Katpadi: ರಾ.ಹೆ. 66ರಲ್ಲಿ ಬಾಯ್ದೆರೆದ ಗುಂಡಿಗಳು

ಗುಂಡಿಗಳಿಗೆ ಬೇಕಿದೆ ಶಾಶ್ವತ ಮುಕ್ತಿ; ಸುರಕ್ಷಿತ ಹೆದ್ದಾರಿ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಜನಾಗ್ರಹ

Team Udayavani, Aug 7, 2024, 4:19 PM IST

Screenshot (138)

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಬಾಯ್ದೆರೆದ ಅಪಾಯಕಾರಿ ಗುಂಡಿಗಳು ಮುಕ್ತಿಗಾಗಿ ಕಾಯುತ್ತಿದೆ. ಕಟಪಾಡಿಯಿಂದ ಮಂಗಳೂರು ಭಾಗಕ್ಕೆ ತೆರಳುವ ರಾ.ಹೆ.66ರ ಪೂರ್ವ ಪಾರ್ಶ್ವದ ಹೆದ್ದಾರಿ ಮೇಲೆಯೇ ಮಳೆಯ ನೀರು ಹರಿದು ಅಪಾಯಕಾರಿ ಹೊಂಡ ಗುಂಡಿಗಳು ಪ್ರತ್ಯಕ್ಷವಾಗಿದೆ.

ಕಟಪಾಡಿ ಜಂಕ್ಷನ್‌ನಿಂದ ವಾಹನಗಳು ಈ ಭಾಗದಲ್ಲಿನ ಇಳಿಜಾರು ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ಸಂದರ್ಭ ಈ ಅಪಾಯಕಾರಿ ಗುಂಡಿಗಳನ್ನು ಗಮನಿಸದೆ ಏಕಾಏಕಿಯಾಗಿ ಬ್ರೇಕ್‌ ಹಾಕುವಾಗ ಅಥವಾ ಹೊಂಡವನ್ನು ತಪ್ಪಿಸಲು ಎಡಕ್ಕೆ-ಬಲಕ್ಕೆ ವಾಹನವನ್ನು ಚಲಾಯಿಸುವಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಹೆದ್ದಾರಿ ತಿರುವು ಹಾಗೂ ಸರ್ವೀಸ್‌ ರಸ್ತೆಯೂ ಸೇರುವ ಜಂಕ್ಷನ್‌ ಪ್ರದೇಶವೂ ಆಗಿದೆ. ಹಾಗಾಗಿ ಈ ಭಾಗದಲ್ಲಿ ರಾ.ಹೆ. ಸಮರ್ಪಕ ನಿರ್ವಹಣೆಯ ಆವಶ್ಯಕತೆ ಇದೆ.

ಮಳೆ ಬಂದಾಗ ನೀರು ನಿಂತು, ಕತ್ತಲಾವರಿಸುತ್ತಿದ್ದಂತೆ ಹೊಂಡಗಳು ಗಮನಕ್ಕೆ ಬಾರದೆ ಕೆಲವು ದ್ವಿಚಕ್ರ ಮತ್ತು ರಿಕ್ಷಾ ಸಹಿತ ಕೆಲ ಲಘು ವಾಹನಗಳ ಬಿಡಿಭಾಗಗಳು ಕಳಚಿಕೊಂಡಿದ್ದು ಇದೆ ಎಂದು ವಾಹನ ಸವಾರರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.

ಶಾಶ್ವತ ಪರಿಹಾರ ಕಲ್ಪಿಸಿ

ಬಹಳಷ್ಟು ಅಪಾಯಕಾರಿ ಗುಂಡಿಗಳು ಕಂಡು ಬರುತ್ತಿದೆ. ವಾಹನ ಚಲಾಯಿಸುವುದೇ ಸವಾಲಾಗಿದೆ. ಸ್ವಲ್ಪ ಎಡವಟ್ಟು ಆದಲ್ಲಿ ಅಪಘಾತ ಗ್ಯಾರಂಟಿ. ಕೂಡಲೇ ರಾ.ಹೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಾಹನ ಸವಾರರ ಅಮೂಲ್ಯ ಜೀವಗಳ ಬಗ್ಗೆ ಹೆಚ್ಚಿನ ಸುರಕ್ಷತೆಗೆ ಆದ್ಯತೆಯನ್ನು ನೀಡಲಿ. ಹೆದ್ದಾರಿ ಗುಂಡಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಶೋಕ್‌ ರಾವ್‌ ಹೇಳಿದರು.

