನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರು ವುದರಿಂದ ಆಕೆ ನೇರವಾಗಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮೃತ ಮಹಿಳೆ ಹಾದು ಬಂದ ಹಾದಿಯನ್ನು ಪರಿಶೀಲಿಸಿದಾಗ ಮಂಗಳವಾರ ಬೆಳಗ್ಗೆ 5.30ರ ಸುಮಾರಿಗೆ ಮೆಜೆಸ್ಟಿಕ್ನಿಂದ ಹರಿಶ್ಚಂದ್ರ ಘಾಟ್ವರೆಗೆ ಒಂದು ಬಸ್ ನಲ್ಲಿ ಬಂದಿದ್ದು, ನಂತರ ಇಲ್ಲಿಂದ ಮಾರ್ಗೊಸ್ ರಸ್ತೆಗೆ ಮತ್ತೂಂದು ಬಸ್ನಲ್ಲಿ ಬಂದಿದ್ದಾಳೆ. ನಂತರ ಕಾಡು ಮಲ್ಲೇಶ್ವರ ದೇವಾಲಯಕ್ಕೂ ಹೋಗಿದ್ದಾಳೆ. ಆ ನಂತರ 7.30ರ ಸುಮಾರಿಗೆ 15 ಕ್ರಾಸ್ನಲ್ಲಿರುವ ಅಪಾರ್ಟ್ಮೆಂಟ್ ಒಳಗೆ ಹಗ್ಗದ ಜತೆಗೆ ಬಂದ ಮಹಿಳೆ, ಮೆಟ್ಟಿಲುಗಳ ಬಳಿಯ ಕಬ್ಬಿಣ ಗ್ರೀಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದೇವಸ್ಥಾನಕ್ಕೆ ಹೋಗಿ ಬಂದು ಆತ್ಮಹತ್ಯೆ: ತನಿಖೆ ವೇಳೆ ಮೃತಳು, ಕಳೆದ ಮೂರು ದಿನಗಳಿಂದ ಅಪಾರ್ಟ್ ಮೆಂಟ್ ಸುತ್ತ-ಮುತ್ತ ಓಡಾಟ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ. ಭಾನುವಾರ ಕೂಡ ನವರಂಗ್ ಚಿತ್ರಮಂದಿರದಲ್ಲಿ ರಾಯನ್ ಸಿನಿಮಾ ನೋಡಿದ್ದು, ಬಳಿಕ ಮಲ್ಲೇಶ್ವರ 10ನೇ ಕ್ರಾಸ್ಗೆ ಬಂದಿದ್ದಾಳೆ. ಸೋಮವಾರ ಕೂಡ ಮಲ್ಲೇಶ್ವರ ಸಮೀಪದಲ್ಲಿ ಓಡಾಟ ನಡೆಸಿರುವುದು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
Bengaluru: ಜೈಲಲ್ಲಿ ವಿಶೇಷ ಆತಿಥ್ಯ: ನಾಗ, ವೇಲು 2 ದಿನ ಕಸ್ಟಡಿಗೆ
Anandpura: ಗಾಂಜಾ ತಡೆಗೆ ಪೊಲೀಸ್ ಇಲಾಖೆ ಮುಂದಾಗಬೇಕು: ಮೋಹನ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.