Tollywood: ʼಆವೇಶಮ್ʼ ತೆಲುಗು ರಿಮೇಕ್ನಲ್ಲಿ ನಟಿಸಲ್ಲ ಎಂದ ಬಾಲಯ್ಯ; ಕಾರಣವೇನು?
Team Udayavani, Aug 7, 2024, 7:01 PM IST
ಹೈದರಾಬಾದ್: ಫಾಹದ್ ಫಾಸಿಲ್ ನಟಿಸಿದ ಮಾಲಿವುಡ್(Mollywood) ನ ʼಆವೇಶಮ್ʼ(Aavesham) ತೆಲುಗಿಗೆ ರಿಮೇಕ್ ಆಗಲಿದೆ ಎನ್ನುವ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ.
ಮಾಲಿವುಡ್ ಸ್ಟಾರ್ ಫಾಫಾ ʼಆವೇಶಮ್ʼ ನಲ್ಲಿ ಲೋಕಲ್ ಡಾನ್ ʼರಂಗನ್ʼ ಎನ್ನುವ ಪಾತ್ರದಲ್ಲಿ ಮಿಂಚಿದ್ದರು. ಸಣ್ಣ ಬಜೆಟ್ ನಲ್ಲಿ ಬಂದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.
ಕಾಮಿಡಿ ಕಥಾಹಂದರದ ʼಆವೇಶಮ್ʼ ತೆಲುಗಿಗೆ ರಿಮೇಕ್ ಆಗಲಿದೆ. ಟಾಲಿವುಡ್ ರಿಮೇಕ್ ನಲ್ಲಿ ನಟ ಬಾಲಯ್ಯ (Nandamuri Balakrishna) ಅವರು ʼರಂಗನ್ʼ ಅಂದರೆ ಫಾಹದ್ ಫಾಸಿಲ್ ಅವರು ಮಾಡಿದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.
ʼಆವೇಶಂʼ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಮೈತ್ರಿ ಮೂವಿ ಮೇಕರ್ಸ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಓಕೆಯಾದರೆ ʼಆವೇಶಮ್ʼ ತೆಲುಗಿನಲ್ಲಿ ಬರಲಿದೆ ಎನ್ನಲಾಗಿದೆ.
ಇದೀಗ ಈ ಬಗ್ಗೆ ನಟ ಬಾಲಯ್ಯ ಅವರಿಂದ ಸ್ಪಷ್ಟನೆ ಸಿಕ್ಕಿದೆ. ಬಾಲಕೃಷ್ಣ ಅವರು ʼಆವೇಶಂʼ ರಿಮೇಕ್ನಲ್ಲಿ ಪ್ರಮುಖ ಪಾತ್ರವನ್ನು ಮಾಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ನಾಯಕ ಅನ್ಯಾಯದ ವಿರುದ್ಧ ಹೋರಾಟ ಮಾಡಿ, ಇತರರಿಗೆ ಸ್ಪೂರ್ತಿಯಾಗವಾಗಬೇಕು. ತಾನೇ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಬಾರದು ಎಂದು ಅವರು ಹೇಳಿರುವುದಾಗಿ ʼಡೆಕ್ಕನ್ ಕ್ರಾನಿಕಲ್ʼ ವರದಿ ತಿಳಿಸಿದೆ.
ಬಾಲಯ್ಯ ರಿಮೇಕ್ ಸಿನಿಮಾವನ್ನು ರಿಜೆಕ್ಟ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ನಟ ದಳಪತಿ ವಿಜಯ್ ಮತ್ತು ಮೋಹನ್ ಲಾಲ್ ಅಭಿನಯದ ʼಜಿಲ್ಲಾʼ (Jilla) ಚಿತ್ರದ ರಿಮೇಕ್ನಲ್ಲಿ ನಟಿಸಲು ಅವರು ನಿರಾಕರಿಸಿದ್ದರು.
ಜೀತು ಮಾಧವನ್ (Jithu Madhavan) ನಿರ್ದೇಶನದ ‘ಆವೇಶಮ್ʼ ನಲ್ಲಿ ಸಜಿನ್ ಗೋಪು, ಮಿಥುನ್ ಜೈ ಶಂಕರ್, ಹಿಪ್ಜ್ಸ್ಟರ್, ರೋಷನ್ ಶಾನವಾಜ್, ಮಿಧುಟ್ಟಿ ಮುಂತಾದವರು ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್ ಪತ್ನಿ ರಾದ್ಧಾಂತ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್ ಟಿಆರ್ ಸಿನಿಮಾ ವೀಕ್ಷಿಸಿದ ರೋಗಿ.!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.