Mangaluru: ಅಪಾಯಕಾರಿ ಸ್ಥಿತಿಯಲ್ಲಿ ಜಪ್ಪು ಕಡೆಕಾರ್ ಸೇತುವೆ
ಸೇತುವೆಯ ತಳಭಾಗಕ್ಕೆ ಪೈಪ್ ಅಳವಡಿಸಿರುವುದರಿಂದ ಸಮಸ್ಯೆ
Team Udayavani, Aug 8, 2024, 2:39 PM IST
ಮಹಾನಗರ: ನಗರದ ಜಪ್ಪಿನಮೊಗರು ಕಡೆಯಿಂದ ಜೆಪ್ಪು ಕಡೆಕಾರ್ ಭಾಗದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಲವು ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು ಸ್ಥಳೀಯರಿಗೆ ಸಮಸ್ಯೆ ತಂದೊಡ್ಡಿದೆ.
2000ನೇ ಇಸವಿಯ ಸುಮಾರಿಗೆ ಈ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯ ತಳಭಾಗಕ್ಕೆ ಪೈಪ್ ಅಳವಡಿ ಸಿರುವುದರಿಂದ ನೀರು ಸರಾಗವಾಗಿ ಹರಿಯು ತ್ತಿರಲಿಲ್ಲ, ಹಾಗಾಗಿ ಸ್ಥಳೀಯರು ಆಗ ಇದಕ್ಕೆ ಪ್ರತಿಭಟಿಸಿದ್ದರು. ಇಲ್ಲಿ ಪ್ರತಿ ಮಳೆಗಾಲದಲ್ಲೂ ಕಸಕಡ್ಡಿ ಮರದ ಗೆಲ್ಲು, ಮಡಲು ಇತ್ಯಾದಿ ಬಂದು ಪೈಪ್ನಲ್ಲಿ ಸಿಲುಕಿ ಹಾಕಿಕೊಂಡು ಸಮಸ್ಯೆಯಾಗುತ್ತಿತ್ತು. ಅದನ್ನು ಸ್ಥಳೀಯರೇ ತೆರವು ಮಾಡುತ್ತಿದ್ದರು.
ಕಸ ತೆರವು ವೇಳೆ ಸೇತುವೆಗೆ ಹಾನಿ
ಈಚೆಗಷ್ಟೇ ಇದೇ ರೀತಿ ಕಸ ಸಿಲುಕಿದ್ದು, ತೆರವು ಮಾಡಲು ಬುಲ್ಡೋಜರ್ ತರಲಾಗಿತ್ತು. ಅದನ್ನು ಬಳಸಿ ಕಸ ವಿಲೇವಾರಿ ಮಾಡುವ ವೇಳೆ ಸೇತುವೆಗೂ ಹಾನಿಯಾಗಿದೆ. ಇದರಿಂದ ಸೇತುವೆ ಬದಿಯ ತಡೆ ಬಹುತೇಕ ಕುಸಿಯುವ ಹಂತ ತಲಪಿದೆ. ತಡೆಯಿಲ್ಲದೆ ಸೇತುವೆ ಅಪಾಯಕಾರಿಯಾಗುವ ಸಾಧ್ಯತೆ ಇದೆ, ಹಾಗಾಗಿ ಸೇತುವೆಯನ್ನು ವ್ಯವಸ್ಥಿತವಾಗಿ ಮರುನಿರ್ಮಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.