Koppala: ಮನೆಗೆ ಭೇಟಿ ನೀಡಿದ ಸಮಾಧಾನಕ್ಕಿಂತ ನಮಗೆ ನ್ಯಾಯ ಬೇಕು:ಮೃತ ಪಿಎಸ್ಐ ಪರಶುರಾಮ ಸಹೋದರ
Team Udayavani, Aug 7, 2024, 3:44 PM IST
ಕೊಪ್ಪಳ: ಗೃಹ ಸಚಿವರು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ. ವರದಿ ಬಂದ ಬಳಿಕ ಆರೋಪಿ ಯಾರೇ ಇರಲಿ ಅವರನ್ನು ಬಂಧಿಸುವೆವು ಎಂದಿದ್ದಾರೆ ಎಂದು ಸೋಮನಾಳದಲ್ಲಿ ಮೃತ ಪಿಎಸ್ಐ ಪರಶುರಾಮ ಅವರ ಸಹೋದರ ಹನುಮಂತಪ್ಪ ಹೇಳಿದ್ದಾರೆ.
ಸಿಓಡಿಯಿಂದ ನ್ಯಾಯ ಸಿಗಲಿಲ್ಲ ಎಂದರೆ ಮುಂದೆ ವಿಚಾರ ಮಾಡಿ ಎಂದಿದ್ದಾರೆ. ನಾವು ನಮ್ಮ ಕುಟುಂಬಕ್ಕೆ ನ್ಯಾಯ ಬೇಕು ಎಂದು ಒತ್ತಾಯ ಮಾಡಿದ್ದೇವೆ. ಸಿಓಡಿ ತನಿಖೆಯಿಂದ ನ್ಯಾಯ ಕೊಡಿಸುವೆವು ಎಂದಿದ್ದಾರೆ ಎಂದರು.
ನಮಗೆ ನ್ಯಾಯ ಮುಖ್ಯ. ನಮಗೆ 2 ಕೋಟಿ ಪರಿಹಾರ ಕೊಡಿ ಎಂದಿದ್ದೆವು. ನಮ್ಮ ಕುಟುಂಬ ಆರ್ಥಿಕ ಸ್ಥಿತಿ ಸರಿಯಿಲ್ಲ. ಅವರು 50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದ ಅವರು ನಮ್ಮ ಜೊತೆ ಮಾತನಾಡುವ ವೇಳೆ ಪರಿಹಾರದ ವಿಚಾರ ಮಾತನಾಡಿಲ್ಲ ಎಂದು ಹೇಳಿದರು.
ಮಾಧ್ಯಮದ ಮುಂದೆ 50 ಲಕ್ಷ ಪರಿಹಾರ ಕೊಡುವ ಹೇಳಿಕೆ ನೀಡಿದ್ದಾರೆ. ನಮಗೆ ಆರೋಪಿಗಳು ಬಂಧನ ಆಗಬೇಕು ಎಂದಿದ್ದೇವೆ. ಪರಿಹಾರದ ವಿಚಾರ ನಾವು ಗೃಹ ಸಚಿವರ ಜೊತೆಗೆ ಮಾತನಾಡುವೆವು. ಅವರು ಹುದ್ದೆ ಕೊಡುವ ಭರವಸೆ ನೀಡಿದ್ದಾರೆ. ಗೃಹ ಸಚಿವರು ನಮ್ಮ ಮನೆಗೆ ಭೇಟಿ ನೀಡಿದ ಸಮಾಧಾನಕ್ಕಿಂತ ನಮಗೆ ನ್ಯಾಯ ಬೇಕು ಎಂದಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.