Salman Khurshid: ಬಾಂಗ್ಲಾದಲ್ಲಾಗಿದ್ದು ಭಾರತದಲ್ಲೂ ಆಗಬಹುದು… ಸಲ್ಮಾನ್ ಖುರ್ಷಿದ್
Team Udayavani, Aug 8, 2024, 8:20 AM IST
ನವದೆಹಲಿ: ಬಾಂಗ್ಲಾದೇಶದಲ್ಲಾಗಿದ್ದು ಭಾರತದಲ್ಲೂ ಆಗಬಹುದು, ಮೇಲ್ನೋಟಕ್ಕೆ ಎಲ್ಲವೂ ಸಹಜವಾ ಗಿಯೂ ಇದ್ದರೂ, ಒಳಗೆ ಬೇರೆಯೇ ಇದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಗೆ ಬಿಜೆಪಿಯ ಆಕ್ರೋಶಕ್ಕೆ ವ್ಯಕ್ತಪಡಿಸಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿ ಕಾಣುತ್ತಿರಬಹುದು, ಇಲ್ಲೂ ಕೂಡ ಎಲ್ಲವೂ ಸಹಜವಾಗಿರಬಹುದು, ನಾವು ಜಯವನ್ನು ಸಂಭ್ರಮಿಸುತ್ತಿರಬಹುದು, 2024ರ ವಿಜಯ ಸಣ್ಣ ಅಂತರದ್ದಾಗಿದೆ. ಇನ್ನೂ ಮಾಡಲು ಬೇಕಾದಷ್ಟಿದೆ. ಸತ್ಯ ಒಳಪದರಲ್ಲಿದೆ. ಬಾಂಗ್ಲಾದೇಶದಲ್ಲೇನಾಗಿದೆಯೋ ಇಲ್ಲೂ ಆಗಬಹುದು’ ಎಂದು ಖುರ್ಷಿದ್ ಹೇಳಿದ್ದಾರೆ.
ಅವರ ಹೇಳಿಕೆ ಬಗ್ಗೆ ಬಿಜೆಪಿ ನಾಯಕರಾದ ಶೆಹಜಾದ್ ಪೂನವಾಲ, ಅನುರಾಗ್ ಠಾಕೂರ್ ಸಿಡಿದೆದ್ದಿದ್ದಾರೆ. “ಮೋದಿಯನ್ನು ದ್ವೇಷಿಸಲು ಹೋಗಿ ಅವರು ಭಾರತವನ್ನೇ ದ್ವೇಷಿಸುತ್ತಿದ್ದಾರೆ. ಸಲ್ಮಾನ್ ಖುರ್ಷಿದ್/ಕಾಂಗ್ರೆಸ್ ಬಾಂಗ್ಲಾ ದೇಶದಲ್ಲಾದ ಹಿಂಸಾಚಾರ ಭಾರತದಲ್ಲೂ ಆಗಲಿ ಎಂದು ಪ್ರಚೋದನೆ ನೀಡುತ್ತಿದ್ದಾರಾ? ಪ್ರಾರ್ಥನೆ ಮಾಡುತ್ತಿದ್ದಾರಾ? ಎಂದು ಪೂನಾವಾಲಾ ಪ್ರಶ್ನಿಸಿದ್ದರೆ, ಸಂಸದ ಅನುರಾಗ್ ಠಾಕೂರ್ ಖುರ್ಷೀದ್ ಒಬ್ಬ ಅರಾಜಕತಾವಾದಿ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Paris ನಿಮ್ಮನ್ನೇ ನಂಬಿದ್ದೇವೆ ನೀರಜ್! ಟೋಕಿಯೊ ಗೋಲ್ಡನ್ ಹೀರೋ ನೀರಜ್ ಮೇಲೆ ಭಾರೀ ಭರವಸೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.