Naga Panchami 2024;ನಾಗರ ಪಂಚಮಿ ಸ್ವಚ್ಛ ಪಂಚಮಿ-ದಿಟ ನಾಗನಿಗೆ ನಮೋ…

ಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣನನ್ನು ಅನಂತಪದ್ಮನಾಭ ಎಂದು ಕರೆಯುವುದಿದೆ.

Team Udayavani, Aug 8, 2024, 10:06 AM IST

Naga Panchami 2024;ನಾಗರ ಪಂಚಮಿ ಸ್ವಚ್ಛ ಪಂಚಮಿ-ದಿಟ ನಾಗನಿಗೆ ನಮೋ…

ಮಳೆಗಾಲದಲ್ಲಿ ಸಸ್ಯಶ್ಯಾಮಲೆ ಮೈದುಂಬಿಕೊಳ್ಳುವ ಕಾಲ. ಪ್ರಕೃತಿ ಫ‌ಲ ಕೊಡಲು ಗರ್ಭಾಂಕುರವಾಗುವ ಮಾಸ ಶ್ರಾವಣ. ಈ ಸಮೃದ್ಧಿಯ ಸಂಭ್ರಮಗಳು ಈಗ ಕಣ್ಮರೆಯಾಗಿ ಮಳೆಗಾಲವೆಂದರೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದರೂ ಅನಾಹುತಗಳ ಕಾಲ ಎಂದಾಗುತ್ತಿದೆ. ಏಕಿರಬಹುದು? ಶ್ರಾವಣ ಮಾಸದಿಂದ ಹಬ್ಬಹರಿದಿನಗಳ ಸರಣಿ ಆರಂಭಗೊಳ್ಳುತ್ತದೆ. ನಾಗನಿಗೆ ವಾರ್ಷಿಕ ಪೂಜೆ ಸಲ್ಲಿಸುವ ಮೂಲಕ ಹಬ್ಬಗಳ ಸರಣಿ ಆರಂಭವಾಗುವುದು ವಿಶೇಷ. ನಾಗನಿಗೆ ಪೂಜೆ ಅಂದ ಮೇಲೆ ಶೇಷನಿಗೋ, ವಾಸುಕಿಗೋ ಪೂಜೆ ಎಂದರ್ಥ.

ಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣನನ್ನು ಅನಂತಪದ್ಮನಾಭ ಎಂದು ಕರೆಯುವುದಿದೆ. ಶಿವನ ಕೊರಳಲ್ಲಿ ರಾರಾಜಿಸುತ್ತಿರುವುದು ಸರ್ಪ. ಪಾಂಡವರ ಮೊಮ್ಮಗ ಪರೀಕ್ಷಿತರಾಜ ಅಹಂಕಾರವನ್ನು ತೋರಿದಾಗ ಆತನನ್ನು ಕಚ್ಚಿದವ ತಕ್ಷಕ. ಈತ ಒಂದು ಜಾತಿಯ ಸರ್ಪ. ಅಹಂಕಾರ ನಿರ್ಮೂಲನ ತಕ್ಷಕನ ಸಂದೇಶ. ಸಮುದ್ರಮಥನ ಕಾಲದಲ್ಲಿ ಮಂದರ ಪರ್ವತವನ್ನು ಕಡೆಯುವಾಗ ಹಗ್ಗವಾಗಿ ಬಳಕೆಯಾದವ ವಾಸುಕಿ.

ನಳನಿಗೆ ನೆರವಾಗಲು ಕಚ್ಚಿದವ ಕಾರ್ಕೋಟಕ. ಕಚ್ಚಿದರೂ ನಳನಿಗೆ ಅನುಕೂಲವೇ ಆಯಿತು. ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಎಲ್ಲ ಜೀವಿಗಳೂ ಅಗತ್ಯ. ಈಗ ನಾಗನಿಗೆ ಪೂಜೆ ವೈಭವದಿಂದ ಸಲ್ಲುತ್ತಿದ್ದರೂ ಅಪ್ಪಟ ನಾಗನೇ ನಿಸರ್ಗದಲ್ಲಿ
ಸ್ವಚ್ಚಂ ದವಾಗಿ ಬದುಕುವುದು ಕಷ್ಟವಾಗಿದೆ.

