Congressನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ’: ಆರ್. ಅಶೋಕ್
Team Udayavani, Aug 9, 2024, 1:22 AM IST
ಶ್ರೀರಂಗಪಟ್ಟಣ: ಕಳ್ಳರನ್ನು ಪೊಲೀಸರು ಓಡಿಸಿಕೊಂಡು ಹೋದಂತೆ ನಾವು ಕಾಂಗ್ರೆಸ್ನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ ಎಂದು ವಿಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ನಮ್ಮ ಖಜಾನೆಯಲ್ಲಿದ್ದ ಬಡವರ ದುಡ್ಡನ್ನು ಕಾಂಗ್ರೆಸ್ನವರು ಲೂಟಿ ಮಾಡಿದ್ದಾರೆ. ಅವರು ಮೈಸೂರಿನತ್ತ ಹೋಗುತ್ತಿದ್ದಾರೆ. ನಾವು ಅವರನ್ನು ಹಿಡಿಯಲು ಹೋಗುತ್ತಿದ್ದೇವೆ. ನಾವು ಮೈಸೂರು ನೋಡಲು ಹೋಗುತ್ತಿಲ್ಲ ಎಂದು ಕಿಡಿಕಾರಿದರು.
ಮುಡಾದಲ್ಲಿ ಬಡವರಿಗೆ ಹಂಚಬೇಕಾದ ನಿವೇಶನಗಳನ್ನು ಕಾವಲು ಕಾಯಿರಿ ಎಂದು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ನೀನು ಬಂದಿದ್ದನ್ನೆಲ್ಲ ಬಾಚಿಕೊಳ್ಳಲು ಆರಂಭಿಸಿದ್ದೀಯಾ. ಆ ಕಡೆ ಶಾಸಕರು ವರ್ಗಾವಣೆಯಲ್ಲಿ ಹಣ ಮಾಡಲು ಮುಂದಾಗಿದ್ದಾರೆ. ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಇದನ್ನು ಇಲ್ಲಿಯೇ ಬಿಡುತ್ತಾರೆಂದು ಸಿದ್ದರಾಮಯ್ಯ ತಿಳಿದುಕೊಂಡಿರಬಹುದು. ಆದರೆ ಕಾಂಗ್ರೆಸ್ ಅವನತಿ ಆಗುವವರೆಗೂ ನಾವು ಬಿಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.