Paris ನಿಮ್ಮನ್ನೇ ನಂಬಿದ್ದೇವೆ ನೀರಜ್‌! ಟೋಕಿಯೊ ಗೋಲ್ಡನ್‌ ಹೀರೋ ನೀರಜ್‌ ಮೇಲೆ ಭಾರೀ ಭರವಸೆ

ಇಂದು ಮಧ್ಯರಾತ್ರಿ ಜಾವೆಲಿನ್‌ ಫೈನಲ್‌

Team Udayavani, Aug 8, 2024, 7:25 AM IST

Paris ನಿಮ್ಮನ್ನೇ ನಂಬಿದ್ದೇವೆ ನೀರಜ್‌! ಟೋಕಿಯೊ ಗೋಲ್ಡನ್‌ ಹೀರೋ ನೀರಜ್‌ ಮೇಲೆ ಭಾರೀ ಭರವಸೆ

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದರ ಮೇಲೊಂದರಂತೆ ಆಘಾತ, ಹಿನ್ನಡೆ ಆಗುತ್ತಲೇ ಇದೆ. ವಿನೇಶ್‌ ಫೋಗಾಟ್‌ ಅನರ್ಹತೆ, ಹಾಕಿ ವೈಫ‌ಲ್ಯ, ಪದಕದ ಸಮೀಪ ಬಂದು ಎಡವಿದ ನಾಲ್ಕಾರು ನಿದರ್ಶನಗಳು, 3 ಕಂಚಿನಾಚೆ ದಾಟದ ಪದಕಗಳ ಸಂಖ್ಯೆ, ಪದಕ ಪಟ್ಟಿಯಲ್ಲಿ 60ರ ಆಚೆಯ ಸ್ಥಾನ… ಇಂಥ ಸಂಕಟಕರ ಸನ್ನಿವೇಶದಲ್ಲಿ ನೀರಜ್‌ ಚೋಪ್ರಾ ಒಬ್ಬರೇ ದೇಶದ ಆಶಾಕಿರಣ ಹಾಗೂ ದೊಡ್ಡ ಪದಕದ ಭರವಸೆ ಆಗಿ ಉಳಿದಿದ್ದಾರೆ.

ಇವರನ್ನೊಳಗೊಂಡ ಜಾವೆಲಿನ್‌ ಫೈನಲ್‌ ಗುರುವಾರ ನಡುರಾತ್ರಿ ನಡೆಯಲಿದೆ. “ನಿಮ್ಮನ್ನೇ ನಂಬಿದ್ದೇವೆ ನೀರಜ್‌’ ಎಂಬುದು ಭಾರತದ ಕ್ರೀಡಾಪ್ರೇಮಿಗಳ ಪ್ರಾರ್ಥನೆ.

ನೀರಜ್‌ ಚೋಪ್ರಾ ಟೋಕಿಯೊದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿ ಬುಧವಾರಕ್ಕೆ (ಆ. 7) ಭರ್ತಿ 3 ವರ್ಷ ತುಂಬಿತು. ಪ್ಯಾರಿಸ್‌ನಲ್ಲಿ ಆ. 8ರಂದು ಚಿನ್ನ ಕ್ಕಾಗಿ ಸ್ಪರ್ಧಿಸಲಿದ್ದಾರೆ. ಅವರ ಬಂಗಾರದ ನಂಟು ಮುಂದು ವರಿ ಯುವುದನ್ನು ಕಾಣಲು ದೇಶವೇ ತುದಿಗಾಲಲ್ಲಿ ನಿಂತಿದೆ.

ಮಂಗಳವಾರದ ಅರ್ಹತಾ ಸುತ್ತಿನಲ್ಲಿ ನೀರಜ್‌ ಚೋಪ್ರಾ ಸಾಧನೆ ಕಂಡಾಗ ಚಿನ್ನದ ಪದಕದ ಭರವಸೆ ಮೂಡಿದೆ. ಚಿನ್ನವಲ್ಲದೇ ಹೋದರೂ ಮೂರರಲ್ಲೊಂದು ಪದಕ ಗೆದ್ದೇ ಗೆಲ್ಲುತ್ತಾರೆಂಬ ನಂಬಿಕೆ ಎಲ್ಲರಲ್ಲೂ ಮನೆಮಾಡಿದೆ. ಆದರೆ ಇದು ಬಂಗಾರವೇ ಆಗಬೇಕೆಂಬುದು ದೇಶವಾಸಿಗಳ ಹಾರೈಕೆ.

ಟೋಕಿಯೊಗಿಂತ ಕಠಿನ
ಟೋಕಿಯೊ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿಯ ಜಾವೆಲಿನ್‌ ಸ್ಪರ್ಧೆ ಹೆಚ್ಚು ಕಠಿನ. ಇಲ್ಲಿ 9 ಮಂದಿ 84 ಮೀ. ಗಡಿ ದಾಟಿ ನೇರವಾಗಿ ಫೈನಲ್‌ಗೆ ಆಯ್ಕೆಯಾಗಿರುವುದೇ ಇದಕ್ಕೆ ಕಾರಣ. ಇಲ್ಲಿನ 9 ಎಸೆತಗಾರರಲ್ಲಿ ಐವರು ಮೊದಲ ಪ್ರಯತ್ನದಲ್ಲೇ ಫೈನಲ್‌ ಅರ್ಹತೆ ಸಂಪಾದಿಸಿದ್ದಾರೆ. ನೀರಜ್‌ ಕೂಡ ಇವರಲ್ಲೊಬ್ಬರು. ಟೋಕಿಯೊದಲ್ಲಿ ನೇರ ಫೈನಲ್‌ ಅರ್ಹತೆ ಸಂಪಾದಿಸಿದವರ ಸಂಖ್ಯೆ 6ಕ್ಕೆ ಸೀಮಿತಗೊಂಡಿತ್ತು.