ಕಲ್ಲಿನಲ್ಲಿ ನಾಗನ ಪ್ರತೀಕ ಒಂದಾದರೆ ಹಾವಿನಲ್ಲಿ ನಾಗನ ಪ್ರತೀಕ ಇನ್ನೊಂದು ಬಗೆ. ನಾಗರ ಹಾವು ನಿಜನಾಗನಾದರೆ, ನಾಗನ ಕಲ್ಲು ನಿಜನಾಗನ ಪ್ರಾತಿನಿಧಿಕ ಸಂಕೇತವೆನ್ನಬಹುದು. ನಮಗೆ ವಾಸ್ತವಕ್ಕಿಂತಲೂ ಕಲ್ಪನೆ ಹೆಚ್ಚು ಖುಷಿ ಕೊಡುವುದಿದೆ. ಹೀಗಾಗಿಯೋ ಏನೋ ಮನುಷ್ಯನ ಆತ್ಮವಂಚನೆ ವರ್ತನೆ ಕಂಡು ಬಸವಣ್ಣನವರು “ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು| ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ|| ಉಂಬ ಜಂಗಮ ಬಂದರೆ ನಡೆ ಎಂಬರು| ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ|| ಎಂದು ಹೇಳಿರಬಹುದು. ನಾವು ಹಾಗೆ ಮಾಡಿದ್ದರಿಂದ ಬಸವಣ್ಣನವರು ಟೀಕಿಸಿದರು. ಕಾಲ ಉರುಳಿದೆ, ನಾವು ಮತ್ತಷ್ಟು ಪಾಲಿಶ್ಡ್ ಆಗಿದ್ದೇವೆ.

ನಾಗನ ಕಟ್ಟೆ ಅಂದರೆ ಕಾಂಕ್ರೀಟ್‌ ಕಟ್ಟಡವೆಂಬರಯ್ಯ |
ದಿಟ ನಾಗನು ಬದುಕುವುದೋ ಎಂದರಿಯರಯ್ಯ||
ಎಂಬ ಸ್ಥಿತಿಗೆ ತಲುಪಿಯಾಗಿದೆ.
ನಾಗನ ಕಟ್ಟೆ ಅಂದರೆ ಗಿಡಮರಗಳಿರಲಯ್ಯ|
ದಿಟ ನಾಗನ ಸಂತತಿ ಬಂದು ಅಲ್ಲಿರಲಯ್ಯ||
ಎಂಬ ಸ್ಥಿತಿಗೆ ತಲುಪಬೇಕಾಗಿದೆ. ನಾಗನಲ್ಲಿ ಒಂದು ವೇಳೆ ವಿಷವನ್ನು ದೇವರು ಇಡದೆ ಇದ್ದಿದ್ದರೆ ನಾಗ ಸಂತತಿ ಇಷ್ಟು ಕಾಲ ಬದುಕಿ ಉಳಿಯುತ್ತಿತ್ತೋ? ಇಲ್ಲವೋ? ಹೇಳಲಾಗದು. ಈ ವಿಷವೇ ಹಲವು  ಬಗೆಗಳಲ್ಲಿ ಔಷಧವಾಗಿ ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ. ಬಸವಣ್ಣನವರು ದಿಟ ನಾಗನ ಕಂಡರೆ ಎಂದಿದ್ದಾರೆ. ಕೆಲವು ವರ್ಷಗಳಲ್ಲಿ ಇದು ಕಂಡು
ಬರುವುದು ಕಷ್ಟಸಾಧ್ಯವೆ? ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ‌ ಮಾತ್ರ ನಾಗ ಸಿಗಬಹುದು.

ಪ್ರಾಣಿಶಾಸ್ತ್ರಜ್ಞರ ಪ್ರಕಾರ ಇರುವೆಯಂತಹ ಸಣ್ಣ ವರ್ಗವೂ ಇಡೀ ವಿಶ್ವವನ್ನು ಕಾಪಾಡಲು ಅತ್ಯಗತ್ಯ, ಕೇವಲ ಇರುವೆ ಅಂದಲ್ಲ,
ಎಲ್ಲವೂ… ಪ್ರಾಕೃತಿಕ (ವಿ)ಕೋಪ ಹೇಗೆ, ಯಾವ ದಿಕ್ಕಿನಿಂದ ಅಪ್ಪಳಿಸುತ್ತದೆ ಎಂದು ಹೇಳಲಾಗದು. ಈಗಲೇ ನಾಗರಪಂಚಮಿಯಂದು ದಿಟ ನಾಗನ ಉಳಿವಿಗಾಗಿ ಸಂಕಲ್ಪಿಸೋಣ!.

*ಸ್ವಾಮಿ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.