ಸವಾರರಿಗೆ ಸಂಕಷ್ಟ

ಬೃಹತ್‌ ಗಾತ್ರದ ಗುಂಡಿಗಳು ಈ ಭಾಗದಲ್ಲಿ ವಾಹನ ಸವಾರರ ನಿದ್ದೆಗೆಡಿಸಿದ್ದು, ಸುರಕ್ಷಿತ ಸಂಚಾರದ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದೊಡ್ಡ ಮಟ್ಟದ ಅಪಘಾತಗಳು ಸಂಭವಿಸುವ ಮುನ್ನವೇ ಎಚ್ಚೆತ್ತು ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಅಪಘಾತಕ್ಕೂ ಕಾರಣ

ಇಲ್ಲಿ ವಾಹನ ಸಂಚಾರವೇ ಸವಾಲಾಗಿದೆ. ಮಳೆ ಸುರಿದಾಗಲಂತೂ ಬಹಳಷ್ಟು ಅಪಾಯಕಾರಿ. ಬೈಕ್‌ ಸಹಿತ ಇತರೇ ವಾಹನದವರ ಸಂಚಾರದ ಸರ್ಕಸ್‌ ಅಪಘಾತಕ್ಕೂ ಕಾರಣವಾಗಲಿದೆ. ತೀವ್ರ ತರಹದ ಅಪಘಾತ ಸಂಭವಿಸುವ ಮುನ್ನವೇ ಇಲಾಖೆಯು ಹೆದ್ದಾರಿ ನಿರ್ವಹಣೆಯನ್ನು ಕೈಗೊಂಡು ಈ ಪ್ರದೇಶದಲ್ಲಿ ಆದ್ಯತೆಯ ಮೇರೆಗೆ ನಿರ್ವಹಣೆಯನ್ನು ನಡೆಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಗಮನ ಹರಿಸಬೇಕಿದೆ.

-ಗೀತಾಂಜಲಿ ಎಂ. ಸುವರ್ಣ, ಜಿ.ಪಂ. ಮಾಜಿ ಸದಸ್ಯರು, ಕಟಪಾಡಿ.

ಪರಿಹಾರ ಕ್ರಮ

ಹೆದ್ದಾರಿ ಪಾಟ್‌ಹೋಲ್ಸ್‌ಗಳ ನಿರ್ವಹಣೆಗೆ ಮೂರು ತಂಡಗಳು ಕೆಲಸ ನಿರ್ವಹಿಸುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ನಿರ್ವಹಣೆ ನಡೆಯುತ್ತಿದೆ. ಕಟಪಾಡಿ ಪ್ರದೇಶದ ಪಾಟ್‌ ಹೋಲ್ಸ್‌ಗಳನ್ನು ನಿರ್ವಹಣೆ ಮಾಡಲಾಗಿತ್ತು. ವಿಪರೀತ ಮಳೆಯ ಕಾರಣದಿಂದ ಮತ್ತೆ ಪಾಟ್‌ ಹೋಲ್ಸ್‌ ಕಾಣುತ್ತಿದೆ. ಪರಿಹಾರವಾಗಿ ಪೇವರ್‌ ಬ್ಲಾಕ್ಸ್‌ ಅಳವಡಿಸುವ ಮೂಲಕ ಅಥವಾ ಹೆಚ್ಚು ಬಾಳಿಕೆ ಬರುವ ವಿಧಾನವನ್ನು ಅನುಸರಿಸಿ ಆದ್ಯತೆಯ ಮೇರೆಗೆ ಹೆಚ್ಚಿನ ಸುರಕ್ಷತೆಯುಳ್ಳ ನಿರ್ವಹಣೆಯನ್ನು ಮಾಡಲಾಗುತ್ತದೆ. ಒಂದೆರೆಡು ದಿನಗಳೊಳಗಾಗಿ ಈ ಭಾಗದ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸಲಾಗುತ್ತದೆ.

– ತಿಮ್ಮಯ್ಯ, ಟೋಲ್‌ ಪ್ರಬಂಧಕರು, ಹೈವೇ ಕನ್‌ಸ್ಟ್ರಕ್ಷನ್ಸ್‌

– ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.