ಕಳೆದ 8 ವರ್ಷಗಳಿಂದಲೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಅಮೋಘ ಸಾಧನೆ ದಾಖಲಿಸುತ್ತಲೇ ಬಂದಿರುವ ನೀರಜ್‌ ಚೋಪ್ರಾಗೆ ಈ ಕಠಿನ ಸವಾಲಿನ ಅರಿವಿಲ್ಲದೇ ಇಲ್ಲ. “ಫೈನಲ್‌ನಲ್ಲಿ ಎಲ್ಲರೂ ವಿಭಿನ್ನ ಸನ್ನಿವೇಶ ಎದುರಿಸುವ ಜತೆಗೆ ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇಲ್ಲಿ ಉತ್ತಮ ಪೈಪೋಟಿ ಕಂಡುಬರಲಿದೆ. ನೇರ ಅರ್ಹತೆ ಸಂಪಾದಿಸಿದವರ ತಯಾರಿ ಅತ್ಯುತ್ತಮವಾಗಿರುತ್ತದೆ’ ಎಂಬುದಾಗಿ ನೀರಜ್‌ ಅರ್ಹತಾ ಸುತ್ತಿನ ಬಳಿಕ ಹೇಳಿದ್ದರು.

ನೀರಜ್‌ ಚೋಪ್ರಾ ಚಿನ್ನ ಉಳಿಸಿಕೊಂಡರೆ ಒಲಿಂಪಿಕ್ಸ್‌ನಲ್ಲಿ ನೂತನ ಇತಿಹಾಸ ಬರೆದ ಭಾರತೀಯ ಕ್ರೀಡಾಪಟುವಾಗಿ ಮೂಡಿಬರಲಿದ್ದಾರೆ. ಎರಡು ಚಿನ್ನ ಗೆದ್ದ ದೇಶದ ಏಕೈಕ ಆ್ಯತ್ಲೀಟ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈವರೆಗೆ ಪಿ.ವಿ. ಸಿಂಧು (1 ಬೆಳ್ಳಿ, 1 ಕಂಚು), ಕುಸ್ತಿಪಟು ಸುಶೀಲ್‌ ಕುಮಾರ್‌ (1 ಬೆಳ್ಳಿ, 1 ಕಂಚು) ಮತ್ತು ಮನು ಭಾಕರ್‌ (2 ಕಂಚು) ಮಾತ್ರ ಅವಳಿ ಪದಕ ಜಯಿಸಿದ್ದಾರೆ.

ಅರ್ಹತಾ ಸುತ್ತಿನ ಹೀರೋ
ಅರ್ಹತಾ ಸುತ್ತಿನಲ್ಲಿ ನೀರಜ್‌ ಚೋಪ್ರಾ ಅವರದು ಅಮೋಘ ಪರಾಕ್ರಮ. ಒಂದೇ ಎಸೆತಕ್ಕೆ 89.34 ಮೀ. ಸಾಧನೆಗೈದು ಮೊದಲ ಸ್ಥಾನದೊಂದಿಗೆ “ಮಿಲಿಯನ್ಸ್‌ ಹೋಪ್ಸ್‌’ ಮೂಡಿಸಿದ ಹೆಗ್ಗಳಿಕೆ ಇವರದು. ಇದು ಅವರ ಜಾವೆಲಿನ್‌ ಬಾಳ್ವೆಯ 2ನೇ ಶ್ರೇಷ್ಠ ನಿರ್ವಹಣೆಯಷ್ಟೇ ಅಲ್ಲ, ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲೇ 2ನೇ ಅತ್ಯುತ್ತಮ ಸಾಧನೆಯಾಗಿದೆ. 2000ದ ಸಿಡ್ನಿ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಜಾನ್‌ ಝೆಲೆಜ್ನಿ 89.39 ಮೀ. ಎಸೆದದ್ದು ದಾಖಲೆ. ಫೈನಲ್‌ನಲ್ಲಿ ಚೋಪ್ರಾ 90 ಮೀ. ಗಡಿ ತಲುಪಿಯಾರೇ ಎಂಬುದೊಂದು ಕುತೂಹಲ.

ಗ್ರೆನೆಡಾದ 2 ಬಾರಿಯ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್‌ ಪೀಟರ್ (ಗರಿಷ್ಠ: 93.07 ಮೀ.), ಜರ್ಮನಿಯ ಜೂಲಿಯನ್‌ ವೆಬರ್‌, ಪಾಕಿಸ್ಥಾನದ ಅರ್ಷದ್‌ ನದೀಮ್‌, ಜೆಕ್‌ ಗಣರಾಜ್ಯದ ಜಾಕುಬ್‌ ವಾದೆÉಶ್‌ ಅವರೆಲ್ಲ ಫೈನಲ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.