Mangaluru 9 ಅಡಿ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದ ಲಕ್ಷ್ಮೀ ಕಾಮತ್!
Team Udayavani, Aug 9, 2024, 6:31 AM IST
ಮಂಗಳೂರು: ನಗರದ ಡೊಂಗರಕೇರಿಯಲ್ಲಿ ಬಾಲಕೃಷ್ಣ ನಾಯಕ್ ಅವರ ಮನೆಯ ಕೊಟ್ಟಿಗೆಯ ಬಳಿಯಲ್ಲಿದ್ದ ಸುಮಾರು 9 ಅಡಿ ಉದ್ದದ ಹೆಬ್ಬಾವೊಂದನ್ನು ಲಕ್ಷ್ಮೀ ಕಾಮತ್ ಅವರು ಸೆರೆ ಹಿಡಿದು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ರಾತ್ರಿ 9.30ರ ಸುಮಾರಿಗೆ ಬಾಲಕೃಷ್ಣ ಅವರ ಹಟ್ಟಿಯ ಬಳಿ ಹೆಬ್ಬಾವು ಪತ್ತೆಯಾಗಿತ್ತು. ವಿಷಯ ತಿಳಿದ ಸ್ಥಳೀಯರೂ ಸ್ಥಳದಲ್ಲಿ ನೆರೆದರು. ಆದರೆ ಯಾರೂ ಹೆಬ್ಬಾವನ್ನು ಹಿಡಿಯಲು ಮುಂದಾಗಲಿಲ್ಲ.
ಹಾವು ಕಟ್ಟಿಗೆಯ ರಾಶಿಯೊಳಗೆ ಹೋಗುವ ಭೀತಿ ಇತ್ತು. ಈ ವೇಳೆ ನೆರೆಮನೆ ನಿವಾಸಿ ಲಕ್ಷ್ಮೀ ಕಾಮತ್ ಅವರು, ಹೆಬ್ಟಾವನ್ನು ಸಾಹಸದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಉರಗತಜ್ಞ ಆದಿತ್ಯ ಅವರ ನೆರವಿನಿಂದ ಗೋಣಿ ಚೀಲಕ್ಕೆ ತುಂಬಿಸಿ ದೂರದ ಸುರಕ್ಷಿತ ಜಾಗಕ್ಕೆ ಬಿಟ್ಟು ಬರಲಾಯಿತು.
ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಲಕ್ಷ್ಮೀ ಕಾಮತ್ ಅವರು, ಪತಿ ರಾಘವೇಂದ್ರ ಹಾವು ಹಿಡಿಯುತ್ತಿರುವುದನ್ನು ಗಮನಿಸಿ ಅವುಗಳನ್ನು ಮುಟ್ಟುತ್ತಿದ್ದೆ. ಇದರಿಂದ ಹೆಬ್ಬಾವು ಹಿಡಿಯಲು ಧೈರ್ಯ ಸಿಕ್ಕಿತು ಎಂದು ತಿಳಿಸಿದ್ದಾರೆ.
ಮೂರು ವರ್ಷಗಳಿಂದ ಹೆಬ್ಬಾವು ಮನೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಉರಗ ತಜ್ಞರು ಸೆರೆ ಹಿಡಿದಿದ್ದರು. ಈ ಬಾರಿಯೂ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ಬರುವ ಮೊದಲೇ ಲಕ್ಷ್ಮೀ ಕಾಮತ್ ಸೆರೆ ಹಿಡಿದಿದ್ದಾರೆ. ಸುಮಾರು 9 ಅಡಿಯ ಹೆಬ್ಬಾವನ್ನು ಲಕ್ಷ್ಮೀ ಕಾಮತ್ ಧೈರ್ಯ ಮಾಡಿ ಸೆರೆ ಹಿಡಿದಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.